ಪಿಎಂ ಮೋದೀನ ಅಪ್ಪಿಕೊಳ್ಳಿ;12,000 ಕೋಟಿ ಲೂಟಿ ಮಾಡಿ : ರಾಹುಲ್
Team Udayavani, Feb 15, 2018, 3:16 PM IST
ಹೊಸದಿಲ್ಲಿ : ಬಿಲಿಯಾಧಿಪತಿ ನೀರವ್ ಮೋದಿ ಪಂಜಾಬ್ ನ್ಯಾಶನಲ್ ಬ್ಯಾಂಕಿಗೆ ಹಾಕಲಾಗಿರುವ ಬಹುಕೋಟಿ ಪಂಗನಾಮ ಹಗರಣದಲ್ಲಿ ಓರ್ವ ಮುಖ್ಯ ಆರೋಪಿಯಾಗಿ ದೇಶದಿಂದ ಪಲಾಯನ ಮಾಡಿರುವ ಹಿನ್ನೆಲೆಯಲ್ಲಿ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೊಸತೊಂದು ವಾಕ್ಸಮರವನ್ನು ಆರಂಭಿಸಿದ್ದಾರೆ.
ಟ್ವಿಟರ್ನಲ್ಲಿ ರಾಹುಲ್ “ಗೈಡ್ ಟು ಲೂಟ್ ಇಂಡಿಯಾ’ ಎಂಬ ತಲೆಬರಹದಡಿ ಹೀಗೆ ಬರೆದಿದ್ದಾರೆ : 1. ಪಿಎಂ ಮೋದಿಯನ್ನು ಅಪ್ಪಿಕೊಳ್ಳಿ, 2. ದಾವೋಸ್ನಲ್ಲಿ ಮೋದಿ ಜತೆಗೆ ಕಾಣಿಸಿಕೊಳ್ಳಿ. ಈ ಶಕ್ತಿಯನ್ನು ಬಳಸಿಕೊಂಡು (ಎ) 12,000 ಕೋಟಿ ರೂ. ಲೂಟಿ ಮಾಡಿ; (ಬಿ) ಮಲ್ಯ ಹಾಗೆ ಸರಕಾರ ಬೇರೆ ಕಡೆ ನೋಡುತ್ತಿರುವಾಗ ದೇಶದಿಂದ ಪರಾರಿಯಾಗಿ.
ಪಂಜಾಬ್ ನ್ಯಾಶನಲ್ ಬ್ಯಾಂಕ್ ನೀಡಿರುವ ದೂರಿನಲ್ಲಿ ನೀರವ್ ಮತ್ತು ಮತ್ತು ಇತರರು ಬ್ಯಾಂಕಿಗೆ ಬಹುಕೋಟಿ ಪಂಗನಾಮ ಹಾಕಿದ್ದಾರೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈಗ ನೀರವ್ ಮೋದಿ ಅವರ ಮುಂಬಯಿಯಲ್ಲಿನ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸುತ್ತಿದ್ದಾರೆ.ಅಲ್ಲದೆ ಸುಮಾರು 10 ತಾಣಗಳಲ್ಲಿ ದಾಳಿ ನಡೆಸುತ್ತಿದ್ದಾರೆ.
ಪಂಜಾಬ್ ನ್ಯಾಶನಲ್ ಬ್ಯಾಂಕ್ ನಿನ್ನೆ ಬುಧವಾರ ಹೇಳಿಕೆಯೊಂದನ್ನು ಹೊರಡಿಸಿ ಬ್ಯಾಂಕಿಗೆ ಆಯ್ದ ಕೆಲ ಹೈ ಪ್ರೊಫೈಲ್ ಗ್ರಾಹಕರ ಖಾತೆ ಮೂಲಕ 11,400 ಕೋಟಿ ರೂ.ಗಳ ಪಂಗನಾಮದ ಹಗರಣ ನಡೆದಿರುವುದನ್ನು ತಾನು ಪತ್ತೆ ಹಚ್ಚಿರುವುದಾಗಿ ಹೇಳಿದೆ. ಅಂತೆಯೇ ಸಿಬಿಐ, ಜಾರಿ ನಿರ್ದೇಶನಾಲಯ ಈ ಹಗರಣದ ತನಿಖೆ ನಡೆಸುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP ಸ್ವಾತಿ ಮಲಿವಾಲ್ ಸುರಕ್ಷಿತವೇ? :ಕೇಜ್ರಿವಾಲ್ ಜನತೆಗೆ ಸತ್ಯ ತಿಳಿಸಬೇಕು: ಬಿಜೆಪಿ
Union Minister ಜ್ಯೋತಿರಾದಿತ್ಯ ಸಿಂದಿಯಾ ತಾಯಿ ಮಾಧವಿ ರಾಜೇ ವಿಧಿವಶ
Excise scam: ಸಿಸೋಡಿಯಾ ನ್ಯಾಯಾಂಗ ಬಂಧನ ಮೇ 30 ರವರೆಗೆ ವಿಸ್ತರಣೆ
BJP ಮತ್ತೆ ಅಧಿಕಾರಕ್ಕೆ ಬಂದರೆ ದೇಶವನ್ನು 22 ಬಿಲಿಯನೇರ್ಗಳು ನಡೆಸುತ್ತಾರೆ: ರಾಹುಲ್
Kejriwal ವಿರುದ್ಧ ಎಫ್ ಐಆರ್ ದಾಖಲಿಸಬೇಕು: ಸ್ವಾತಿ ಮಲಿವಾಲ್ ಮಾಜಿ ಪತಿ
MUST WATCH
ಹೊಸ ಸೇರ್ಪಡೆ
Chikkamagaluru: ಸರ್ಕಾರಿ ಜಾಗಕ್ಕೆ ಎರಡು ಸಮುದಾಯಗಳ ನಡುವೆ ಮಾರಾಮಾರಿ
AAP ಸ್ವಾತಿ ಮಲಿವಾಲ್ ಸುರಕ್ಷಿತವೇ? :ಕೇಜ್ರಿವಾಲ್ ಜನತೆಗೆ ಸತ್ಯ ತಿಳಿಸಬೇಕು: ಬಿಜೆಪಿ
ನಾಯಕನ ಜೊತೆ ಜಗಳ: ರಿಲೀಸ್ಗೂ ಮುನ್ನ ಸಿನಿಮಾವನ್ನು ಆನ್ಲೈನ್ನಲ್ಲಿ ಲೀಕ್ ಮಾಡಿದ ನಿರ್ದೇಶಕ
Union Minister ಜ್ಯೋತಿರಾದಿತ್ಯ ಸಿಂದಿಯಾ ತಾಯಿ ಮಾಧವಿ ರಾಜೇ ವಿಧಿವಶ
Excise scam: ಸಿಸೋಡಿಯಾ ನ್ಯಾಯಾಂಗ ಬಂಧನ ಮೇ 30 ರವರೆಗೆ ವಿಸ್ತರಣೆ