ಯುವ ಭಾರತಕ್ಕೆ ರಾಹುಲ್ ಗಾಂಧಿ ಅಗತ್ಯವಿದೆಯೇ?ಕೇರಳದಲ್ಲಿ ಗುಹಾ ರಾಜಕೀಯ ವಿಶ್ಲೇಷಣೆ

ನೀವು (ಮಲಯಾಳಿ) ಯಾಕೆ ರಾಹುಲ್ ಗಾಂಧಿಯನ್ನು ಸಂಸತ್ ಗೆ ಆಯ್ಕೆ ಮಾಡಿದಿರಿ?

Team Udayavani, Jan 18, 2020, 11:28 AM IST

Ramachandra-Guha

ಕೋಝಿಕೋಡ್(ಕೇರಳ): ಭಾರತೀಯ ರಾಜಕಾರಣದಲ್ಲಿ ಐದನೇ ತಲೆಮಾರಿನ ವಂಶಾಡಳಿತದ ರಾಹುಲ್ ಗಾಂಧಿ ಯುವ ಭಾರತಕ್ಕೆ ಬೇಕಾಗಿಲ್ಲ ಎಂದು ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಅಭಿಪ್ರಾಯವ್ಯಕ್ತಪಡಿಸಿದ್ದು, ಒಂದು ವೇಳೆ ಕೇರಳದ ಮತದಾರರು 2024ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿಯನ್ನು ಪುನರಾಯ್ಕೆ ಮಾಡುವ ವಿಪತ್ತಿಗೆ ಮುಂದಾದರೆ ಕಠಿಣ ಕೆಲಸಗಾರ ಪ್ರಧಾನಿ ನರೇಂದ್ರ ಮೋದಿಗೆ ಸುಲಭವಾಗಿ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದು ಹೇಳಿದರು.

ಅವರು ಕೋಝಿಕೋಡ್ ನಲ್ಲಿ ಕೇರಳ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡುತ್ತ, ನೀವು (ಮಲಯಾಳಿ) ಯಾಕೆ ರಾಹುಲ್ ಗಾಂಧಿಯನ್ನು ಸಂಸತ್ ಗೆ ಆಯ್ಕೆ ಮಾಡಿದಿರಿ? ನನಗೆ ವೈಯಕ್ತಿಕವಾಗಿ ರಾಹುಲ್ ಗಾಂಧಿ ಮೇಲೆ ದ್ವೇಷವಿಲ್ಲ. ಅವರೊಬ್ಬ ಸಭ್ಯ ವ್ಯಕ್ತಿ, ತುಂಬಾ ಉತ್ತಮ ನಡವಳಿಕೆ ಹೊಂದಿದ್ದಾರೆ. ಆದರೆ ಯುವ ಭಾರತಕ್ಕೆ ಐದನೇ ತಲೆಮಾರಿನ ವಂಶಾಡಳಿತ ಬೇಕಾಗಿಲ್ಲ ಎಂದು ವಿಶ್ಲೇಷಿಸಿದರು.

2024ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ವಯನಾಡು ಕ್ಷೇತ್ರದಿಂದ ರಾಹುಲ್ ಗಾಂಧಿಯನ್ನು ಪುನರಾಯ್ಕೆ ಮಾಡದಂತೆ ಗುಹಾ ಕೇರಳ ಜನರಿಗೆ ಎಚ್ಚರಿಕೆ ನೀಡಿರುವುದಾಗಿ ವರದಿ ತಿಳಿಸಿದೆ.

ಒಂದು ವೇಳೆ ನೀವು 2024ರಲ್ಲಿಯೂ ರಾಹುಲ್ ಗಾಂಧಿಯನ್ನು ಪುನರಾಯ್ಕೆ ಮಾಡುವ ತಪ್ಪು ಮಾಡಿದರೆ, ಸುಲಭವಾಗಿ ಪ್ರಧಾನಿ ನರೇಂದ್ರ ಮೋದಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಯಾಕೆಂದರೆ ಅವರು ರಾಹುಲ್ ಗಾಂಧಿ ಅಲ್ಲ. ಮೋದಿ ಹದಿನೈದು ವರ್ಷಗಳ ಕಾಲ ಗುಜರಾತ್ ರಾಜ್ಯವನ್ನು ಆಳಿದ್ದಾರೆ. ಅವರಿಗೆ ಆಡಳಿತಾತ್ಮಕ ಅನುಭವವಿದೆ. ಅಷ್ಟೇ ಅಲ್ಲ ಅವರೊಬ್ಬ ಕಠಿಣ ಕೆಲಸಗಾರ. ಯುರೋಪ್ ಪ್ರವಾಸಕ್ಕೆ ತೆರಳಿದಾಗಲೂ ರಜೆ ತೆಗೆದುಕೊಳ್ಳದೆ ದುಡಿಯುವ ವ್ಯಕ್ತಿ. ನನ್ನ ನಂಬಿ ನಾನು ಹೇಳುತ್ತಿರುವುದು ಗಂಭೀರವಾದ ವಿಷಯವಾಗಿದೆ ಎಂದರು.

ಆದರೆ ಒಂದು ವೇಳೆ ರಾಹುಲ್ ಗಾಂಧಿ ಹೆಚ್ಚು ಬುದ್ಧಿವಂತನಾದರೆ, ಹೆಚ್ಚು ಕಠಿಣ ಕಾರ್ಯ ಮಾಡಿದರೆ, ಯುರೋಪ್ ಪ್ರವಾಸದಲ್ಲಿ ಯಾವತ್ತೂ ರಜೆ ತೆಗೆದುಕೊಳ್ಳದೇ ಹೋದರೆ ಸ್ವಯಂ ವ್ಯಕ್ತಿ(ಮೋದಿ)ಗೆ ಐದನೇ ತಲೆಮಾರಿನ ವಂಶಾಡಳಿತ ಲಾಭವಾಗದಂತೆ ಮಾಡಬಹುದಾಗಿದೆ ಎಂದು ಗುಹಾ ಹೇಳಿದರು.

ಭಾರತ ಇನ್ಮುಂದೆ ಹೆಚ್ಚು ಪ್ರಜಾಪ್ರಭುತ್ವವಾದಿಯಾಗುತ್ತಿದೆ ಮತ್ತು ಊಳಿಗಮಾನ್ಯ ಕಡಿಮೆಯಾಗುತ್ತಿದೆ. ಆದರೆ ಗಾಂಧಿಗಳಿಗೆ ಇದು ಗೊತ್ತಾಗುತ್ತಿಲ್ಲ. ನೀವು (ಸೋನಿಯಾ) ದಿಲ್ಲಿಯಲ್ಲಿದ್ದೀರಿ, ನಿಮ್ಮ ಅಧಿಪತ್ಯ ಹೆಚ್ಚು ಹೆಚ್ಚು ಕುಸಿಯುತ್ತಿದೆ. ಆದರೂ ನಿಮ್ಮ ವಂದಿ ಮಾಗದಿಗರು ನೀವೇ ಬಾದಶಹಾ ಎಂದು ಬಹುಪರಾಕ್ ಹೇಳುತ್ತಿದ್ದಾರೆ ಎಂದು ಗುಹಾ ಪ್ರಸ್ತುತ ರಾಜಕೀಯವನ್ನು ವಿಶ್ಲೇಷಿಸಿದರು.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.