ಚೀನ ಕಡಲಿಗೆ ಇಳಿದಿತ್ತು ಭಾರತದ ಸಮರ ನೌಕೆ!
Team Udayavani, Aug 31, 2020, 6:41 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಗಾಲ್ವಾನ್ ಘರ್ಷಣೆಯ ಬೆನ್ನಿಗೇ ಭಾರತೀಯ ನೌಕಾಪಡೆಯು ತನ್ನ ಮುಂಚೂಣಿಯ ಸಮರ ನೌಕೆಯೊಂದನ್ನು ದಕ್ಷಿಣ ಚೀನ ಸಮುದ್ರಕ್ಕೆ ಕಳುಹಿಸುವ ಮೂಲಕ ಚೀನವನ್ನು ವ್ಯೂಹಾತ್ಮಕವಾಗಿ ಕಟ್ಟಿ ಹಾಕಿತ್ತು ಎಂಬ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
ಗಾಲ್ವಾನ್ನಿಂದ ಚೀನದ ಪಡೆಗಳನ್ನು ಹಿಂದೆ ಸರಿಸಲು ಒತ್ತಡ ಹೇರುವ ಕಾರ್ಯತಂತ್ರದ ಭಾಗವಾಗಿ ಭಾರತ ಈ ಕ್ರಮ ಕೈಗೊಂಡಿತ್ತು. ಚೀನಕ್ಕೆ ಭಾರತದ ಯುದ್ಧನೌಕೆ ನಿಯೋಜನೆ ತಲೆನೋವಾಗಿ ಕಾಡಿತ್ತು.
ಊಹಿಸಿದಂತೆಯೇ ಭಾರತದ ಈ ದಿಟ್ಟ ಕ್ರಮವನ್ನು ಚೀನವು ರಾಜತಾಂತ್ರಿಕ ಮಾತುಕತೆಗಳಲ್ಲಿ ನಿರಂತರವಾಗಿ ಆಕ್ಷೇಪಿಸಿತ್ತು.
ಈ ನಿಯೋಜನೆಯನ್ನು ರಹಸ್ಯವಾಗಿ, ಅಷ್ಟೇ ತರಾತುರಿಯಲ್ಲಿ ನಡೆಸಲಾಗಿತ್ತು ಎಂದು ಸರಕಾರದ ಮೂಲಗಳು ‘ಎಎನ್ಐ’ಗೆ ತಿಳಿಸಿವೆ.
ಜಲಾಂತರ್ಗಾಮಿ ಖರೀದಿ
ದಕ್ಷಿಣ ಚೀನ ಸಮುದ್ರ ಸಹಿತ ಸಮಗ್ರವಾಗಿ ತನ್ನ ಬಲವರ್ಧನೆಗೆ ಮುಂದಾಗಿರುವ ಭಾರತೀಯ ನೌಕಾ ಪಡೆಯು 55 ಸಾವಿರ ಕೋ.ರೂ. ವೆಚ್ಚದಲ್ಲಿ 6 ಜಲಾಂತರ್ಗಾಮಿ ನೌಕೆಗಳ ಖರೀದಿಗೆ ಮುಂದಾಗಿದೆ. ಈ ಸಂಬಂಧ ಬಿಡ್ಡಿಂಗ್ ಪ್ರಕ್ರಿಯೆ ಅಕ್ಟೋಬರ್ನಲ್ಲಿ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…