ಕರಾಚಿ ರ್ಯಾಲಿಯ ಮೇಲೆ ಸಿಂಧೂದೇಶ ಕ್ರಾಂತಿಕಾರಿ ಸೈನ್ಯದಿಂದ ಗ್ರೆನೇಡ್ ದಾಳಿ: 30 ಜನರಿಗೆ ಗಾಯ
Team Udayavani, Aug 6, 2020, 9:20 AM IST
ಕರಾಚಿ: ಇಲ್ಲಿನ ನಡೆಯುತ್ತಿದ್ದ ರ್ಯಾಲಿಯೊಂದರ ಮೇಲೆ ಬುಧವಾರ ಗ್ರೆನೇಡ್ ದಾಳಿ ನಡದಿದ್ದು, 30 ಮಂದಿ ಗಾಯಗೊಂಡಿದ್ದಾರೆ.
ಜಮ್ಮು ಕಾಶ್ಮೀರ್ ಆರ್ಟಿಕಲ್ 370 ರದ್ದತಿಗೆ ಒಂದು ವರ್ಷವಾದ ಹಿನ್ನಲೆಯಲ್ಲಿ ಈ ದಿನವನ್ನು ಕಾಶ್ಮೀರದ ಮೇಲಿನ ಸ್ವಾಯತ್ತತೆಯನ್ನು ಭಾರತ ಹಿಂದೆತೆಗುಕೊಂಡ ದಿನ ಎಂದು ಪಾಕಿಸ್ಥಾನ ಪರಿಗಣಿಸಿದ್ದು, ಅದೆ ವಾರ್ಷಿಕೋತ್ಸವದ ರಾಲಿ ಆಯೋಜಿಸಲಾಗಿತ್ತು. ಈ ವೇಳೆ ಗ್ರೆನೇಡ್ ದಾಳಿಯಾಗಿದ್ದು, 30 ಮಂದಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಸ್ಥಳೀಯ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಇವರಲ್ಲಿ ಓರ್ವ ನ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಈ ದಾಳಿಯ ಹೊಣೆಯನ್ನು ಸಿಂಧೂದೇಶ ಕ್ರಾಂತಿಕಾರಿ ಸೈನ್ಯ ಎಂಬ ಸಂಘಟನೆ ಹೊತ್ತುಕೊಂಡಿದೆ ಎಂದು ವರದಿಯಾಗಿದೆ. ಈ ಸಂಘಟನೆ ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬಂದಿದ್ದು, ಕಳೆದ ಜೂನ್ ನಲ್ಲಿ ನಾಲ್ವರ ಹತ್ಯೆಗೆ ಕಾರಣವಾಗಿತ್ತು.
ಸಿಂಧೂ ಪ್ರಾಂತ್ಯದ ಸ್ವಾತಂತ್ಯಕ್ಕಾಗಿ ಈ ಗುಂಪು ಹೋರಾಟ ನಡೆಸುತ್ತಿದೆ. ಸಿಂಧೂ ಪ್ರಾಂತ್ಯವನ್ನು ದೇಶವನ್ನಾಗಿ ಮಾಡಿ., ಕರಾಚಿಯನ್ನು ರಾಜಧಾನಿಯನ್ನಾಗಿಸ ಬೇಕು ಎಂದು ಈ ಸಂಘಟನೆ ಹೋರಾಟ ನಡೆಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!