ಪ್ರಯಾಣಿಕರಿಗೆ ಥಳಿತ: ಕ್ಷಮೆ ಕೇಳಿದ ಇಂಡಿಗೋ
Team Udayavani, Nov 9, 2017, 7:20 AM IST
ಹೊಸದಿಲ್ಲಿ: ನಾಗರಿಕ ವಿಮಾನಯಾನ ಸಂಸ್ಥೆ ಇಂಡಿಗೋದ ಸಿಬಂದಿ ಹಾಗೂ ಪ್ರಯಾಣಿಕನ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ವಿಮಾನಯಾನ ಸಂಸ್ಥೆ ಬುಧವಾರ ಸರಕಾರಕ್ಕೆ ಕ್ಷಮೆ ಕೇಳಿದೆ.
ಆದರೆ ಉದ್ಯೋಗಿ ತನ್ನ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಹೇಳಿಕೊಂಡಿದೆ. ಕಳೆದ ತಿಂಗಳು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನಿಗೆ ಸಿಬಂದಿ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ವರದಿ ನೀಡುವಂತೆ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಇಂಡಿಗೋಗೆ ಕೇಳಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸ್ಥೆಯು, ಘಟನೆಯ ಬಗ್ಗೆ ಕ್ಷಮೆ ಕೇಳುತ್ತೇವೆ. ಅದೇ ದಿನವೇ ಪ್ರಯಾಣಿಕರಲ್ಲಿ ಕ್ಷಮೆ ಕೇಳಲಾಗಿದೆ ಮತ್ತು ಸಂಬಂಧಿತ ಸಿಬಂದಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಅಡುಗೆ ವಿಭಾಗದ ಲಿಫ್ಟ್ನಿಂದ ದೂರ ಹೋಗುವಂತೆ ಕೇಳಿಕೊಳ್ಳಲಾಗಿತ್ತು. ಅಲ್ಲಿ ಕರ್ಕಶ ಶಬ್ದದಿಂದಾಗಿ ಸಿಬಂದಿ ಕೂಗಿದ್ದಾರೆ. ಈ ವೇಳೆ ಪ್ರಯಾಣಿಕ ಹಾಗೂ ಸಿಬಂದಿ ಮಧ್ಯೆ ಘರ್ಷಣೆ ಉಂಟಾಗಿದೆ ಎಂದು ಸಂಸ್ಥೆ ಹೇಳಿದೆ. ಅಲ್ಲದೆ ವಿಡಿಯೋ ಚಿತ್ರೀರಿಸಿದ ಸಿಬಂದಿಯನ್ನುಸಂಸ್ಥೆ ಅಮಾನತು ಮಾಡಿದೆ.