JNU ದೇಶದ್ರೋಹ ಪ್ರಕರಣ: ಪಟಿಯಾಲಾ ಕೋರ್ಟ್ ನಿಂದ ಏಳು ಆರೋಪಿಗಳಿಗೆ ಜಾಮೀನು
ಕನ್ಹಯ್ಯ ಕುಮಾರ್, ಉಮರ್ ಖಾಲಿದ್ ಮತ್ತು ಅನಿರ್ಬನ್ ಭಟ್ಟಾಚಾರ್ಯಗೆ ಜಾಮೀನು ನೀಡಿತ್ತು.
Team Udayavani, Mar 15, 2021, 2:50 PM IST
ನವದೆಹಲಿ: ಜವಾಹರಲಾಲ್ ನೆಹರೂ ಯೂನಿರ್ವಸಿಟಿಯ(ಜೆಎನ್ ಯು) ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಆರೋಪಿಗಳಿಗೆ ದಿಲ್ಲಿಯ ಪಟಿಯಾಲಾ ಹೌಸ್ ಕೋರ್ಟ್ ಸೋಮವಾರ (ಮಾರ್ಚ್ 15) ಜಾಮೀನು ಮಂಜೂರು ಮಾಡಿದೆ.
ಜೆಎನ್ ಯು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಆರೋಪಿಗಳ ಇತರೆ ದಾಖಲೆಗಳು ಮತ್ತು ಆರೋಪ ಪಟ್ಟಿಯ ಪ್ರತಿಯನ್ನು ನೀಡುವಂತೆ ಪ್ರಾಸಿಕ್ಯೂಷನ್ ಗೆ ಮುಖ್ಯ ಮೆಟ್ರೋಪಾಲಿಟಿಯನ್ ಮ್ಯಾಜಿಸ್ಟ್ರೇಟ್ ಪಂಕಜ್ ಶರ್ಮಾ ಆದೇಶ ನೀಡಿದ್ದಾರೆ.
ಪಟಿಯಾಲಾ ಹೌಸ್ ಕೋರ್ಟ್ ಆರೋಪಿಗಳಾದ ಆಕೀಬ್ ಹುಸೈನ್, ಮುಜೀಬ್ ಹುಸೈನ್ ಗಟ್ಟೂ, ಮುನೀಬ್ ಹುಸೈನ್ ಗಟ್ಟೂ, ಉಮರ್ ಗುಲ್, ರಾಯೀಯ ರಸೂಲ್, ಖಾಲಿದ್ ಬಶೀರ್ ಭಟ್, ಬಶ್ರಾತ್ ಅಲಿಗೆ ತಲಾ ವೈಯಕ್ತಿಕ 25 ಸಾವಿರ ರೂಪಾಯಿ ಬಾಂಡ್ ಆಧಾರದ ಮೇಲೆ ಜಾಮೀನು ಮಂಜೂರು ಮಾಡಿರುವುದಾಗಿ ತಿಳಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೋರ್ಟ್ ಪ್ರಮುಖ ಆರೋಪಿಗಳಾದ ಕನ್ಹಯ್ಯ ಕುಮಾರ್, ಉಮರ್ ಖಾಲಿದ್ ಮತ್ತು ಅನಿರ್ಬನ್ ಭಟ್ಟಾಚಾರ್ಯಗೆ ಜಾಮೀನು ನೀಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್