Madhya Pradesh; ದನ ಬೇಕಾಬಿಟ್ಟಿ ತಿರುಗಾಡಿದ್ರೆ ಮಾಲೀಕನಿಗೆ ಚಪ್ಪಲಿಯಿಂದ 5 ತಪರಾಕಿ!
ಡಂಗುರ ಸಾರಿಸುತ್ತಾ ಹೊಸ ಆದೇಶದ ಬಗ್ಗೆ ಗ್ರಾಮಸ್ಥರ ಗಮನ ಸೆಳೆಯುತ್ತಿರುವುದು ವಿಡಿಯೋದಲ್ಲಿದೆ
Team Udayavani, Jul 21, 2023, 4:46 PM IST
ಭೋಪಾಲ್: ತಾವು ಸಾಕಿದ ಜಾನುವಾರುಗಳನ್ನು ಬೀದಿ ಬದಿಯಲ್ಲಿ ಮುಕ್ತವಾಗಿ ಅಡ್ಡಾಡಲು ಬಿಡುವ ಗ್ರಾಮಸ್ಥರಿಗೆ ಐದು ಬಾರಿ ಚಪ್ಪಲಿ ಏಟು ನೀಡಿ, 500 ರೂಪಾಯಿ ದಂಡ ವಿಧಿಸಬೇಕು…ಇದು ಮಧ್ಯಪ್ರದೇಶದ ಹಳ್ಳಿಯೊಂದರ ಸರ್ ಪಂಚ್(ಮುಖ್ಯಸ್ಥ) ಹೊರಡಿಸಿದ ಆದೇಶ!
ಇದನ್ನೂ ಓದಿ:Sandalwood: ಎಲ್ಲವೂ ಚೆನ್ನಾಗಿತ್ತು.. ಒಳ್ಳೆಯ ಸಿನಿಮಾ, ಭರ್ಜರಿ ನಿರೀಕ್ಷೆ..; ಆದರೆ……
ಮಧ್ಯಪ್ರದೇಶದ ನಾಗ್ನಾಡು ಹಳ್ಳಿಯ ಸರ್ ಪಂಚ್ ಕಚೇರಿಯ ಸಿಬಂದಿ ಮನೆ, ಮನೆಗೆ ತೆರಳಿ ಹೊಸದಾಗಿ ಜಾರಿಗೊಳಿಸಿರುವ ಆದೇಶದ ಬಗ್ಗೆ ಡಂಗುರ ಸಾರುತ್ತಿರುವುದಾಗಿ ವರದಿ ವಿವರಿಸಿದೆ.
ವಿಡಿಯೋದಲ್ಲಿ ಸರ್ ಪಂಚ್ ಕಚೇರಿಯ ಸಿಬಂದಿ ಡಂಗುರ ಸಾರಿಸುತ್ತಾ ಹೊಸ ಆದೇಶದ ಬಗ್ಗೆ ಗ್ರಾಮಸ್ಥರ ಗಮನ ಸೆಳೆಯುತ್ತಿರುವುದು ದಾಖಲಾಗಿದೆ. ಒಂದು ವೇಳೆ ನಿಮ್ಮ ದನ, ಕರು, ಎತ್ತುಗಳು ಬೀದಿಯಲ್ಲಿ ಮುಕ್ತವಾಗಿ ಅಡ್ಡಾಡುತ್ತಿದ್ದರೆ, ಅಂತಹವರಿಗೆ ಚಪ್ಪಲಿಯಿಂದ ಐದು ಏಟು ನೀಡಿ, 500 ರೂಪಾಯಿ ದಂಡ ವಿಧಿಸಲಾಗುವುದು ಎಂದು ಕೂಗುತ್ತಿರುವುದು ವಿಡಿಯೋದಲ್ಲಿದೆ.
ಹಳ್ಳಿ ಸರ್ ಪಂಚ್ ಹೊಸ ನಿಯಮದ ಬಗ್ಗೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಈ ವಿಚಾರದಲ್ಲಿ ಸಬ್ ಡಿವಿಜನಲ್ ಮ್ಯಾಜಿಸ್ಟ್ರೇಟ್ (ಎಸ್ ಡಿಎಂ) ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Farrukhabad; ಬಿಜೆಪಿ ಅಭ್ಯರ್ಥಿಗೆ ಎಂಟು ಬಾರಿ ಮತದಾನ ಮಾಡಿದ ವ್ಯಕ್ತಿ; ವಿಡಿಯೋ ವೈರಲ್
Unemployment; ಭಾರತದ ಯುವಕರಿಗೆ ಕೆಲಸ ಸಿಗಬೇಕಾದರೆ ಮೋದಿ ನಿವೃತ್ತಿಯಾಗಬೇಕು: ರಾಹುಲ್ ಗಾಂಧಿ
47.8 degrees; ಉತ್ತರ ಭಾರತದ ಹಲವೆಡೆ ಶಾಖದ ಅಲೆ ಅಲರ್ಟ್!
TRAI ವ್ಯಾಪ್ತಿಗೆ ಫೇಸ್ಬುಕ್, ವಾಟ್ಸ್ಆ್ಯಪ್, ಎಕ್ಸ್?
Report; 4 ವರ್ಷಗಳಲ್ಲಿ ದೇಶದ ಕೃಷಿ ಪ್ರದೇಶದ 50 ಲಕ್ಷ ಮರಗಳು ಕಣ್ಮರೆ!
MUST WATCH
ಹೊಸ ಸೇರ್ಪಡೆ
Rain: ಹಲವು ವರ್ಷಗಳ ನಂತರ ಕೆರೆಗಳಿಗೆ ನೀರು; ರೈತರ ಮೊಗದಲ್ಲಿ ಮಂದಹಾಸ
Kalaburagi; ಕಾನೂನು ಉಲ್ಲಂಘಿಸಿದರೆ ಮುಲಾಜಿಲ್ಲದೆ ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ
CET Results: ದ್ವಿತೀಯ ಪಿಯುಸಿ 2ನೇ ಪರೀಕ್ಷೆ ಫಲಿತಾಂಶ ನಂತರವೇ ಸಿಇಟಿ ಫಲಿತಾಂಶ
Hubli: ರೌಡಿಶೀಟರ್ ಮೇಲೆ ಗ್ಯಾಂಗ್ ನಿಂದ ಹಲ್ಲೆ; ಪೊಲೀಸರಿಗೆ ಅವಾಜ್ ಹಾಕಿದ ರೌಡಿ
Davanagere ನೇಹಾ-ಅಂಜಲಿ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಿ; ಮಡಿವಾಳ ಸಮಾಜದ ಪ್ರತಿಭಟನೆ