30 ವರ್ಷಗಳ ಹಿಂದೆ ತಂದೆ ಮಾಧವರಾವ್ ನಿರ್ವಹಿಸಿದ್ದ ಖಾತೆಯನ್ನೇ ಪಡೆದ ಜ್ಯೋತಿರಾದಿತ್ಯ ಸಿಂಧಿಯಾ
Team Udayavani, Jul 8, 2021, 7:51 AM IST
ಹೊಸದಿಲ್ಲಿ: ಅಂತೂ ಹಲವು ಅಚ್ಚರಿಗಳ ನಡುವೆ ಕೇಂದ್ರ ಸಚಿವ ಸಂಪುಟ ಪುನಾರಚನೆಯಾಗಿದೆ. ಹಲವು ಸಚಿವರ ರಾಜೀನಾಮೆ ಮತ್ತು ಹಲವು ಹೊಸ ಮುಖಗಳ ಪ್ರಮಾಣ ವಚನಕ್ಕೆ ಬುಧವಾರದ ಕಾರ್ಯಕ್ರಮ ಸಾಕ್ಷಿಯಾಗಿದೆ.
ಕಳೆದ ತಿಂಗಳಿನಿಂದ ಸಂಪುಟ ವಿಸ್ತರಣೆ ಮಾತು ಕೇಳಿದಾಗೆಲ್ಲಾ ಮೊದಲ ಕೇಳಿಬರುತ್ತಿದ್ದ ಹೆಸರು ಮಧ್ಯಪ್ರದೇಶದ ಜ್ಯೋತಿರಾದಿತ್ಯ ಸಿಂಧಿಯಾ. ಕಾಂಗ್ರೆಸ್ ನಲ್ಲಿದ್ದ ಸಿಂಧಿಯಾ ಬಿಜೆಪಿಗೆ ಬಂದು ಮಧ್ಯ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚನೆಗೆ ನೆರವಾಗಿದ್ದರು. ಹೀಗಾಗಿ ಸಿಂಧಿಯಾಗೆ ಕೇಂದ್ರ ಸಚಿವ ಸ್ಥಾನ ಸಿಗುವುದು ಗ್ಯಾರಂಟಿ ಎನ್ನಲಾಗಿತ್ತು.
ಅದರಂತೆ ಬುಧವಾರ ಜ್ಯೋತಿರಾದಿತ್ಯ ಸಿಂಧಿಯಾ ಮೋದಿ ಕ್ಯಾಬಿನೆಟ್ ಪ್ರವೇಶಿಸಿದ್ದಾರೆ. ವಿಶೇಷವೆಂದರೆ ಸುಮಾರು 30 ವರ್ಷಗಳ ಹಿಂದೆ ಜ್ಯೋತಿರಾದಿತ್ಯ ತಂದೆ ಮಾಧವ ರಾವ್ ಸಿಂಧಿಯಾ ನಿರ್ವಹಿಸಿದ್ದ ವಿಮಾನ ಯಾನ ಖಾತೆಯನ್ನೇ ಪಡೆದಿದ್ದಾರೆ.
ಮಾಧವರಾವ್ ಸಿಂಧಿಯಾ ಅವರು 1991ರಿಂ 1993ರವರೆಗೆ ನರಸಿಂಹ ರಾವ್ ಅವರ ಸರ್ಕಾರದಲ್ಲಿ ವಿಮಾನಯಾನ ಮತ್ತು ಪ್ರವಾಸೋದ್ಯಮ ಸಚಿವರಾಗಿದ್ದರು. ಇದೀಗ ಮಗನಿಗೂ ವಿಮಾನಯಾನ ಖಾತೆ ಲಭಿಸಿದೆ.
ಇದನ್ನೂ ಓದಿ:ಈಗ ಎಲ್ಲರನ್ನೊಳಗೊಂಡ ಸಂಪುಟ: ಸಬ್ಕಾ ವಿಕಾಸ್ ಧ್ಯೇಯದೊಂದಿಗೆ ಪಿಎಂ ಮೋದಿ ಸಂಪುಟ ವಿಸ್ತರಣೆ
ತಂದೆ ಮತ್ತು ಮಗ ಇಬ್ಬರೂ ವಿಮಾನಯಾನ ಖಾತೆ ಪಡೆಯುವ ಮೊದಲು ಕೇಂದ್ರ ಸಚಿವಗಿರಿ ನಿರ್ವಹಿಸಿದ್ದರು. ಮಾಧವರಾವ್ ಅವರು ಅದಕ್ಕೂ ಮೊದಲು ರಾಜೀವ್ ಗಾಂಧಿ ಸರ್ಕಾರದಲ್ಲಿ ರೈಲ್ವೇ ಸಚಿವರಾಗಿದ್ದರು. ಜ್ಯೋತಿರಾದಿತ್ಯ ಸಿಂಧಿಯಾ ಅವರು ಮನಮೋಹನ್ ಸಿಂಗ್ ಸರ್ಕಾರದಲ್ಲಿ ಸಂವಹನ ಮತ್ತು ಐಟಿ ಸಹಾಯಕ ಸಚಿವರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು