ದಂಪತಿ ಮೇಲೆ ದಾಳಿ, ಮಗುವನ್ನು ಹೊತ್ತೊಯ್ದ ಚಿರತೆ..ಮುಂದೆನಾಯ್ತು?
Team Udayavani, Jul 30, 2018, 11:31 AM IST
ವಡೋದರಾ(ಗುಜರಾತ್): 4 ತಿಂಗಳ ಮಗುವಿನ ಜೊತೆ ಬೈಕ್ ನಲ್ಲಿ ದಂಪತಿ ತೆರಳುತ್ತಿದ್ದ ಸಂದರ್ಭದಲ್ಲಿಯೇ ದಿಢೀರನೆ ಚಿರತೆಯೊಂದು ದಾಳಿ ನಡೆಸಿ, ಹಸುಗೂಸನ್ನು ಹೊತ್ತೊಯ್ದ ಘಟನೆ ಛೋಟಾ ಉದಯ್ ಪುರ್ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದೆ.
ವಿಕ್ರಮ್ ರಾತ್ವಾ, ಪತ್ನಿ ಸಪ್ನಾ ಹಾಗೂ ನಾಲ್ಕು ತಿಂಗಳ ಪುಟ್ಟ ಮಗುವಿನ ಜೊತೆ ಬೈಕ್ ನಲ್ಲಿ ಭಾನುವಾರ ಹೋಗುತ್ತಿದ್ದ ವೇಳೆ ಛೋಟಾ ಉದಯ್ ಪುರ್ ಜಿಲ್ಲೆಯ ರಾಯ್ ಪುರ್ ಗ್ರಾಮದ ಸಮೀಪ ಪಾವಿ ಜೆಟ್ ಪುರ್ ಟೆಹ್ಸಿಲ್ ನಲ್ಲಿ ಚಿರತೆ ದಾಳಿ ನಡೆಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಚಿರತೆ ದಾಳಿ ನಡೆಸಿ ಸಪ್ನಾ ಅವರ ಕೈಯಲ್ಲಿದ್ದ ಗಂಡು ಮಗು ಆಯುಷ್ಯನನ್ನು ಹೊತ್ತೊಯ್ದಿರುವುದಾಗಿ ಪತಿ ರಾತ್ವಾ ಪಿಟಿಐಗೆ ವಿವರಿಸಿದ್ದಾರೆ. ಈ ವೇಳೆ ನೆರವಿಗಾಗಿ ಕೂಗಿಕೊಂಡಾಗ ಸ್ಥಳೀಯ ಗ್ರಾಮಸ್ಥರು ಆಗಮಿಸಿದ್ದರು.
ಕೊನೆಗೆ ಸ್ಥಳೀಯರು ಚಿರತೆಯನ್ನು ಬೆದರಿಸಿ ಅದರ ಹಿಡಿತದಲ್ಲಿದ್ದ ಮಗುವನ್ನು ತಪ್ಪಿಸಲು ಯಶಸ್ವಿಯಾಗಿದ್ದರು. ಬಳಿಕ ಗಾಯಗೊಂಡಿದ್ದ ಪತ್ನಿ ಸಪ್ನಾ, ಮಗು ಆಯುಷ್ಯ ಸೇರಿದಂತೆ ಮೂವರನ್ನು ವಡೋದರಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿನ ಬೆನ್ನು ಹಾಗೂ ಕಾಲು ತೀವ್ರವಾಗಿ ಗಾಯಗೊಂಡಿರುವುದಾಗಿ ವೈದ್ಯರು ತಿಳಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮೂವರು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ