ಕೊಲೆ ಕೇಸಲ್ಲಿ ನಿರ್ಭೀತಿಯ ಸಾಕ್ಷಿ ನುಡಿದಾತನಿಗೆ ಪೊಲೀಸ್ ಪ್ರಶಸ್ತಿ
Team Udayavani, Jan 9, 2017, 4:45 PM IST
ಬುಲಂದ್ಶಹರ್, ಉ.ಪ್ರ. : ಇಲ್ಲಿನ ಬರಾರಿ ಗ್ರಾಮದಲ್ಲಿ 9 ವರ್ಷಗಳ ಹಿಂದೆ ನಡೆದಿದ್ದ ಒಂದೇ ಕುಟುಂಬದ 9 ಮಂದಿಯ ಕೊಲೆ ಕೇಸಿನಲ್ಲಿ , ಜೀವ ಬೆದರಿಕೆ ಹಾಗೂ ಹಲ್ಲೆಯನ್ನು ಲೆಕ್ಕಿಸದೆ ಧೈರ್ಯದಿಂದ ಸಾಕ್ಷಿ ನುಡಿದಿದ್ದ ಅಮರ್ಪಾಲ್ ಲೋಧಿ ಎಂಬವರನ್ನು ಉತ್ತರ ಪ್ರದೇಶದ ಪೊಲೀಸ್ ಮಹಾ ನಿರ್ದೇಶಕ ಸೂರ್ಯ ಕುಮಾರ್ ಅವರು ಪ್ರಶಂಸಾ ಪತ್ರ ನೀಡಿ ಶಾಲು ಹೊದೆಸಿ ಗೌರವಿಸಿದ್ದಾರೆ.
9 ವರ್ಷಗಳ ಹಿಂದೆ ಬರಾರಿ ಗ್ರಾಮದ ಸುಖವೀರ್ ಸಿಂಗ್ ಎಂಬವರ ಕುಟುಂಬದ 9 ಮಂದಿಯನ್ನು ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಆತನ ನೆರೆಯವನಾಗಿದ್ದ ರಣವೀರ್ ಸಿಂಗ್ ಎಂಬಾತ ದಾರುಣವಾಗಿ ಕೊಂದಿದ್ದ. ಈ ಕೇಸಿನಲ್ಲಿ ಲೋಧಿ ಪ್ರಮುಖ ಪ್ರಾಸಿಕ್ಯೂಶನ್ ಸಾಕ್ಷಿದಾರರಾಗಿದ್ದರು.
ಪ್ರತಿಕೂಲ ಸನ್ನಿವೇಶದಲ್ಲೂ ಧೃತಿಗೆಡದೆ, ಪ್ರಾಣ ಭಯ ಲೆಕ್ಕಿಸದೆ, ತನ್ನ ಮೇಲಿನ ಮಾರಣಾಂತಿಕ ಹಲ್ಲೆಗೂ ಅಂಜದೆ, ಪ್ರಾಸಿಕ್ಯೂಶನ್ ಸಾಕ್ಷಿದಾರ ಲೋಧಿ ನಿರ್ಣಾಯಕ ಸಾಕ್ಷಿ ಹೇಳಿದ ಕಾರಣ ಆರೋಪಿ ರಣವೀರ್ ಸಿಂಗ್ಗೆ ನ್ಯಾಯಾಯಲವು ಮರಣ ದಂಡನೆಯನ್ನು ವಿಧಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malabar group ಬಗ್ಗೆ ಅಪಪ್ರಚಾರ: ಮುಂಬಯಿ ಹೈಕೋರ್ಟ್ ಕಠಿನ ತೀರ್ಪು
Election; ವೋಟಿಗಾಗಿ ತಮಿಳರಿಗೆ ಮೋದಿ ಅವಹೇಳನ: ಸಿಎಂ ಸ್ಟಾಲಿನ್ ಕಿಡಿ
Sambit Patra; ಜಗನ್ನಾಥನೇ ಮೋದಿ ಭಕ್ತ ಎಂದಿದ್ದಕ್ಕೆ 3 ದಿನ ಉಪವಾಸ ಪ್ರಾಯಶ್ಚಿತ್ತ: ಪಾತ್ರಾ
Loksabha: ಈ ಬಾರಿ 2004ರ ರಿಸಲ್ಟ್ ಮರುಕಳಿಸಲಿದೆ: ಜೈರಾಂ ರಮೇಶ್
CPM ನಾಯಕನ ಹತ್ಯೆ ಸಂಚು: ಕಾಂಗ್ರೆಸ್ನ ಸುಧಾಕರನ್ಗೆ ರಿಲೀಫ್