ಲಾಕ್ ಡೌನ್ ನಡುವೆ ತೆರೆದ ಕೇದಾರನಾಥ ದೇವಾಲಯ, ಭಕ್ತರಿಗಿಲ್ಲ ದೇವರ ದರ್ಶನದ ಅವಕಾಶ
ಕೇದಾರನಾಥ ದೇವಾಲಯದ ಅಲಂಕಾರಕ್ಕಾಗಿ ಹತ್ತು ಕ್ವಿಂಟಾಲ್ ಹೂಗಳನ್ನು ಉಪಯೋಗಿಸಲಾಗಿತ್ತು
Team Udayavani, Apr 29, 2020, 11:54 AM IST
Kedarnath Temple Opens
ಉತ್ತರಾಖಂಡ್: ಪ್ರಸಿದ್ಧ ಯಾತ್ರಾ ಸ್ಥಳ ಉತ್ತರಾಖಂಡ್ ನ ಕೇದಾರನಾಥ್ ದೇವಾಲಯದ ಬಾಗಿಲನ್ನು ಬುಧವಾರ ತೆರೆಯಲಾಗಿದೆ. ಆದರೆ ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಯಾವ ಭಕ್ತರಿಗೂ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಟ್ಟಿಲ್ಲ ಎಂದು ವರದಿ ತಿಳಿಸಿದೆ.
ದೇವಾಲಯದ ಮುಖ್ಯ ಅರ್ಚಕ ಸೇರಿದಂತೆ 20 ಮಂದಿ ದೇವಾಲದಲ್ಲಿ ಹಾಜರಿದ್ದು, ಶಿವನನ್ನು ಚಂಡುಹೂವುಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಗಿತ್ತು. ಇಡೀ ಪ್ರದೇಶ ಹಿಮದಿಂದ ಆವೃತ್ತವಾಗಿತ್ತು, ಪ್ರತಿ ವರ್ಷದಂತೆ ಈ ಬಾರಿ ಯಾವ ಭಕ್ತರ ಜನಜಂಗುಳಿ ಇರಲಿಲ್ಲವಾಗಿತ್ತು ಎಂದು ವರದಿ ವಿವರಿಸಿದೆ.
ಕೇದಾರನಾಥ ದೇವಾಲಯದ ಅಲಂಕಾರಕ್ಕಾಗಿ ಹತ್ತು ಕ್ವಿಂಟಾಲ್ ಹೂಗಳನ್ನು ಉಪಯೋಗಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಪ್ರದಾಯದಂತೆ ಬೆಳಗ್ಗಿನ ಜಾವ 3ಗಂಟೆಗೆ ಮುಖ್ಯ ಅರ್ಚಕ, ದೇವಾಲಯದ ಅಧಿಕಾರಿಗಳು ಹಾಗೂ ಕೆಲವು ಭದ್ರತಾ ಸಿಬ್ಬಂದಿಗಳ ಸಮ್ಮುಖದಲ್ಲಿ ದೇವಾಲಯದ ಬಾಗಿಲುಗಳನ್ನು ತೆರೆಯಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ದೇವರಿಗೆ ರುದ್ರಾಭಿಷೇಕ ಮಾಡುವ ಮೂಲಕ ಪ್ರಾರ್ಥನೆ, ಪೂಜೆ ನೆರವೇರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋವಿಡ್ 19 ನಿರ್ಬಂಧದ ಹಿನ್ನೆಲೆಯಲ್ಲಿ ದೇವರ ದರ್ಶನಕ್ಕಾಗಲಿ ಅಥವಾ ಪ್ರಾರ್ಥನೆ ಸಲ್ಲಿಸಲು ರಿಗೂ ಅವಕಾಶ ನೀಡಲಿಲ್ಲ ಎಂದು ಅರ್ಚಕರು ತಿಳಿಸಿದ್ದಾರೆ.