ಜಲ್ಲಿಕಟ್ಟು ನಿಷೇಧಿಸುವುದಾದ್ರೆ, ಬಿರಿಯಾನಿನೂ ನಿಷೇಧಿಸಿ; ಕಮಲ್
Team Udayavani, Jan 9, 2017, 7:03 PM IST
ಚೆನ್ನೈ: ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಜಲ್ಲಿಕಟ್ಟು ನಿಷೇಧ ಕ್ರಮವನ್ನು ಕಟುವಾಗಿ ಟೀಕಿಸಿರುವ ದಕ್ಷಿಣ ಭಾರತದ ಪ್ರಸಿದ್ಧ ನಟ, ಖ್ಯಾತ ನಿರ್ದೇಶಕ ಕಮಲ್ ಹಾಸನ್, ಜಲ್ಲಿಕಟ್ಟು ಹಿಂಸೆಯ ಕ್ರೀಡೆ ಎಂದು ಹೇಳುವವರು ಬಿರಿಯಾನಿಯನ್ನೂ ನಿಷೇಧಿಸಬೇಕು ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಚೆನ್ನೈನಲ್ಲಿ ಇಂಡಿಯಾ ಟುಡೇ ವತಿಯಿಂದ ನಡೆದ ಕನ್ ಕ್ಲೇವ್ ನಲ್ಲಿನ ಸಂದರ್ಶನದಲ್ಲಿ ಕಮಲ್ ಹಾಸನ್, ಜಲ್ಲಿಕಟ್ಟು ತಮಿಳುನಾಡಿನ ಸಾಂಸ್ಕೃತಿಕ ಕ್ರೀಡೆಯಾಗಿದೆ, ಒಂದು ವೇಳೆ ನಿಮಗೆ ಜಲ್ಲಿಕಟ್ಟು ನಿಷೇಧಿಸಲೇಬೇಕು ಅಂತಾದ್ರೆ, ಬಿರಿಯಾನಿಯನ್ನೂ ನಿಷೇಧಿಸಬೇಕು. ನಾನು ಜಲ್ಲಿಕಟ್ಟು ಕ್ರೀಡೆಯ ದೊಡ್ಡ ಅಭಿಮಾನಿ. ನಾನು ಹಲವಾರು ಬಾರಿ ಜಲ್ಲಿಕಟ್ಟು ಕ್ರೀಡೆ ಆಡಿರುವುದಾಗಿ ಹೇಳಿದರು.
ಜಲ್ಲಿಕಟ್ಟು ಹಿಂಸೆಯ ಕ್ರೀಡೆಯಾಗಿದ್ದು ಅದನ್ನು ನಿಷೇಧಿಸಬೇಕೆಂದು ಕೋರಿ ಪ್ರಾಣಿದಯಾ ಸಂಘ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರ ಹಿನ್ನೆಲೆಯಲ್ಲಿ 2014ರಲ್ಲಿ ಸುಪ್ರೀಂಕೋರ್ಟ್ ಜಲ್ಲಿಕಟ್ಟು ಕ್ರೀಡೆಯನ್ನು ನಿಷೇಧಿಸಿತ್ತು.
ಏತನ್ಮಧ್ಯೆ ಪೊಂಗಲ್ ಹಬ್ಬದ ಆಚರಣೆ ಸಮೀಪಿಸುತ್ತಿದ್ದು, ಜಲ್ಲಿಕಟ್ಟು ಕ್ರೀಡೆ ಮೇಲಿನ ನಿಷೇಧವನ್ನು ರದ್ದುಪಡಿಸುವಂತೆ ತಮಿಳುನಾಡು ಸಿಎಂ ಪನ್ನೀರ್ ಸೆಲ್ವಂ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ
Lok Sabha; ರಾಯ್ಬರೇಲಿ, ಅಮೇಠಿ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್!