ಮಾ.24ರಂದು ದಾಳಿ, ತಾಕತ್ತಿದ್ದರೆ ತಡೆಯಿರಿ: ಯೋಗಿಗೆ ಐಸಿಸ್ ಬೆದರಿಕೆ
Team Udayavani, Mar 22, 2017, 4:50 PM IST
ವಾರಾಣಸಿ : ಇದೇ ಮಾರ್ಚ್ 24ರಂದು ಪೂರ್ವಾಂಚಲದಲ್ಲಿ ನಾವು ವಿನಾಶವನ್ನು ಉಂಟುಮಾಡಲಿದ್ದೇವೆ; ತಾಕತ್ತಿದ್ದರೆ ತಡೆಯಿರಿ’ ಎಂದು ಎಚ್ಚರಿಸುವ ಐಸಿಸ್ ಉಗ್ರ ಸಂಘಟನೆಯದ್ದೆಂದು ಹೇಳಲಾದ ಪತ್ರವೊಂದು ವಾರಾಣಸಿಯ ಮಿರ್ಜಾಮುರಾದ್ ನಲ್ಲಿ ಪತ್ತೆಯಾಗಿದ್ದು ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಈ ಮೂಲಕ ಹೊಸ ಉಗ್ರ ಸವಾಲೊಂದು ಎದುರಾಗಿದೆ.
ಐಸಿಸ್ ಸಹಿ ಇರುವ ಈ ಬೆದರಿಕೆ ಪತ್ರದಲ್ಲಿ ಪಾಕಿಸ್ಥಾನ್ ಜಿಂದಾಬಾದ್ ಎಂಬ ಘೋಷಣೆಯೂ ಇದೆ.
ರಾಜ್ಯ ಪೊಲೀಸ್ ಇಲಾಖೆ ಮತ್ತು ಗುಪ್ತಚರ ದಳ ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿದೆ. ಕಾರಣ ಇದು ಪ್ರಧಾನಿ ನರೇಂದ್ರ ಮೋದಿ ಅವರು ಸಂಸದೀಯ ಕ್ಷೇತ್ರದಲ್ಲೇ ಪತ್ತೆಯಾಗಿದೆ.
ಪೊಲೀಸರು ಈ ಬಗ್ಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಕೇಸು ದಾಖಲಿಸಿಕೊಂಡಿದ್ದು ಸ್ಥಳೀಯರನ್ನು ಪ್ರಶ್ನಿಸುತ್ತಿದ್ದಾರೆ ಎಂದು ಗ್ರಾಮಾಂತರ ಎಸ್ಪಿ ಆಶಿಶ್ ತಿವಾರಿ ದೃಢೀಕರಿಸಿದ್ದಾರೆ.
ಈ ವರ್ಷದ ಆದಿಯಲ್ಲಿ ಪ್ರಧಾನಿ ಮೋದಿ ಹಾಗೂ ರಕ್ಷಣಾ ಸಚಿವ ಮನೋಹರ್ ಪರ್ರೀಕರ್ ಅವರನ್ನು ಕೊಲ್ಲುವ ಬೆದರಿಕೆಯ ಐಸಿಸ್ ಪತ್ರ ಪತ್ತೆಯಾಗಿತ್ತು. ದೇಶದಲ್ಲಿ ಗೋಹತ್ಯೆಯನ್ನು ನಿಷೇಧಿಸಲಾಗಿರುವುದಕ್ಕೆ ವ್ಯಕ್ತವಾದ ಆಕ್ರೋಶ ಅದಾಗಿತ್ತೆಂದು ತಿಳಿಯಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು