ಸಮರ್ಥ ರೀತಿಯಲ್ಲಿ ಸರಕಾರದಿಂದ ಪ್ಯಾಕೇಜ್ ಜಾರಿ
Team Udayavani, Nov 14, 2020, 1:15 AM IST
ಕೊರೊನಾ ಲಾಕ್ಡೌನ್ನಿಂದ ಹಳಿ ತಪ್ಪಿದ ಆರ್ಥಿಕತೆಯನ್ನು ಮತ್ತೆ ಹಳಿಗೆ ತರುವ ಸಲುವಾಗಿ ಕೇಂದ್ರ ಸರಕಾರ ಗುರುವಾರವಷ್ಟೇ 3ನೇ ಹಂತದ ಆರ್ಥಿಕ ಉತ್ತೇಜನಾ ಪ್ಯಾಕೇಜ್ ಘೋಷಿಸಿದೆ. ಈ ಹಿಂದಿನ ಪ್ಯಾಕೇಜ್ಗಳಲ್ಲಿ ಘೋಷಿಸಲಾದ ಯೋಜನೆಗಳ ಸ್ಥಿತಿಗತಿಯ ಮಾಹಿತಿ ಇಲ್ಲಿದೆ.
ಒಂದು ದೇಶ, ಒಂದು ಪಡಿತರ ಕಾರ್ಡ್
ಕಳೆದ ಸೆಪ್ಟಂಬರ್ನಿಂದಲೇ ಅನ್ವಯವಾಗುವಂತೆ, 28 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಯಾವುದೇ ಪಡಿತರ ಅಂಗಡಿಗಳಿಂದ ಆಹಾರಧಾನ್ಯ ಪಡೆದುಕೊಳ್ಳಲು 68.60 ಕೋಟಿ ಫಲಾನುಭವಿಗಳಿಗೆ ಅವಕಾಶ.
ಬೀದಿಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ
ಬೀದಿಬದಿ ವ್ಯಾಪಾರಿಗಳಿಗೆ ಸಾಲ ನೀಡುವ ಯೋ ಜನೆ. 27 ಲಕ್ಷ ಅರ್ಜಿಗಳ ಸ್ವೀಕಾರ. 1,373.3 ಕೋಟಿ ರೂ. ಮೌಲ್ಯದ 14 ಲಕ್ಷದಷ್ಟು ಸಾಲ ವಿತ ರಣೆ. 5 ಸಾವಿರ ಕೋಟಿ ರೂ. ಸಾಲ ವಿತರಿಸುವ ಗುರಿ.
ಕಿಸಾನ್ ಕ್ರೆಡಿಟ್ ಕಾರ್ಡ್
1.83 ಕೋಟಿ ಅರ್ಜಿಗಳ ಸ್ವೀಕಾರ. 1.57 ಕೋಟಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ. 2.50 ಕೋಟಿ ರೈತರಿಗೆ 2 ಲಕ್ಷಕೋಟಿ ರೂ. ವಿತರಣೆ ಗುರಿ.
ಪಿಎಂ ಮತ್ಸ್ಯ ಸಂಪದ ಯೋಜನೆ
ಒಟ್ಟಾರೆ 1681.3 ಕೋಟಿ ರೂ. ವೆಚ್ಚದಲ್ಲಿ 21 ರಾಜ್ಯಗಳ ಪ್ರಸ್ತಾವನೆಗೆ ಒಪ್ಪಿಗೆ. 20 ಸಾವಿರ ಕೋಟಿ ರೂ. ವಿತರಣೆಯ ಗುರಿ.
ರೈತರಿಗೆ ತುರ್ತು ಬಂಡವಾಳ
ನಬಾರ್ಡ್ನಿಂದ ರೈತರಿಗೆ ತುರ್ತು ದುಡಿಯುವ ಬಂಡವಾಳ ಯೋಜನೆಯಡಿ 25 ಸಾವಿರ ಕೋಟಿ ರೂ. ವಿತರಣೆ. 30 ಸಾವಿರ ಕೋಟಿ ರೂ. ಒದಗಿಸುವ ಟಾರ್ಗೆಟ್.
ತುರ್ತು ಸಾಲ-ಆಧರಿತ ಖಾತ್ರಿ ಯೋಜನೆ
21 ರಾಜ್ಯಗಳ ಪ್ರಸ್ತಾವದಂತೆ 1681.3 ಕೋಟಿ ರೂ. ಬಿಡುಗಡೆ. 20 ಸಾವಿರ ಕೋಟಿ ರೂ. ವಿತರಣೆಯ ಗುರಿ.
ಭಾಗಶಃ ಸಾಲ ಖಾತ್ರಿ ಯೋಜನೆ
26,889 ಕೋಟಿ ರೂ. ಪೋರ್ಟ್ಫೋಲಿಯೋ ಖರೀದಿಗೆ ಬ್ಯಾಂಕುಗಳ ಸಮ್ಮತಿ. 45 ಸಾವಿರ ಕೋಟಿ ರೂ. ಟಾರ್ಗೆಟ್.
ಎನ್ಬಿಎಫ್ಸಿ, ಎಚ್ಬಿಸಿಗೆ ವಿಶೇಷ ಲಿಕ್ವಿಡಿಟಿ ಯೋಜನೆ
7,227 ಕೋಟಿ ರೂ. ಬಿಡುಗಡೆ. 30 ಸಾವಿರ ಕೋಟಿ ರೂ. ವಿತರಣೆಯ ಗುರಿ.
ವಿದ್ಯುತ್ ವಿತರಣೆ ಕಂಪೆನಿಗಳಿಗೆ ಹಣಕಾಸು ನೆರವು
17 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 1.18 ಲಕ್ಷ ಕೋಟಿ ರೂ. ಮೌಲ್ಯದ ಸಾಲ ಬಿಡುಗಡೆ. ಈಗಾಗಲೇ 11 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 31,136 ಕೋಟಿ ರೂ. ವಿತರಣೆ. 90 ಸಾವಿರ ಕೋಟಿ ರೂ. ವಿತರಣೆಯ ಗುರಿ.
ಹಬ್ಬದ ಮುಂಗಡ
ಎಸ್ಬಿಐ ಉತ್ಸವ್ ಕಾರ್ಡ್ ವಿತರಣೆ. ಎಲ್ಟಿಸಿ ವೋಚರ್ ಯೋಜನೆಯನ್ವಯ ವೋಚರ್ ವಿತರಣೆ
ಹೆಚ್ಚುವರಿ ಬಂಡವಾಳ ವೆಚ್ಚ
ರಸ್ತೆ ಸಾರಿಗೆ ಮತ್ತು ರಕ್ಷಣಾ ಸಚಿವಾಲಯಗಳಿಗೆ 25 ಸಾವಿರ ಕೋಟಿ ರೂ. ವಿತರಣೆ. ಗುರಿ ಸಾಧನೆ.
ರಾಜ್ಯಗಳಿಗೆ ಬಂಡವಾಳ ವೆಚ್ಚ
11 ರಾಜ್ಯಗಳಿಗೆ 3,621 ಕೋಟಿ ರೂ. ಬಿಡುಗಡೆ. 12,000 ಕೋಟಿ ರೂ. ವಿತರಣೆಯ ಗುರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ