ವಿಪಕ್ಷ ಅಧಿಕಾರಕ್ಕೆ ಬಂದರೆ ಒಂದೊಂದು ದಿನ ಒಬ್ಬೊಬ್ಬರು ಪ್ರಧಾನಿ: ಶಾ
Team Udayavani, Jan 30, 2019, 1:53 PM IST
ಕಾನ್ಪುರ : ‘ಈ ಲೋಕಸಭಾ ಚುನಾವಣೆಯಲ್ಲಿ ಒಂದೊಮ್ಮೆ ಮಹಾ ಮೈತ್ರಿ ಕೂಟ (ಮಹಾ ಘಟಬಂಧನ) ಅಧಿಕಾರಕ್ಕೆ ಬಂದರೆ ವಾರದಲ್ಲಿ ಪ್ರತೀ ದಿನ ಒಬ್ಬ ಹೊಸ ಪ್ರಧಾನಿಯನ್ನು ಜನರು ಕಾಣಲಿದ್ದಾರೆ’ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
‘ಮಹಾ ಘಟಬಂಧನ ಕಟ್ಟಿಕೊಂಡಿರುವ ವಿರೋಧ ಪಕ್ಷಗಳು ತಮ್ಮ ಪ್ರಧಾನಿ ಅಭ್ಯರ್ಥಿ ಯಾರೆಂಬುದನ್ನು ಘೋಷಿಸಬೇಕು; ಹಾಗೆ ಮಾಡದೇ ಹೋದಲ್ಲಿ ವಾರದಲ್ಲಿ ಸೋಮವಾರ ಮಾಯಾವತಿ, ಮಂಗಳವಾರ ಅಖೀಲೇಶ್, ಬುಧವಾರ ಮಮತಾ ಬ್ಯಾನರ್ಜಿ, ಗುರುವಾರ ಶರದ್ ಪವಾರ್, ಶುಕ್ರವಾರ ದೇವೇಗೌಡ, ಶನಿವಾರ ಎಂ ಕೆ ಸ್ಟಾಲಿನ್ ಪ್ರಧಾನಿ ಆಗಿರುತ್ತಾರೆ; ಭಾನುವಾರ ದಿನ ಪ್ರಧಾನಿ ಪಟ್ಟಕ್ಕೆ ರಜಾ ದಿನವಾಗಿರುತ್ತದೆ’ ಎಂದು ಅಮಿತ್ ಶಾ ಕಾನ್ಪುರದಲ್ಲಿ ಹೇಳಿದರು.
‘ವಿರೋಧ ಪಕ್ಷಗಳ ಈ ನಾಯಕರು ಬದಲಾವಣೆ ತರಲು ಬಯಸಿದ್ದಾರೆ; ಆದರೆ ಅವರಿಗೆ ನಾಯಕನಿಲ್ಲ’ ಎಂದು ಅಮಿತ್ ಶಾ, ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದರು. ಮುಂಬರುವ ಲೋಕಸಭಾ ಚುನಾವಣೆಗಾಗಿ ತಳಮಟ್ಟದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸುವ ಪ್ರಯತ್ನದಲ್ಲಿ ಅವರು ಈ ಮಾತುಗಳನ್ನು ಕಾರ್ಯಕರ್ತರಿಗೆ ಹೇಳಿದರು.
‘ಬಿಜೆಪಿಗೆ ನಾಲ್ಕು ಬಿ ಗಳಿವೆ. ಅವೆಂದರೆ ಭಡ್ತಾ ಭಾರತ್, ಬನ್ತಾ ಭಾರತ್. ಅದೇ ವಿಪಕ್ಷಗಳ ಬಳಿ ನಾಲ್ಕು ಬಿ ಗಳಿವೆ. ಅವೆಂದರೆ ಬುವಾ, ಭತೀಜಾ, ಭಾಯಿ, ಬೆಹೆನ್ ಎಂದು ವ್ಯಂಗ್ಯವಾಡಿದ ಅಮಿತ್ ಶಾ, ವಿಪಕ್ಷಗಳ ವಂಶ ರಾಜಕಾರಣವನ್ನು ಟೀಕಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CSIR: ಪ್ರತೀ ಸೋಮವಾರ ಇಸ್ತ್ರಿ ಹಾಕದ ವಸ್ತ್ರ ಧರಿಸಲು ಅವಕಾಶ!
West Bengal; ಶಿಕ್ಷಕರ ನೇಮಕ ಹಗರಣ: ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ
Bijnor; ಸಿಗರೇಟಿಂದ ಸುಟ್ಟು ಪತಿಗೆ ಚಿತ್ರಹಿಂಸೆ: ಸಿಸಿಟಿವಿ ವಿಡಿಯೋ ಆಧರಿಸಿ ಪತ್ನಿ ಸೆರೆ
ಕಾಶ್ಮೀರದಲ್ಲಿ ಎನ್ಕೌಂಟರ್: ಇಬ್ಬರು ಉಗ್ರರ ಹತ್ಯೆ
Manipur; ಹಸುವಿಗೆ ಗುಂಡಿಟ್ಟು ಕೊಂದ ಕ್ರೂರಿ!: ವ್ಯಾಪಕ ಆಕ್ರೋಶ
MUST WATCH
ಹೊಸ ಸೇರ್ಪಡೆ
CSIR: ಪ್ರತೀ ಸೋಮವಾರ ಇಸ್ತ್ರಿ ಹಾಕದ ವಸ್ತ್ರ ಧರಿಸಲು ಅವಕಾಶ!
West Bengal; ಶಿಕ್ಷಕರ ನೇಮಕ ಹಗರಣ: ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ
Bijnor; ಸಿಗರೇಟಿಂದ ಸುಟ್ಟು ಪತಿಗೆ ಚಿತ್ರಹಿಂಸೆ: ಸಿಸಿಟಿವಿ ವಿಡಿಯೋ ಆಧರಿಸಿ ಪತ್ನಿ ಸೆರೆ
KKR ತಂಡಕ್ಕೆ ಮರಳಲಿರುವ ಅಫ್ಘಾನ್ ಬ್ಯಾಟರ್ ರಹ್ಮಾನುಲ್ಲ ಗುರ್ಬಾಝ್
G. Parameshwara ಕಾನೂನಾತ್ಮಕ ಸಂಸ್ಥೆ ಮೇಲೆ ಮಾಜಿ ಸಿಎಂ ಅನುಮಾನಪಟ್ಟರೆ ಹೇಗೆ?