ಕೆಲಸದ ಆಮಿಷ, ನಕಲಿ ಪತ್ರಕ್ಕೆ ಮೋಸ ಹೋಗಬೇಡಿ..ಭಾರತೀಯ ಸೇನೆ ಟ್ವೀಟ್ ನಲ್ಲಿ ಎಚ್ಚರಿಕೆ!
Team Udayavani, Jul 31, 2019, 6:31 PM IST
ನವದೆಹಲಿ: ಭಾರತೀಯ ಸೇನೆಯಲ್ಲಿ ನೇರ ನೇಮಕಾತಿ ಮಾಡುತ್ತೇವೆ ಎಂದು ಹೇಳಿ ನಕಲಿ ಪತ್ರವನ್ನು ಬಳಸಿಕೊಂಡು ಜನರನ್ನು ವಂಚಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು, ಯಾವುದೇ ಕಾರಣಕ್ಕೂ ಇಂತಹ ಮೋಸಕ್ಕೆ ಬಲಿಯಾಗಬೇಡಿ ಎಂದು ಭಾರತೀಯ ಸೇನೆ ಬುಧವಾರ ಎಚ್ಚರಿಕೆ ಪ್ರಕಟಣೆಯನ್ನು ನೀಡಿದೆ.
ಜನರು ಇಂತಹ ಮೋಸದ ಬಗ್ಗೆ ಎಚ್ಚರದಿಂದ ಇರಬೇಕು. ಯಾವುದೇ ಕಾರಣಕ್ಕೂ ಇಂತಹ ಆಮಿಷ, ಮೋಸಕ್ಕೆ ಸಿಲುಕಿಕೊಳ್ಳಬಾರದು ಎಂದು ಭಾರತೀಯ ಸೇನೆ ತಿಳಿಸಿದೆ.
ಹಲವಾರು ಮಂದಿ ವಂಚಕರು ಈಗಾಗಲೇ ಭಾರತೀಯ ಸೇನೆಯ ನಕಲಿ ಪತ್ರವನ್ನು ಬಳಸಿಕೊಂಡು, ಭಾರತೀಯ ಸೇನೆಯಲ್ಲಿ ನೇರ ನೇಮಕಾತಿ ಮಾಡುವುದಾಗಿ ಜನರನ್ನು ಮೋಸಗೊಳಿಸುತ್ತಿದ್ದಾರೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದು. ಈ ಬಗ್ಗೆ ಜನರು ಎಚ್ಚರದಿಂದ ಇರಬೇಕು ಎಂದು ಹೇಳಿದೆ.