ರಾಜ್ಯಸಭೆ ನಾಮಾಂಕನ ನೀಡದ ಶಿಕ್ಷೆ: ಕುಮಾರ್ ವಿಶ್ವಾಸ್ ಆಕ್ರೋಶ
Team Udayavani, Jan 3, 2018, 3:43 PM IST
ಹೊಸದಿಲ್ಲಿ : ರಾಜ್ಯಸಭಾ ಚುನಾವಣೆಗೆ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಸಿದ್ಧಪಡಿಸಿರುವ ಅಂತಿಮ ಪಟ್ಟಿಯಲ್ಲಿ ತನ್ನ ಹೆಸರನ್ನು ಸೇರಿಸದಿರುವ ಬಗ್ಗೆ ಹಿರಿಯ ಆಪ್ ನಾಯಕ ಕುಮಾರ್ ವಿಶ್ವಾಸ್ ತೀವ್ರ ನಿರಾಶೆ, ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಮೇಲ್ಮನೆಗೆ ನಾಮಾಂಕನಗೊಂಡಿರುವವರಿಗೆ ಅಭಿನಂದನೆ ಹೇಳಿರುವ ಕುಮಾರ್ ವಿಶ್ವಾಸ್, “ರಾಜ್ಯ ಸಭಾ ಚುನಾವಣೆಗೆ ಪಕ್ಷದಿಂದ ನಾಮಾಂಕನಗೊಂಡಿರುವವರಿಗೆ ನನ್ನ ಶುಭ ಹಾರೈಕೆಗಳು’ ಎಂದು ಹೇಳಿದ್ದಾರೆ.
“ಕೆಲ ಸಮಯದ ಹಿಂದೆ ಅರವಿಂದ ಕೇಜ್ರಿವಾಲ್ ಅವರು ನಿಮ್ಮನ್ನು ನಾನು ಕೊಲ್ಲುವುದಿಲ್ಲ; ಹುತಾತ್ಮಗೊಳಿಸುತ್ತೇನೆ ಎಂಬ ಮಾತನ್ನು ಆಡಿದ್ದರು’ ಎಂದು ನೆನಪಿಸಿಕೊಂಡಿರುವ ರಾಜಕಾರಣಿ-ಕವಿ ಕುಮಾರ್ ವಿಶ್ವಾಸ್, ತನ್ನ ಆಪ್ತ ಮಿತ್ರನಾಗಿರುವ ಹಾಗೂ ರಾಜ್ಯಸಭಾ ಚುನಾವಣೆಗೆ ತನ್ನನ್ನು ನಾಮಾಂಕನ ಮಾಡಿರುವ ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನು ತೀವ್ರವಾಗಿ ಟೀಕಿಸಿದ್ದಾರೆ.