ISRO;ಉಪಗ್ರಹ ಕಕ್ಷೆ ಎತ್ತರಕ್ಕೆ ದೇಸಿ ಎಲೆಕ್ಟ್ರಿಕ್ ವ್ಯವಸ್ಥೆ: ಅನುಕೂಲತೆಯೇನು?
Team Udayavani, Mar 10, 2024, 6:19 AM IST
ಹೊಸದಿಲ್ಲಿ: ಇಸ್ರೋ ಮತ್ತೊಂದು ಮೈಲುಗಲ್ಲು ಸ್ಥಾಪಿಸಲು ಸಜ್ಜಾಗಿದೆ. ವಿದ್ಯುತ್ಚಾಲಿತ ನೋದನ ವ್ಯವಸ್ಥೆ (ಎಲೆಕ್ಟ್ರಿಕ್ ಪ್ರೊಪಲ್ಶನ್ ಸಿಸ್ಟಂ)ಯನ್ನು ಇಸ್ರೋ ದೇಶೀಯವಾಗಿ ಅಭಿವೃದ್ಧಿಪಡಿಸಿದ್ದು, ಪ್ರಸಕ್ತ ವರ್ಷದ ದ್ವಿತೀಯಾರ್ಧದಲ್ಲಿ ಉಡಾವಣೆಯಾಗಲಿರುವ ಟಿಡಿಎಸ್-01 ಉಪಗ್ರಹದಲ್ಲಿ ಇದನ್ನು ದೇಶಕ್ಕೆ ಪರಿಚಯಿಸಲಿದೆ.
ಉಪಗ್ರಹಗಳ ಕಕ್ಷೆ ಎತ್ತರಿಸುವ ಪ್ರಕ್ರಿಯೆಗಳಿಗೆ ಈ ವಿದ್ಯುತ್ಚಾಲಿತ ಪ್ರೊಪಲ್ಶನ್ ವ್ಯವಸ್ಥೆ ಬಳಸಲಾಗುತ್ತದೆ. ಇದು 300 ಮಿಲಿ ನ್ಯೂಟನ್ ಥÅಸ್ಟರ್ ಅನ್ನು ಹೊಂದಿರುತ್ತದೆ ಎಂದು ಇಸ್ರೋ ತಿಳಿಸಿದೆ.
ಪ್ರಸ್ತುತ ಇಸ್ರೋ ಉಪಗ್ರಹಗಳನ್ನು ಕಕ್ಷೆಗೆ ಎತ್ತರಿಸುವಂಥ ಪ್ರಕ್ರಿಯೆ ನಡೆಸಲು ರಾಸಾಯನಿಕ ನೋದನ ವ್ಯವಸ್ಥೆಯನ್ನು ಬಳಸುತ್ತಿದೆ. ಇನ್ನು ಮುಂದೆ, ಇಂಥ ಪ್ರಕ್ರಿಯೆಗಳಿಗೆ ಸಾಂಪ್ರದಾಯಿಕ ವ್ಯವಸ್ಥೆಯ ಬದಲು ವಿದ್ಯುತ್ಚಾಲಿತ ವ್ಯವಸ್ಥೆ ಬಳಸುವುದು ಇಸ್ರೋ ಉದ್ದೇಶ. ಇದು ಸಾಧ್ಯವಾದರೆ, ಭವಿಷ್ಯದಲ್ಲಿ ರಾಸಾಯನಿಕ ಇಂಧನಗಳ ಮೇಲಿನ ಇಸ್ರೋ ಅವಲಂಬನೆ ತಗ್ಗಲಿದೆ.
ರಾಸಾಯನಿಕ ಪ್ರೊಪೆಲ್ಲೆಂಟ್ಗಳಿಗೆ ಹೋಲಿಸಿದರೆ ಇ-ಪ್ರೊಪಲ್ಶನ್ ವ್ಯವಸ್ಥೆಯು ಹೆಚ್ಚು ಕಾರ್ಯದಕ್ಷತೆ ಹೊಂದಿದೆ.
“ಅಗ್ನಿಬಾನ್ ರಾಕೆಟ್’ ನ್ನು ಉಡಾವಣೆ ಮಾಡಲು ಸಕಲ ಸಿದ್ಧತೆ
ಐಐಟಿ ಮದ್ರಾಸ್ನ ಸಹಕಾರದೊಂದಿಗೆ ಚೆನ್ನೈಯ ಖಾಸಗಿ ಸಂಸ್ಥೆ “ಅಗ್ನಿಕುಲ ಕಾಸ್ಮೋಸ್’ ಸಿದ್ಧಪಡಿಸಿರುವ “ಅಗ್ನಿಬಾನ್ ರಾಕೆಟ್’ ನ್ನು ಉಡಾವಣೆ ಮಾಡಲು ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಇದು ಇಸ್ರೋ ಉಡಾ ವಣೆ ಮಾಡುತ್ತಿರುವ 2ನೇ ಖಾಸಗಿ ರಾಕೆಟ್ ಆಗಿದೆ. ಇದೊಂದು ತ್ರೀಡಿ ಪ್ರಿಟಿಂಗ್ ರಾಕೆಟ್ ಆಗಿದ್ದು, ಮಾ.22ರಿಂದ 28ರ ಅವಧಿಯಲ್ಲಿ ಉಡಾವಣೆಯಾಗುವ ಸಾಧ್ಯತೆ ಇದೆ ಎಂದು ಕಂಪೆನಿ ಹೇಳಿದೆ. ಶ್ರೀಹರಿಕೋಟಾದಲ್ಲಿ ನಿರ್ಮಾಣ ಮಾಡಲಾಗಿರುವ ಖಾಸಗಿ ಲಾಂಚ್ಪ್ಯಾಡ್ ಮೂಲಕ ಈ ಉಡಾವಣೆ ನಡೆಯಲಿದೆ. ಇದು 2 ವಿಭಾಗಗಳನ್ನು ಹೊಂದಿರುವ ರಾಕೆಟ್ ಆಗಿದ್ದು, 100 ಕೆ.ಜಿ. ತೂಕದ ಪೇಲೋಡನ್ನು 700 ಕಿ.ಮೀ. ದೂರಕ್ಕೆ ಹೊತ್ತೂಯ್ಯಬಲ್ಲದು. 2022ರ ನ.19ರಂದು ಹೈದರಾಬಾದ್ ಮೂಲದ ಸ್ಕೈರೂಟ್ ಸಂಸ್ಥೆ ಮೊದಲ ಬಾರಿಗೆ ಖಾಸಗಿ ರಾಕೆಟ್ನ್ನು ಉಡಾವಣೆ ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
MUST WATCH
ಹೊಸ ಸೇರ್ಪಡೆ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
Desi Swara: ಅಪಹಾಸ್ಯ ನೀಡಿದ ಅದೃಷ್ಟ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ