ದಾವೂದ್ ಸಹೋದರ ಕಸ್ಕರ್ ಆಸ್ಪತ್ರೆಯಿಂದ ಮರಳಿ ಜೈಲಿಗೆ
Team Udayavani, May 29, 2018, 11:26 AM IST
ಮುಂಬಯಿ : ನಿನ್ನೆ ಸೋಮವಾರ ರಾತ್ರಿ ಹಠಾತ್ ಅನಾರೋಗ್ಯದ ಕಾರಣಕ್ಕೆ ಜೆ ಜೆ ಆಸ್ಪತ್ರೆಗೆ ಒಯ್ಯಲ್ಪಟ್ಟಿದ್ದ ದಾವೂದ್ ಇಬ್ರಾಹಿಂ ನ ಸಹೋದರ ಇಕ್ಬಾಲ್ ಕಸ್ಕರ್ ನನ್ನು ಇಂದು ಮಂಗಳವಾರ ಥಾಣೆಯ ಕೇಂದ್ರೀಯ ಬಂಧೀಖಾನೆಗೆ ಮರಳಿ ತರಲಾಗಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.
ನಿನ್ನೆ ರಾತ್ರಿ ಕಸ್ಕರ್ ತನಗೆ ಜೋರಾಗಿ ಎದೆ ನೋಯುತ್ತಿದೆ; ತಲೆ ಸುತ್ತಿ ಬರುತ್ತಿದೆ ಎಂದು ಜೈಲು ಅಧಿಕಾರಿಗಳಲ್ಲಿ ಹೇಳಿಕೊಂಡಿದ್ದ. ಅಂತೆಯೇ ಆತನನ್ನು ಕೂಡಲೇ ರಾತ್ರಿ 10 ಗಂಟೆಯ ವೇಳೆಗೆ ಮುಂಬಯಿಯ ಬೈಕುಲಾದಲ್ಲಿನ ಸರಕಾರಿ ಜೆ ಜೆ ಆಸ್ಪತ್ರೆಗೆ ಒಯ್ಯಲಾಯಿತು.ವೈದ್ಯರು ಆತನಿಗೆ ಅಗತ್ಯ ಚಿಕಿತ್ಸೆಯನ್ನು ನೀಡಿದರು.
ಚಿಕಿತ್ಸೆಯ ಬಳಿಕ ಕಸ್ಕರ್ ಆರೋಗ್ಯ ಸುಧಾರಿಸಿರುವುದಾಗಿ ವೈದ್ಯರು ದೃಢೀಕರಿಸಿದರು. ಆ ಪ್ರಕಾರ ಇಂದು ಆತನನ್ನು ಮರಳಿ ಜೈಲಿಗೆ ತರಲಾಯಿತು ಎಂದು ಅಧಿಕಾರಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Onion ರಫ್ತು ನಿಷೇಧ ತೆರವು: ಕಳೆದ ವರ್ಷಕ್ಕಿಂತ ಕಡಿಮೆ ಉತ್ಪಾದನೆ ಸಾಧ್ಯತೆ
UNICEF ಇಂಡಿಯಾಗೆ ಕರೀನಾ ಕಪೂರ್ ರಾಯಭಾರಿ
Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ
Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ
Mumbai Airport ; 12.74 ಕೆಜಿ ಚಿನ್ನಾಭರಣ ಜಪ್ತಿ, ಐವರು ಪ್ರಯಾಣಿಕರ ಬಂಧನ