ಕೊಹಿನೂರ್ ವಜ್ರ ವಿವಾದಿತ ಆಸ್ತಿ: ಬ್ರಿಟನ್ ಸಂಸದನ ಹೇಳಿಕೆ
Team Udayavani, Aug 4, 2017, 9:05 AM IST
ಲಂಡನ್: ಜಗದ್ವಿಖ್ಯಾತ, ಕೋಟ್ಯಂತರ ರೂ. ಬೆಲೆಯ ಕೊಹಿನೂರ್ ವಜ್ರದ ಮಾಲಕತ್ವ ಬಗ್ಗೆ ಬ್ರಿಟನ್ ಮತ್ತು ಭಾರತದ ಮಧ್ಯೆ ಜಗ್ಗಾಟ ಇರುವಂತೆಯೇ, ಅದು ಯಾರದ್ದು ಎಂದು ಹೇಳಲು ಸಾಧ್ಯವಿಲ್ಲ. ಕೊಹಿನೂರ್ ವಜ್ರದ ಮಾಲಕತ್ವ ವಿಚಾರ ಅತ್ಯಂತ ವಿವಾದಿತವಾದದ್ದು ಎಂದು ಬ್ರಿಟನ್ನ ಮೊದಲ ಸಿಕ್ಖ್ ಸಂಸದ ತನ್ಮನ್ಜೀತ್ ಸಿಂಗ್ ಧೇಸಿ ಅವರು ಹೇಳಿದ್ದಾರೆ. ಈ ವಿವಾದ ಅತ್ಯಂತ ಸಂಕೀರ್ಣ ಮತ್ತು ಗಹನವಾದದ್ದು. ವಜ್ರದ ಮಾಲಕರು ಯಾರು ಎನ್ನುವುದು ಚರ್ಚೆಯ ವಿಷಯ. ಜತಗೆ ಯಾವುದೇ ವ್ಯಕ್ತಿಗೆ ಇದರ ಮಾಲಕತ್ವ ಇದೇ ದೇಶದ್ದು ಎನ್ನುವಂತೆಯೂ ಇಲ್ಲ. ಇತಿಹಾಸದ ಭಾಗವಾಗಿರುವ ಇದನ್ನು ಪರಿಶೀಲಿಸಬೇಕಿದೆ ಎಂದಿದ್ದಾರೆ.
ಲೂಧಿಯಾನಕ್ಕೆ ಭೇಟಿ ನೀಡಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸ್ಲಾಗ್ನ ಸಂಸದ ಧೇಸಿ, ಯಾರು ಇದರ ಮಾಲಕತ್ವ ಹೊಂದಬೇಕು ಎಂದು ಹೇಳುವುದೂ ಸಾಧ್ಯವಿಲ್ಲ. ವಿವಾದ ಬಹು ಹಿಂದಿನಿಂದಲೇ ಇದ್ದು, ಇನ್ನೂ ಮುಂದುವರಿದಿದೆ ಎಂದಿದ್ದಾರೆ. ಮಹಾರಾಜ ದುಲೀಪ್ ಸಿಂಗ್ ಅವರ ಬಳಿ ಇದ್ದ ವಜ್ರ ಕದಿಯಲಾಗಿದೆ ಎಂದು ಭಾರತೀಯರು ಹೇಳುತ್ತಿದ್ದರೆ, ರಾಣಿ ವಿಕ್ಟೋರಿಯಾ ಅವರು ಉಡುಗೊರೆಯಾಗಿ ಸ್ವೀಕರಿಸಿದ್ದಾರೆ ಎಂದು ಬ್ರಿಟಿಷರು ಹೇಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!