ಜುಹೂ ಬೀಚ್ ದಡಕ್ಕೆ ತಂದು ಎಸೆದ ಕಸ ಬರೋಬ್ಬರಿ 430 ಟನ್! ಸ್ವಚ್ಛಗೊಳಿಸಿದ ಬಿಎಂಸಿ
Team Udayavani, Jun 25, 2019, 1:26 PM IST
ಮುಂಬೈ:ನಿಸರ್ಗದ ನಿಯಮ ಹೇಗಿರುತ್ತೆ ಎಂಬುದಕ್ಕೆ ಸಾಕ್ಷಿ ಮುಂಬೈ ಜುಹೂ ಬೀಚ್ ನಲ್ಲಿ ರಾಶಿ, ರಾಶಿಯಾಗಿ ಬಂದು ಬಿದ್ದ ಕಸ! ಏಟಿಗೆ ಎದಿರೇಟು ಎಂಬಂತೆ ಸಮುದ್ರಕ್ಕೆ ಎಸೆದ ಪ್ಲಾಸ್ಟಿಕ್, ಕಸ, ಕಡ್ಡಿಗಳೆನ್ನೆಲ್ಲಾ ದಡಕ್ಕೆ ತಂದು ಎಸೆದಿದೆ. ಇದರಿಂದಾಗಿ ಜುಹೂ ಬೀಚ್ ಡಂಪಿಂಗ್ ಯಾರ್ಡ್ನಂತೆ ಕಾಣಿಸುತ್ತಿತ್ತಲ್ಲದೇ, ಕೆಟ್ಟ ವಾಸನೆ ಬೀಸುತ್ತಿತ್ತು!
ಕಳೆದ ಒಂದು ವಾರದಿಂದ ಬೃಹತ್ ಪ್ರಮಾಣದಲ್ಲಿ ಅಲೆಗಳು ರಾಶಿ, ರಾಶಿ ಕಸವನ್ನು ತಂದು ದಡದಲ್ಲಿ ಚೆಲ್ಲಿವೆ. ಸ್ಥಳೀಯರು, ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋವನ್ನು ಹಾಕುವ ಮೂಲಕ ಬಿಎಂಸಿಯ ಗಮನ ಸೆಳೆದಿದ್ದರು.
ಕೂಡಲೇ ಕಾರ್ಯಪ್ರವೃತ್ತವಾದ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್(ಬಿಎಂಸಿ) ಹಗಲು ರಾತ್ರಿ ಜುಹೂ ಬೀಚ್ ನಲ್ಲಿ ಬಿದ್ದಿದ್ದ ಕಸವನ್ನು ಸ್ವಚ್ಚಗೊಳಿಸಿದ್ದರು. ಸಿಬ್ಬಂದಿಗಳು, ಮೆಷಿನ್ ಗಳ ಮೂಲಕ ಬರೋಬ್ಬರಿ 450 ಟನ್ ಕಸವನ್ನು ಬಿಎಂಸಿ ಸಾಗಿಸಿತ್ತು ಎಂದು ವರದಿ ತಿಳಿಸಿದೆ.
ಮುಂಬೈನ ಜುಹೂ ಬೀಚ್ ನಲ್ಲಿ ಭಾರೀ ಪ್ರಮಾಣದಲ್ಲಿ ಕಸದ ರಾಶಿ ಬಿದ್ದಿರುವುದು ಇದೇ ಮೊದಲ ಬಾರಿಯದ್ದಾಗಿಲ್ಲ. 2018ರ ಜುಲೈನಲ್ಲಿ ಅರೇಬಿಯನ್ ಸಮುದ್ರ ಟನ್ ಗಟ್ಟಲೇ ಕಸವನ್ನು ದಡಕ್ಕೆ ತಂದು ಸೇರಿಸಿತ್ತು. ಇದರಲ್ಲಿ ಬಹುತೇಕ ಪ್ಲಾಸ್ಟಿಕ್ ಸೇರಿಕೊಂಡಿದ್ದರಿಂದ ಮಹಾರಾಷ್ಟ್ರ ಸರ್ಕಾರ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಹೇರಿತ್ತು.
ಪರಿಸರದ ಕಾಳಜಿಯುಳ್ಳ ನೂರಾರು ಜನರು, ಎನ್ ಜಿಓಗಳು ಮುಂಬೈ ಬೀಚ್ ಗಳ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ಸಮುದ್ರದ ದಂಡೆ ಮೇಲೆ ಕಸ, ಪ್ಲಾಸ್ಟಿಕ್ ಅನ್ನು ಎಸೆಯಬೇಡಿ ಎಂಬುದನ್ನು ಸಾರ್ವಜನಿಕರಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ. ಆದರೆ ಕಸ ಎಸೆಯುವ ಪ್ರವೃತ್ತಿ ಹಾಗೆಯೇ ಮುಂದುವರಿದಿದೆ ಎಂದು ಎನ್ ಜಿಓ ಅಸಮಾಧಾನ ವ್ಯಕ್ತಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್ ಎಫ್ ಕೆನಡಿ ಹಿಟ್ಲರ್ ನನ್ನು ಬಂಧಿಸಿದ್ದು!
CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Patanjali Ads case:ಖುದ್ದು ಹಾಜರಾಗಿ- ಬಾಬಾ ರಾಮ್ ದೇವ್, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್
Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್ ಗೆ RLJP ಮುಖಂಡ ಪರಾಸ್ ರಾಜೀನಾಮೆ
MUST WATCH
ಹೊಸ ಸೇರ್ಪಡೆ
Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್ ಎಫ್ ಕೆನಡಿ ಹಿಟ್ಲರ್ ನನ್ನು ಬಂಧಿಸಿದ್ದು!
ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್ ರೋಲ್ ನಲ್ಲಿ ಫಾಫಾ
ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ
Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ
CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್