ನಾಸಿಕ್‌ನಲ್ಲಿ  ಭಾರೀ ಮಳೆ: ಮೂರು ಸಾವು


Team Udayavani, Aug 18, 2018, 6:00 AM IST

15.jpg

ನಾಸಿಕ್‌: ಹಲವು ದಿನಗಳ ವಿರಾಮದ ಬಳಿಕ ಉತ್ತರ ಮಹಾರಾಷ್ಟ್ರದ ನಾಸಿಕ್‌ ನಗರ ಮತ್ತು ಅದರ ಸುತ್ತ ಮುತ್ತಲಿನ ಪ್ರದೇಶ, ಯವತ್ಮಾಳ್‌, ನಂದೂರ್‌ ಬಾರ್‌ನಲ್ಲಿ ಮಳೆಯ ಪುನರಾಗಮನ ವಾಗಿದೆ. ನಂದೂರ್‌ಬಾರ್‌ನಲ್ಲಿ ಮೂವರು ಸಾವನ್ನಪ್ಪಿ, 6 ಮಂದಿ ನಾಪತ್ತೆಯಾಗಿದ್ದಾರೆ. ನಾಸಿಕ್‌ ನಗರ ಮತ್ತು ಜಿಲ್ಲೆಯ ಎಲ್ಲ 14 ತಾಲೂಕುಗಳಲ್ಲಿ ಗುರುವಾರದಿಂದ ಉತ್ತಮ ಮಳೆಯಾಗುತ್ತಿದೆ. 

ನೀರು ಬಿಡುಗಡೆ
ಅಣೆಕಟ್ಟು ಪ್ರದೇಶಗಳಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆಯು ದರ್ನಾ ಅಣೆಕಟ್ಟಿನಿಂದ 4,172 ಕ್ಯೂಸೆಕ್‌ ಮತ್ತು ಗಂಗಾಪುರ ಅಣೆಕಟ್ಟಿನಿಂದ 1,012 ಕ್ಯೂಸೆಕ್‌ನಷ್ಟು ನೀರು ಬಿಡುಗಡೆ ಮಾಡಿದೆ. ಗುರುವಾರ ಮುಂಜಾನೆ 8 ರಿಂದ ಶುಕ್ರವಾರ ಮುಂಜಾನೆ 8ರ ವರೆಗೆ ಕಳೆದ 24 ಗಂಟೆಗಳ ಅವಧಿಯಲ್ಲಿ ನಾಸಿಕ್‌ನಲ್ಲಿ 27.2 ಮಿ.ಮೀ., ಇಗತ್‌ಪುರಿಯಲ್ಲಿ 65ಮಿ.ಮೀ., ತ್ರೈಬಕೇಶ್ವರದಲ್ಲಿ 46 ಮಿ.ಮೀ., ದಿಂಡೋರಿಯಲ್ಲಿ 14 ಮಿ.ಮೀ., ಪೇಂಟ್‌ನಲ್ಲಿ 101 ಮಿ.ಮೀ., ನಿಫಾಡ್‌ 54.2 ಮಿ.ಮೀ., ಸಿನ್ನಾರ್‌ನಲ್ಲಿ 26.4 ಮಿ.ಮೀ., ಚಾಂದ್ವಾ ಡ್‌ನ‌ಲ್ಲಿ 54 ಮಿ.ಮೀ., ದೇವ್ಲಾದಲ್ಲಿ 43.4 ಮಿ.ಮೀ., ನಂದಗಾಂವ್‌ನಲ್ಲಿ 60 ಮಿ.ಮೀ., ಲೆಗಾಂವ್‌ನಲ್ಲಿ 64 ಮಿ.ಮೀ., ಯೇವ್ಲಾದಲ್ಲಿ 59 ಮಿ.ಮೀ.,ಬಾಗ್ಲಾಣ್‌ನಲ್ಲಿ 57 ಮಿ.ಮೀ., ಕಲ್ವಾಣ್‌ನಲ್ಲಿ 57 ಮಿ.ಮೀ. ಮತ್ತು ಸುರ್ಗಾ ನಾದಲ್ಲಿ 86 ಮಿ.ಮೀ. ಮಳೆ ದಾಖಲಾಗಿದೆ. ಪ್ರಸಕ್ತ ಮಾನ್ಸೂನ್‌ ಋತುವಿನಲ್ಲಿ ಜಿಲ್ಲೆಯು ಈವರೆಗೆ ಒಟ್ಟು 814.2 ಮಿ.ಮೀ. ಮಳೆ ದಾಖಲಾಗಿದೆ.

ಯವತ್ಮಾಳ್‌ ವರದಿ
ಮಹಾಮಳೆಯಿಂದ  ಯವತ್ಮಾಳ್‌ ಜಿಲ್ಲೆಯ ಗ್ರಾಮಗಳ ನದಿ, ನಾಲೆಗಳು ಉಕ್ಕಿ ಹರಿಯುತ್ತಿದ್ದು, ಅಪಾಯಕಾರಿ ಸ್ಥಿತಿಗೆ ತಲುಪಿವೆ. ಹಲವು ಗ್ರಾಮಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕೆಲವು ಗ್ರಾಮಗಳ ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ. ಇನ್ನು ಉಳಿದ ಗ್ರಾಮಗಳ ಜನರಿಗೆ  ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಸೂಚಿಸಲಾಗಿದೆ. ಯವತ್ಮಾಳ್‌ದ ಅರುಣಾವತಿ, ಪೈನ್‌ಗಂಗಾ, ಅಡಾಣಿ ನದಿಗಳು ತುಂಬಿ ಹರಿಯುತ್ತಿವೆ. ಪೈನ್‌ಗಂಗಾ ನದಿಯು ಅಪಾಯಕಾರಿ ಸ್ಥಿತಿ ಉಂಟಾಗಿದ್ದು, ಕವಠಾ ಬಜಾರ್‌, ಸಾಕೂರ್‌, ರಾಣಿಧಾನೋರಾ ಗ್ರಾಮಗಳು ಜಲಾವೃತ ಗೊಂಡಿವೆ.

ಭಾರೀ ಮಳೆಯಿಂದ ನಗರದ ನಾಲೆಗಳು ತುಂಬಿ ಹರಿಯುತ್ತಿದ್ದು,  ಮೋಮಿನ್‌ಪುರ, ಆಮದಾನಿ, ದುರ್ಗಮಂದಿರ, ಶಾಸ್ತ್ರಿನಗರಗಳಂತ ಪ್ರದೇಶಗಳಲ್ಲಿಯ ಜೋಪಡಿಗಳಿಗೆ  ನೀರು ನುಸುಳಿದ್ದು, ಜನರ‌ನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ. ನೆರೆ ಪೀಡಿತ ಜನರ ರಕ್ಷಣೆ  
ಕಾರ್ಯದಲ್ಲಿ ನಗರಾಧ್ಯಕ್ಷೆ ಅರ್ಚನಾ ಅಮೋಲ್‌ ಮಂಗಾಮ್‌, ಮುಖ್ಯ ಅಧಿಕಾರಿ ಕರಣ್‌ಕುಮಾರ್‌, ತಹಶೀಲ್ದಾರ್‌ ಸಂಜಯ್‌ ಭಸ್ಕೆ ಸೇರಿದಂತೆ ಅಧಿಕಾರಿಗಳು ಮತ್ತು ಕಾರ್ಯದರ್ಶಿ ಗಳು  ತೊಡಗಿದ್ದಾರೆ.  ದಾಭಾಡಿಯಲ್ಲಿ ನಾಲೆಗಳಲ್ಲಿ ನೀರು ತುಂಬಿ ಹರಿಯುತ್ತಿದ್ದ ಕಾರಣ ಸುಮಾರು 13 ಮನೆಗಳು ಜಲಾವೃತಗೊಂಡಿದೆ. ಕೊಸ್‌ದಾನಿ ಗ್ರಾಮ ಜಲಾವೃತ ಗೊಂಡಿದ್ದು, ತುಲಜಾಪುರಕ್ಕೆ  ಹೋಗುವ ಮಾರ್ಗದ ಸಂಚಾರ ಸ್ಥಗಿತಗೊಂಡಿದೆ. 

ಆರು ಮಂದಿ ನಾಪತ್ತೆ
ನಂದೂರ್‌ಬಾರ್‌: ಕಳೆದ ಒಂದು ರಾತ್ರಿಯಲ್ಲಿ ಸುರಿದ ಮಳೆಯಿಂದ ಮೂವರು ಸಾವನ್ನಪ್ಪಿದ್ದು, ಆರು ಮಂದಿ ನಾಪತ್ತೆಯಾದ ಪ್ರಕರಣದ ನವಾಪುರ ತಾಲೂಕಿನಲ್ಲಿ ಶುಕ್ರವಾರ ಬೆಳಕಿಗೆ ಬಂದಿದೆ. ಧಾರಾಕಾರವಾಗಿ ಸುರಿಯುತ್ತಿದ್ದ  ಮಳೆಯಿಂದ  ತಾಲೂಕಿನ ಸರ್ಪಣಿ ಮತ್ತು ರಂಗಾವಲಿ ನದಿಗಳು ಉಕ್ಕಿ ಹರಿದ ಪರಿಣಾಮ ನವಾಪುರ ನಗರವು ಜಲಾವೃತಗೊಂಡಿದೆ. ಅನೇಕ ಮನೆಗಳಿಗೆ ನೀರು ನುಗ್ಗಿದೆ. ವಾಡಿ- ಶೇವಾಡಿ ನಡುವೆಯ ಸೇತುವೆ ಮುರಿದ ಕಾರಣ ಸರ್ಪಣಿ ನದಿಯ ಪ್ರವಾಹಕ್ಕೆ ಜಮ್ನಾ ಬಾಯಿ  ಎನ್ನುವ ಮಹಿಳೆ ಸಾವನ್ನಪ್ಪಿದ್ದಾರೆ. ಅದೇ ಖೋಕ್ಸಾ ಗ್ರಾಮದಲ್ಲಿ  
ಭಾರೀ ಮಳೆಸುರಿದ ಕಾರಣ ಮನೆ ಕುಸಿದು  ಮಹಿಳೆಯೋರ್ವಳು ಸಾವನ್ನಪ್ಪಿದ್ದಾರೆ. ಆಂಚ್‌ಪಾಡಾ ಪರಿಸರದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ತೇಲಿಕೊಂಡು ಬಂದಿರುವುದು ಪತ್ತೆಯಾಗಿದೆ. ಮೀನಾಬಾಯಿ ಕಾಸಾರ, ವಾಘಳ್‌ಪಾಡಾ, ನವಾಪುರಗಳಲ್ಲಿ ಭಾರೀ ಮಳೆಯಿಂದ ಆರು ಮಂದಿ ನಾಪತ್ತೆ ಯಾಗಿದ್ದಾರೆ.

ನಗರ ಸಂಪರ್ಕ ಕಡಿತ
ಯವತ್ಮಾಳ್‌ ಜಿಲ್ಲೆಯ  ಕವಠಾ ಬಜಾರ್‌, ಸಾಕೂರ್‌,ಆಮ್ನಿ ಆಸ್ರಾ, ಮಹಾಲೂಂಗಿ, ದಾಭಾಡಿ, ಕೋರ್ಪಾ, ಪರಸೋಡಾ, ಸಾವಿ, ರಾಣಿಧಾನೋರಾ, ಅಂಜನ್‌ಖೇಡ್‌ ಗ್ರಾಮಗಳು ಜಲಾವೃತಗೊಂಡಿದ್ದು,  ನಗರದ ಸಂಪರ್ಕ ಕಳೆದುಕೊಂಡಿವೆ.

ಧಾರಾಕಾರ ಮಳೆ
ಶುಕ್ರವಾರ ಇಲ್ಲಿನ ಜಿಲ್ಲಾಡಳಿತದ ವತಿಯಿಂದ ನೀಡಲಾಗಿರುವ ಮಾಹಿತಿಯ ಪ್ರಕಾರ, ಇಗತ್‌ಪುರಿ, ತ್ರೈಬಕೇಶ್ವರ, ಸಿನ್ನಾರ್‌, ದಿಂಡೋರಿ ಮತ್ತಿತರ ತಾಲೂಕುಗಳಲ್ಲಿ ಧಾರಾಕಾರ ಮಳೆಯಾಗಿದೆ. 

ಟಾಪ್ ನ್ಯೂಸ್

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

1-weweweqwe

Manipal ಹಾಸ್ಪಿಟಲ್ಸ್‌ ಪಾಲಾದ ಮೆಡಿಕಾ ಸಿನರ್ಜಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.