ಸಂತ್ರಸ್ತೆಗೆ ರಾಖಿ ಕಟ್ಟಿ ಕಾಣಿಕೆ ಕೊಡಲು ಲೈಂಗಿಕ ದೌರ್ಜನ್ಯ ಆರೋಪಿಗೆ ಕೋರ್ಟ್ ಆದೇಶ
Team Udayavani, Aug 4, 2020, 7:09 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಭೋಪಾಲ್: ‘ನಿನ್ನ ವಿರುದ್ಧ ಲೈಂಗಿಕ ದೌರ್ಜನ್ಯ ಯತ್ನ ಅಪಾದನೆ ಮಾಡಿರುವ ಮಹಿಳೆಯ ಮನೆಗೆ ತೆರಳಿ ರಾಖಿ ಕಟ್ಟಿ, ಜೀವನಪೂರ್ತಿ ಆಕೆಯನ್ನು ಸಹೋದರನಂತೆ ನೋಡಿಕೊಳ್ಳುವುದಾಗಿ ಅಭಯ ನೀಡಬೇಕು’ ಎಂದು ನ್ಯಾಯಾಲಯ ತಾಕೀತು ಮಾಡಿದೆ.
ಮಧ್ಯಪ್ರದೇಶ ಹೈಕೋರ್ಟ್ನ ಇಂದೋರ್ ಪೀಠವು, ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ ಆಪಾದನೆ ಮೇರೆಗೆ ಜೈಲು ಸೇರಿರುವ ಆರೋಪಿಗೆ ಈ ರೀತಿ ಷರತ್ತುಬದ್ಧ ಜಾಮೀನು ನೀಡಿದೆ.
‘ನೀನು ಆ.3ರಂದು ನಿನ್ನ ಪತ್ನಿಯ ಜತೆಗೆ ಸಿಹಿ ತಿನಿಸು ಬಾಕ್ಸ್ನೊಂದಿಗೆ ಆ ‘ಸಂತ್ರಸ್ತೆ’ ಮನೆಗೆ ಹೋಗಿ ರಾಖಿ ಕಟ್ಟಬೇಕು. ಅಲ್ಲದೇ ಆಕೆಗೆ 11 ಸಾವಿರ ರೂ. ರಾಖಿ ಕಾಣಿಕೆ ನೀಡಿ ಆಶೀರ್ವಾದ ಪಡೆಯಬೇಕು. ಜತೆಗೆ ಮಹಿಳೆಯ ಪುತ್ರನಿಗೆ ಬಟ್ಟೆ, ಸಿಹಿತಿಂಡಿ ಖರೀದಿಸಲು 5 ಸಾವಿರ ರೂ. ನೀಡಬೇಕು ಎಂದು ಸೂಚನೆ ನೀಡಿದೆ.
ಕಳೆದ ಎಪ್ರಿಲ್ನಲ್ಲಿ ಉಜ್ಜೈನಿಯಲ್ಲಿ ವಿಕ್ರಂ ಬಾಗ್ರಿ ಎಂಬಾತ ಮಹಿಳೆಯ ಮೇಲೆ ಲೈಂಗಿಕ ಹಲ್ಲೆ ನಡೆಸಲು ಯತ್ನಿಸಿದ್ದನು. ಘಟನೆ ಸಂಬಂಧ ಈತನ ವಿರುದ್ಧ ಮಹಿಳೆ ದೂರು ದಾಖಲಿಸಿದ್ದಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ
AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!
Lok Sabha ಅಖಾಡಕ್ಕೆ ಲಾಲು ಪ್ರಸಾದ್ ಪುತ್ರಿ ಡಾ| ರೋಹಿಣಿ ಹೆಜ್ಜೆ
Cyber attack: ಭದ್ರತೆ ಹೆಚ್ಚಿಸಲು ಬ್ಯಾಂಕ್ಗಳಿಗೆ ಆರ್ಬಿಐ ಸೂಚನೆ
ED; ದಿಲ್ಲಿ ಲಿಕ್ಕರ್ ಕೇಸ್ ಡೀಲ್ಗೆ ಕೆಸಿಆರ್ ಪುತ್ರಿ ಕವಿತಾ ಸಂಚು