ಜಮ್ಮು ಕಾಶ್ಮೀರ : 3 ವರ್ಷದ ಬಾಲಕ ನರಭಕ್ಷಕ ಚಿರತೆಗೆ 2ನೇ ಬಲಿ
Team Udayavani, Dec 18, 2018, 3:09 PM IST
ಜಮ್ಮು : ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯ ಮಾಹೋರ್ ಪ್ರದೇಶ ವ್ಯಾಪ್ತಿಗೆ ಒಳಪಡುವ ದುರ್ಗಮ ಗ್ರಾಮವೊಂದರಲ್ಲಿ ಚಿರತೆಯೊಂದು ಮೂವರು ವರ್ಷ ಪ್ರಾಯದ ಬಾಲಕನನು ಕೊಂದಿದ್ದು ಈ ತಿಂಗಳಲ್ಲಿ ನಡೆದಿರುವ ಈ ರೀತಿಯ ಎರಡನೇ ಘಟನೆ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಹೋರ್ನ ಕನ್ಸೋಲಿ ಗ್ರಾಮದಲ್ಲಿ ಕಳೆದ ಡಿ.8ರಂದು ಎಂಟು ವರ್ಷ ಪ್ರಾಯದ ಬಾಲಕ ರೆಹಮತ್ ಅಲಿ ಯನ್ನು ಕೊಂದು ತಿಂದಿದ್ದ ಇದೇ ಚಿರತೆಗಾಗಿ ಇದೀಗ ವ್ಯಾಪಕ ಶೋಧ ಕಾರ್ಯಾಚರಣೆ ನಡೆದಿದೆ.
ಜಮ್ಲಾನ್ ಗ್ರಾಮಕ್ಕೆ ಸಮೀಪದ ಅರಣ್ಯದಿಂದ ಹಳ್ಳಿಗೆ ನಿನ್ನೆ ಸೋಮವಾರ ನುಗ್ಗಿ ಬಂದಿದ್ದ ಈ ನರಭಕ್ಷಕ ಚಿರತೆ ಮೂರು ವರ್ಷದ ಬಾಲಕ ವಸೀಂ ಅಕ್ರಮ್ ನನ್ನು ಕೊಂದಿತು. ಈಬಾಲಕ ತನ್ನ ಮನೆಯ ಮುಂದೆ ಆಡಿಕೊಂಡಿದ್ದಾಗ ಚಿರತೆ ಆತನನ್ನು ಕಚ್ಚಿ ಹಿಡಿದು ಪರಾರಿಯಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.