ಟ್ರಾಫಿಕ್ ಪೇದೆಗೆ ಢಿಕ್ಕಿ ಹೊಡೆದು ಕಾರಿನ ಬಾನೆಟ್ ಮೇಲೆ 100 ಮೀಟರ್ ಎಳೆದೊಯ್ದ ಚಾಲಕ
Team Udayavani, Apr 14, 2024, 9:58 AM IST
ಚಂಡೀಗಢ: ಕಾರು ಚಾಲಕನೊಬ್ಬ ಪೊಲೀಸ್ ಪೇದೆಗೆ ಢಿಕ್ಕಿ ಹೊಡೆದು ಬಾನೆಟ್ ಮೇಲೆ ಸುಮಾರು 100 ಮೀಟರ್ ವರೆಗೆ ಎಳೆದೊಯ್ದಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ.
ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ಸೆಕ್ಟರ್ 4/7 ಚೌಕ್ ನಲ್ಲಿ ಈ ಘಟನೆ ನಡೆದಿದ್ದು, ಅಜಯ್ ಪಾಲ್ ಅವರನ್ನು ಟ್ರಾಫಿಕ್ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಇದೇ ವೇಳೆ ಚೌಕ್ನಿಂದ ಸೆಕ್ಟರ್ 9ರ ಕಡೆಗೆ ಟಿಂಟೆಡ್ ಕಿಟಕಿಗಳನ್ನು ಹೊಂದಿರುವ ಬಿಳಿ ಕಾರೊಂದು ಹೋಗುತ್ತಿರುವುದು ಕಂಡುಬಂದಿದ್ದು, ಅದನ್ನು ನಿಲ್ಲಿಸುವಂತೆ ಅಜಯ್ ಪಾಲ್ ಅವರು ಹೇಳಲು ಮುಂದೆ ಬಂದಿದ್ದಾರೆ.
ಕಾರು ನಿಲ್ಲಿಸಲು ಚಾಲಕನನ್ನು ಕೇಳಿದಾಗ, ಚಾಲಕ ಪಾಲ್ ಅವರಿಗೆ ಢಿಕ್ಕಿ ಹೊಡೆದಿದ್ದಾನೆ. ಪರಿಣಾಮ ಬಾನೆಟ್ ನಲ್ಲಿ ಪೇದೆ ಸಿಲುಕಿದ್ದಾರೆ. ಕಾರಿನ ಬಾನೆಟ್ನಲ್ಲಿದ್ದ ಪೇದೆಯನ್ನು ಸುಮಾರು 100 ಮೀಟರ್ಗಳವರೆಗೆ ಎಳೆದುಕೊಂಡು ಚಾಲಕ ಹೋಗಿದ್ದಾನೆ.
ಕಾರು ಟ್ರಾಫಿಕ್ ಜಾಮ್ನಲ್ಲಿ ಸಿಲುಕಿದ ನಂತರ, ಚಾಲಕ ತನ್ನ ಕಾರನ್ನು ನಿಲ್ಲಿಸಿದ್ದಾನೆ ಮತ್ತು ಇತರ ಪೊಲೀಸರು ಅವನನ್ನು ಹಿಡಿದಿದ್ದಾರೆ.
ಘಟನೆಯಲ್ಲಿ ಕಾನ್ ಸ್ಟೇಬಲ್ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಾಲ್ ಅವರ ದೂರಿನ ಆಧಾರದ ಮೇಲೆ, ಆರೋಪಿ ಚಾಲಕನ ವಿರುದ್ಧ ಸೆಕ್ಷನ್ 279 (ಅತಿವೇಗದ ಚಾಲನೆ), 336 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯ), 337 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಕ್ರಿಯೆಯಿಂದ ನೋವುಂಟು ಮಾಡುವುದು), 186 ಅಡಿಯಲ್ಲಿ ಎಫ್ಐಆರ್ ದಾಖಲಿಸಿ, ಸೋನಿಪತ್ ಜಿಲ್ಲೆಯ ಬರೌನಾ ಗ್ರಾಮದ ನಿವಾಸಿ ಅಮಿತ್ ಎಂದು ಗುರುತಿಸಲಾದ ಆರೋಪಿಯನ್ನು ಪೊಲೀಸರು ಬಂಧಿಸಲಾಗಿದೆ ಎಂದು ಎಸ್ಎಚ್ಒ ಅವತಾರ್ ಸಿಂಗ್ ಹೇಳಿದ್ದಾರೆ.
ಆರೋಪಿ ಕಾರು ಚಾಲಕ ಜಾಮೀನು ಪಡೆದಿದ್ದು, ಪೊಲೀಸರು ಚಾಲಕನಿಗೆ ಚಲನ್ ಜಾರಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ