ವಲಸೆ ಹಕ್ಕಿಗಳ ಗುಟ್ಟು ರಟ್ಟು!
Team Udayavani, Jun 25, 2021, 7:10 AM IST
ಹೊಸದಿಲ್ಲಿ: ನಮ್ಮ ದೇಶದಲ್ಲಿ ಸದ್ಯದಲ್ಲೇ ಆಗಮಿಸುವ ಚಳಿಗಾಲದಲ್ಲಿ ರಾಜ್ಯದ ರಂಗನತಿಟ್ಟು ಸೇರಿದಂತೆ ದೇಶದ ಹಲವಾರು ಪಕ್ಷಿಧಾಮಗಳಲ್ಲಿ ವಲಸೆ ಹಕ್ಕಿಗಳ ಕಲರವ ಇಡೀ ಪ್ರಾಂತ್ಯದಲ್ಲೆಲ್ಲಾ ಅನುರಣಿಸುತ್ತದೆ. ದೂರದ ಆಫ್ರಿಕಾ, ಅಮೆರಿಕ ಖಂಡಗಳಿಂದ ಸಾವಿರಾರು ಮೈಲುಗಳ ದೂರ ಕ್ರಮಿಸಿ ಬರುವ ಈ ಹಕ್ಕಿಗಳಿಗೆ ದಾರಿ ತೋರುವುದಾದರೂ ಹೇಗೆ? ಪುನಃ ಹೇಗೆ ಅವು ತಮ್ಮ ನೆಲೆಗಳಿಗೆ ಕರಾರುವಾಕ್ ಆಗಿ ಹಿಂದಿರುಗುತ್ತವೆ? ಮರು ವರ್ಷ, ಪುನಃ ಹೇಗೆ ತಾವು ಹಿಂದೆ ಬಂದಿದ್ದ ಪ್ರದೇಶಗಳಿಗೆ ವಲಸೆ ಬರುತ್ತವೆ? ಎಂಬ ಪ್ರಶ್ನೆಗಳು ಮೂಡುವುದು ಸಹಜ. ಶತಮಾನಗಳಿಂದ ಚಾಲ್ತಿಯಲ್ಲಿರುವ ಇಂಥ ಸೋಜಿಗಗಳಿಗೆ ಆಕ್ಸ್ಫರ್ಡ್ ಹಾಗೂ ಓಲ್ಡನ್ಬರ್ಗ್ ವಿಶ್ವವಿದ್ಯಾನಿಲಯಗಳ ಪಕ್ಷಿ ತಜ್ಞರು ಉತ್ತರ ಕಂಡುಕೊಂಡಿದ್ದಾರೆ.
ದಿಕ್ಕು ತೋರುವ “ಕ್ರಿಪ್ಟೋಕ್ರೋಮ್ಸ್’: “ನೇಚರ್’ ಎಂಬ ವೈಜ್ಞಾನಿಕ ನಿಯತ ಕಾಲಿಕೆಯಲ್ಲಿ ಪ್ರಕಟವಾಗಿರುವ ಸಂಶೋಧನ ವರದಿಯ ಪ್ರಕಾರ, ಪಕ್ಷಿಗಳ ಕಣ್ಣಿನ ಅಕ್ಷಿಪಟಲದಲ್ಲಿ ಕ್ರಿಪ್ಟೋಕ್ರೋಮ್ಸ್ ಎಂಬ ಪ್ರೋಟೀನ್ ಇದ್ದು, ಅದು ಭೂಮಿಯ ಅಯಸ್ಕಾಂತೀಯ ಧ್ರುವಗಳ ಶಕ್ತಿಯನ್ನು ಅರಿಯಬಲ್ಲವಾಗಿವೆ. ಇದರ ಸಹಾಯದಿಂದ ತಾವಿರುವ ಕಡೆ ತಮಗೆ ಪ್ರತಿಕೂಲ ಹವಾಮಾನ ಬಂದೊದಗುವುದನ್ನು ಪಕ್ಷಿಗಳು ಮೊದಲೇ ಗ್ರಹಿಸಬಲ್ಲವು. ಅದರ ಆಧಾರದ ಮೇಲೆ, ತಾವಿರುವ ಜಾಗವನ್ನು ಯಾವಾಗ ಬಿಡಬೇಕು, ಯಾವ ದಾರಿಯನ್ನು ಆರಿಸಿಕೊಂಡು ಯಾವ ದಿಕ್ಕಿನೆಡೆಗೆ ಹಾರಿ ಎಲ್ಲಿ ಹೋಗಿ ಸೇರಬೇಕು ಎಂಬುದನ್ನೂ ಅವು ಅರಿಯುತ್ತವೆ. ಹಿಂದೆ ತಾವು ಬಂದಿದ್ದ ನೆಲೆಗಳತ್ತ ಮತ್ತೆ ಪ್ರಯಾಣ ಬೆಳೆಸಲು ಕ್ರಿಪ್ಟೋಕ್ರೋಮ್ಸ್ ನೆರವಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ