ಈ ಉಂಗುರದ ಬೆಲೆ 75,92,838.63 ರೂ.!: ವೈಶಿಷ್ಠ್ಯವೇನು ಗೊತ್ತಾ?
ಒಂದೇ ಉಂಗುರದಲ್ಲಿ 24 ಸಾವಿರಕ್ಕೂ ಹೆಚ್ಚು ವಜ್ರ; ದಾಖಲೆ ಬರೆದ ಕೇರಳದ ಆಭರಣ ವ್ಯಾಪಾರಿ
Team Udayavani, Jul 19, 2022, 10:57 AM IST
ಕಾರಥೋಡ (ಕೇರಳ): ಸಾಮಾನ್ಯರ ಪಾಲಿಗೆ ವಜ್ರ ಗಗನಕುಸುಮವೇ ಸರಿ. ಸೆಲೆಬ್ರಿಟಿಗಳಿಗೆ ಇದು ಸಾಮಾನ್ಯ ಉಡುಗೊರೆಯ ವಸ್ತು. ಆದರೆ ಇಲ್ಲೊಬ್ಬ ಆಭರಣ ವ್ಯಾಪಾರಿ ವಜ್ರದ ಉಂಗುರ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ.
ಕೇರಳ ಮೂಲದ ಎಸ್ಡಬ್ಲ್ಯೂಎ ಡೈಮಂಡ್ಸ್ ಅದ್ಭುತ ದಾಖಲೆಯೊಂದನ್ನು ಸೃಷ್ಟಿಸಿದ್ದು, ಈ ಉಂಗುರವನ್ನು ಸುಮಾರು 24,679 ನೈಸರ್ಗಿಕ ವಜ್ರಗಳನ್ನು ಬಳಸಿ ತಯಾರಿಸಲಾಗಿದೆ.
ಅಮಿ ಎಂಬ ಅಣಬೆ ಆಕಾರದ ಉಂಗುರವನ್ನು ತಯಾರಿಸುವ ಮೂಲಕ ಕೇರಳ ಮೂಲದ ಎಸ್ಡಬ್ಲ್ಯೂಎ ಡೈಮಂಡ್ಸ್ ಕಂಪನಿ ಗಿನ್ನಿಸ್ ವಿಶ್ವ ದಾಖಲೆ (Guinness World Records) ಬರೆದಿದೆ. ಅಣಬೆಯು ಅಮರತ್ವ ಮತ್ತು ದೀರ್ಘಾಯುಷ್ಯವನ್ನು ಪ್ರತಿನಿಧಿಸುವಂತೆ ಅಮಿ ಎಂಬ ಪದವು ಸಂಸ್ಕೃತದಲ್ಲಿ ಅಮರತ್ವವನ್ನು ಪ್ರತಿನಿಧಿಸುತ್ತದೆ.
ವಿಶ್ವ ದಾಖಲೆ ಬರೆದಿರುವ ಬಗ್ಗೆ ಎಸ್ಡಬ್ಲ್ಯೂಎ ಡೈಮಂಡ್ಸ್ ತನ್ನ ಬ್ಲಾಗ್ನಲ್ಲಿ ಬರೆದುಕೊಂಡಿದ್ದು, ಅದರಲ್ಲಿ ಉಂಗುರವನ್ನು ಹೇಗೆ ತಯಾರಿಸಲಾಗಿದೆ ಎಂದು ವಿವರಿಸಲಾಗಿದೆ. ಮೊದಲಿಗೆ 41 ವಿಶಿಷ್ಟವಾದ ಅಣಬೆ ದಳಗಳನ್ನು ಹೊಂದಿರುವ ಉಂಗುರದ ಮೂಲಮಾದರಿಯನ್ನು ಪ್ಲಾಸ್ಟಿಕ್ ಅಚ್ಚು ಬಳಸಿ ವಿನ್ಯಾಸಗೊಳಿಸಲಾಗಿದೆ. ನಂತರ 3D ಮುದ್ರಣದ ಮೂಲಕ ಅದನ್ನು ಮರುಸೃಷ್ಟಿಸಲಾಗಿದೆ. ಅಚ್ಚು ದ್ರವ ಚಿನ್ನದಿಂದ ಕೂಡಿತ್ತು. ಬೇಸ್ ಪೂರ್ಣಗೊಂಡ ನಂತರ ದಳಗಳ ಪ್ರತಿ ಬದಿಯಲ್ಲಿ ವಜ್ರಗಳನ್ನು ಪ್ರತ್ಯೇಕವಾಗಿ ಕೈಯಿಂದ ಇರಿಸಲಾಗುತ್ತದೆ. ಅಂತಿಮವಾಗಿ, ಅಲಂಕೃತ ಅಣಬೆಯ ಆಕಾರವನ್ನು ವೃತ್ತಾಕಾರದ ಬ್ಯಾಂಡ್ನಲ್ಲಿ ಇರಿಸಲಾಯಿತು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನೂಪುರ್ ಶರ್ಮಾ ಹೇಳಿಕೆಯ ವಿಡಿಯೋ ನೋಡಿದ್ದಕ್ಕೆ ಯುವಕನಿಗೆ ಆರು ಬಾರಿ ಚೂರಿ ಇರಿತ!
ಎಸ್ಡಬ್ಲ್ಯೂಎ ಡೈಮಂಡ್ಸ್ ಪ್ರಕಾರ, ಸಿದ್ಧಪಡಿಸಿದ ಉಂಗುರವು 340 ಗ್ರಾಂ ತೂಗುತ್ತದೆ ಮತ್ತು ಇದರ ಬೆಲೆ $95,243 ಆಗಿದೆ. ಭಾರತದ ಮೌಲ್ಯಕ್ಕೆ ಹೋಲಿಸಿದರೆ ಆ ವಜ್ರದ ಉಂಗುರದ ಅಂದಾಜು ಬೆಲೆ 75,92,838.63 ರೂಪಾಯಿ ಆಗಿದೆ.
View this post on Instagram
ಆಭರಣದಲ್ಲಿ ಹೊಸಹೊಸ ಪ್ರಯೋಗಳನ್ನು ಮಾಡುತ್ತಾ ಒಂದಷ್ಟು ವ್ಯಾಪಾರಿಗಳು ವಿಶ್ವ ದಾಖಲೆ ಬರೆಯುತ್ತಿದ್ದಾರೆ. 2020ರಲ್ಲಿ ಹೈದರಾಬಾದ್ ಮೂಲದ ಕೊಟ್ಟಿ ಶ್ರೀಕಾಂತ್ ಎಂಬ ಆಭರಣ ವ್ಯಾಪಾರಿ, ದಿ ಡಿವೈನ್-7801 ಬ್ರಹ್ಮ ವಜ್ರ ಕಮಲಂ ಎಂಬ ಉಂಗುರವನ್ನು ತಯಾರಿಸಿದ್ದರು.
ಹಿಮಾಲಯದಲ್ಲಿ ಕಂಡುಬರುವ ಅಪರೂಪದ ಬ್ರಹ್ಮ ಕಮಲದಿಂದ ಪ್ರೇರೇಪಿತರಾಗಿ ಈ ಉಂಗುರವನ್ನು ತಯಾರಿಸಲಾಗಿದೆ. ಈ ವಜ್ರದ ಉಂಗುರ ತಯಾರಿಕೆಗೆ ಒಟ್ಟು 7,801 ವಜ್ರಗಳನ್ನು ಬಳಸಲಾಗಿದೆ. ಆ ಮೂಲಕ ವಿಶ್ವ ದಾಖಲೆ ಬರೆಯಲಾಗಿತ್ತು. ಅಲ್ಲದೆ ದಕ್ಷಿಣ ಭಾರತದಲ್ಲಿಯೇ ಸಾಧಿಸಿದ ಮೊದಲ ಗಿನ್ನಿಸ್ ದಾಖಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಅಪರೂಪದ ಬ್ರಹ್ಮ ಕಮಲಂ ವಜ್ರದ ಉಂಗುರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ