ಪಾಕ್ ಬೇಹು ಜಾಲ ಭೇದಿಸಿದ ಮಧ್ಯಪ್ರದೇಶ ಎಟಿಎಸ್: 11 ಮಂದಿ ಸೆರೆ
Team Udayavani, Feb 10, 2017, 7:21 PM IST
ಭೋಪಾಲ್ : ಮಧ್ಯಪ್ರದೇಶ ಪೊಲೀಸ್ ದಳದ ಉಗ್ರ ನಿಗ್ರಹ ತಂಡ, ರಾಜ್ಯದ ವಿವಿಧ ಭಾಗಗಳಿಂದ ಪಾಕ್ ಗೂಢಚರ ಸಂಸ್ಥೆ ಐಎಸ್ಐ ಬೆಂಬಲಿತ ಬೇಹು ಜಾಲದ 11 ಸದಸ್ಯರನ್ನು ಬಂಧಿಸಿದೆ.
ಈ ಬಂಧಿತರು ಚೀನದ ಸಲಕರಣೆಗಳು, ಸಿಮ್ ಕಾರ್ಡ್ಗಳು, ಸಿಮ್ ಬಾಕ್ಸ್ಗಳನ್ನು ಬಳಸಿ ಅನಧಿಕೃತ ಕಾಲ್ ಸೆಂಟರ್ಗಳನ್ನು ನಡೆಸುತ್ತಿದ್ದರು. ಇವುಗಳ ಮೂಲಕ ಭಾರತದ ಸೇನಾ ಕಾರ್ಯಾಚರಣೆಗಳ ಬೇಹುಗಾರಿಕೆಯನ್ನು ಐಎಸ್ಐ ನಡೆಸುತ್ತಿತ್ತು.
ಉಗ್ರ ನಿಗ್ರಹ ತಂಡದ ಅಧಿಕಾರಿಗಳು ಬಂಧಿತರಲ್ಲಿದ ಚೀನದ ಸಿಮ್ ಕಾರ್ಡ್, ಸಿಮ್ ಬಾಕ್ಸ್, ಪ್ರೀಪೇಡ್ ಸಿಮ್ ಕಾರ್ಡ್ಗಳು, ಲ್ಯಾಪ್ಟಾಪ್ಗ್ಳು ಮತ್ತು ಡೇಟಾ ಕಾರ್ಡ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರಾಗಿರುವ ಎಲ್ಲ 11 ಮಂದಿಯ ವಿರುದ್ಧ ಪೊಲೀಸರು ಭಾರತೀಯ ಟೆಲಿಗ್ರಾಫ್ ಕಾಯಿದೆಯಡಿ ಹಾಗೂ ಐಪಿಸಿಯ ವಿವಿಧ ಸೆಕ್ಷನ್ಗಳಡಿ ಕೇಸುದಾಖಲಿಸಿಕೊಂಡಿದ್ದಾರೆ.
ಪಾಕ್ ಐಎಸ್ಐ ಬೆಂಬಲಿತ ಈ ಬೇಹು ಜಾಲದಲ್ಲಿ ಸೆರೆಯಾಗಿರುವ 11 ಮಂದಿಯಲ್ಲಿ ಮೂವರನ್ನು ಭೋಪಾಲದಲ್ಲಿ, ಒಬ್ಬನನ್ನು ಸಾತ್ನಾದಲ್ಲಿ, ಇಬ್ಬರನ್ನು ಜಬಲ್ಪುರದಲ್ಲಿ ಮತ್ತು ಐವರನ್ನು ಗ್ವಾಲಿಯರ್ನಲ್ಲಿ ಬಂಧಿಸಲಾಗಿದೆ ಎಂದು ಎಟಿಎಸ್ ಮುಖ್ಯಸ್ಥ ಸಂಜೀವ ಶಾಮಿ ತಿಳಿಸಿದ್ದಾರೆ.
ಸಾತ್ನಾದಲ್ಲಿ ಬಂಧಿತನಾದ ಬಲರಾಮ್ ಎಂಬಾತನು ಈ ಬೇಹು ಜಾಲದ ಮಾಸ್ಟರ್ ಮೈಂಡ್ ಆಗಿದ್ದಾನೆ ಎಂದವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ