ಚೀನದ ವಿರುದ್ಧ ಈಗ ಜಲ ಸಮರ
ಬ್ರಹ್ಮಪುತ್ರಾ ನದಿಗೆ ಅಣೆಕಟ್ಟು ನಿರ್ಮಿಸಿ ಸಡ್ಡು ಹೊಡೆಯಲು ಮುಂದಾದ ಭಾರತ
Team Udayavani, Dec 2, 2020, 6:21 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಬ್ರಹ್ಮಪುತ್ರಾ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲು ಮುಂದಾಗಿರುವ ಚೀನಕ್ಕೆ ತಕ್ಕ ಪಾಠ ಕಲಿಸಲು ಭಾರತ ಸಜ್ಜಾಗಿದೆ. ಅರುಣಾಚಲ ಪ್ರದೇಶದಲ್ಲಿ ಇದೇ ನದಿಗೆ 10 ಗಿಗಾವ್ಯಾಟ್ ಜಲವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಅಣೆಕಟ್ಟು ನಿರ್ಮಿಲು ಭಾರತವೂ ತಯಾರಿ ನಡೆಸುತ್ತಿದೆ.
ಬ್ರಹ್ಮಪುತ್ರಾ ನದಿಗೆ ಅಣೆಕಟ್ಟು ನಿರ್ಮಾಣ ಮಾಡಲು ಚೀನ ಸಿದ್ಧತೆ ನಡೆಸಿದೆ. ಈ ಅಣೆಕಟ್ಟು ನಿರ್ಮಾಣವಾದಲ್ಲಿ ಭಾರತ ಮತ್ತು ಬಾಂಗ್ಲಾದೇಶ ಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಆದರೂ ಆಕ್ಷೇಪಗಳನ್ನು ಬದಿಗೊತ್ತಿ ಅಣೆಕಟ್ಟು ನಿರ್ಮಿಸಲು ಚೀನ ಮುಂದಾಗಿದೆ. ಭಾರತ ಅದಕ್ಕೆ ತಕ್ಕ ಪಾಠ ಕಲಿಸಲು ತಯಾರಿ ನಡೆಸಿದೆ ಎಂದು ಕೇಂದ್ರ ಜಲಶಕ್ತಿ ಸಚಿವಾಲಯದ ಆಯುಕ್ತ ಟಿ.ಎಸ್. ಮಿಶ್ರಾ ಹೇಳಿದ್ದಾರೆ.
ಅಣೆಕಟ್ಟು ನಿರ್ಮಾಣಕ್ಕೆ ಚೀನ ಮುಂದಾಗಿರುವುದರಿಂದ ನಾವೂ ದೊಡ್ಡದಾದ ಅಣೆಕಟ್ಟು ನಿರ್ಮಾಣ ಮಾಡಲೇಬೇಕು. ಇಲ್ಲದಿದ್ದರೆ ಭಾರತಕ್ಕೆ ಅಪಾಯ ಹೆಚ್ಚು ಎಂದು ಮಿಶ್ರಾ ತಿಳಿಸಿದ್ದಾರೆ.
ಬ್ರಹ್ಮಪುತ್ರಾ ನದಿಗೆ ಚೀನದಲ್ಲಿ ಯರ್ಲುಂಗ್ ಸ್ಯಾಂಗ್ದೋ ಎನ್ನಲಾಗುತ್ತದೆ. ಇದು ಟಿಬೆಟ್ನಲ್ಲಿ ಹುಟ್ಟಿ, ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ಮೂಲಕ ಹರಿದು, ಬಾಂಗ್ಲಾ ಸೇರುತ್ತದೆ. ಚೀನ ಈ ಅಣೆಕಟ್ಟು ನಿರ್ಮಾಣ ಮಾಡಿದರೆ ಭಾರತಕ್ಕೆ ದಿಢೀರ್ ಪ್ರವಾಹದಂಥ ಅಪಾಯಗಳು ಉಂಟಾಗುತ್ತವೆ ಎಂಬುದು ಮಿಶ್ರಾ ಅವರ ಹೇಳಿಕೆ.
ಕೇಂದ್ರಕ್ಕೆ ಪ್ರಸ್ತಾವ
ಡ್ಯಾಂ ನಿರ್ಮಾಣ ಕುರಿತ ಪ್ರಸ್ತಾವನೆಯನ್ನು ಈಗಾಗಲೇ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ. ಸರಕಾರ ಅತೀ ಆದ್ಯತೆ ಮೇರೆಗೆ ಪ್ರಸ್ತಾವವನ್ನು ಪರಿಶೀಲಿಸಿದೆ ಎಂದು ಟಿ.ಎಸ್. ಮಿಶ್ರಾ ಹೇಳಿದ್ದಾರೆ. ಡ್ಯಾಂ ನಿರ್ಮಿಸುವ ಚೀನ ಮತ್ತು ಭಾರತದ ಪ್ರಸ್ತಾವನೆಯಿಂದಾಗಿ ಹೊಸ ವಿವಾದ ಆರಂಭವಾಗಬಹುದು ಎಂಬುದು ತಜ್ಞರ ಆತಂಕ. ಸದ್ಯ ಎರಡೂ ದೇಶಗಳ ವೈಮನಸ್ಸಿಗೆ ಲಡಾಖ್ ಕೇಂದ್ರ ಬಿಂದುವಾಗಿದೆ. ಮುಂದೆ ಈ ಡ್ಯಾಂ ನಿರ್ಮಾಣ ವಿಚಾರವೇ ಕೇಂದ್ರಬಿಂದು ಆಗ
ಬಹುದು ಎಂದಿದ್ದಾರೆ.
ಚೀನಕ್ಕೆ ಚಳಿ ಕಾಟ
ಲಡಾಖ್ ಘರ್ಷಣೆಯ ಅನಂತರ ಭಾರತ ಮತ್ತು ಚೀನದ ಸೇನೆಗಳು ಅಲ್ಲೇ ನೆಲೆಯೂರಿವೆ. ಆದರೆ ಸದ್ಯ ಚಳಿಗಾಲ ಚೀನದ ಸೈನಿಕರನ್ನು ಹೆಚ್ಚು ಬಾಧಿಸುತ್ತಿದೆ. ಹೀಗಾಗಿ ಅಲ್ಲಿರುವ ಚೀನದ ಸೈನಿಕರನ್ನು ಪ್ರತಿದಿನವೂ ಬದಲಾವಣೆ ಮಾಡಲಾಗುತ್ತಿದೆ ಎಂದು ಭಾರತ ಸೇನೆಯ ಮೂಲಗಳು ತಿಳಿಸಿವೆ. ಆದರೆ ಭಾರತೀಯ ಸೈನಿಕರು ವಿಶೇಷ ತರಬೇತಿ ಹೊಂದಿದ್ದಾರೆ, ಅಲ್ಲದೆ ಬೆಚ್ಚಗಿನ ಟೆಂಟ್ಗಳೂ ಇವೆ. ಹೀಗಾಗಿ ಭಾರತದ ಯೋಧರು ದೀರ್ಘಾವಧಿ ವರೆಗೆ ಮುಂಚೂಣಿ ನೆಲೆಯಲ್ಲೇ ಗಸ್ತು ಕಾಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ