ಬಿಹಾರ ಘನ ತ್ಯಾಜ್ಯ ನಿರ್ವಹಣೆ ವಿಷಮ ಸ್ಥಿತಿಗೆ: ಎನ್ಜಿಟಿ ಎಚ್ಚರಿಕೆ
Team Udayavani, Mar 22, 2019, 11:43 AM IST
ಹೊಸದಿಲ್ಲಿ : ಬಿಹಾರದಲ್ಲಿ ತ್ಯಾಜ್ಯ ನಿರ್ವಹಣೆ ಅತ್ಯಂತ ಶೋಚನೀಯ ಸ್ಥಿತಿ ತಲುಪಿದ್ದು ಶೀಘ್ರವೇ ಇದು ವಿಷಮ ಪರಿಸ್ಥಿತಿಯನ್ನು ತಲುಪಲಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಎಚ್ಚರಿಸಿದೆ.
ಬಿಹಾರದ ಮುಖ್ಯ ಕಾರ್ಯದರ್ಶಿಗ ಈ ಸಂಬಂಧ ನೊಟೀಸ್ ಜಾರಿ ಮಾಡಿರುವ ಎನ್ಜಿಟಿ, 2016ರ ಘನ ತ್ಯಾಜ ನಿರ್ವಹಣೆಯ ನಿಮಯಗಳನ ಅನುಸಾರ ತನಗೆ ತ್ತೈಮಾಸಿಕ ವರದಿ ಸಲ್ಲಿಸುವಂತೆ ಆದೇಶಿಸಿದೆ.
ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿ ಬಿಹಾರದ ಕನಿಷ್ಠ ಮೂರು ಪ್ರಮುಖ ನಗರಗಳನ್ನು, ಮೂರು ಪ್ರಮುಖ ಪಟ್ಟಣಗಳನ್ನು ಮತ್ತು ಮೂರು ಪಂಚಾಯತ್ಗಳನ್ನು ಮಾದರಿ ಯಾಗಿ ತೋರಿಸತಕ್ಕದ್ದು ಎಂದು ಎನ್ಜಿಟಿ ಅಧ್ಯಕ್ಷ ಆದರ್ಶ್ ಕುಮಾರ್ ಗೋಯಲ್ ಅವರು ಆದೇಶಿಸಿದ್ದಾರೆ.