ಮಹದಾಯಿ ಹೋರಾಟ ಗೆಲ್ಲಲು ಗೋವಾ ಸಂಸದರು, ಶಾಸಕರು ಸರಿಯಾಗಿ ಅಧ್ಯಯನ ಮಾಡಬೇಕಿದೆ
Team Udayavani, Jan 12, 2023, 5:26 PM IST
ಪಣಜಿ: ಮಹದಾಯಿ ಹೋರಾಟ ಗೆಲ್ಲಲು ಗೋವಾ ಸಂಸದರು, ಶಾಸಕರು ಸರಿಯಾಗಿ ಅಧ್ಯಯನ ಮಾಡಬೇಕು. ಮಹದಾಯಿ ಬಗ್ಗೆ ಗೋವಾದ ಜನಪ್ರತಿನಿಧಿಗಳಿಗೆ ನಿರ್ಲಕ್ಷ್ಯವಿದೆ. ಅದಕ್ಕಾಗಿಯೇ ಸಂಸತ್ತು, ದೆಹಲಿ ದರ್ಬಾರ್ ಮತ್ತು ಇತರ ವೇದಿಕೆಗಳಲ್ಲಿ, ನಿಖರವಾದ ಭಾಗವನ್ನು ಪ್ರಸ್ತುತಪಡಿಸಲಾಗುತ್ತಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಕರ್ನಾಟಕದ ಪ್ರತಿನಿಧಿಗಳು ತಮ್ಮ ರಾಜ್ಯದ ಹಿತಾಸಕ್ತಿಯನ್ನು ಪ್ರತಿಪಾದಿಸುತ್ತಾರೆ, ಈ ಪರಿಸ್ಥಿತಿಯನ್ನು ಬದಲಾಯಿಸಲು, ನಮ್ಮ ನೀರಿನ ಅಗತ್ಯತೆಗಳು, ನಮ್ಮ ನದಿಗಳು ಮತ್ತು ನೈಸರ್ಗಿಕ ನೀರಿನ ಮೂಲಗಳ ಬಗ್ಗೆ ನಾವು ಮಾಹಿತಿ ಪಡೆಯಬೇಕು ಎಂದು ಪರಿಸರ ಹೋರಾಟಗಾರ ರಾಜೇಂದ್ರ ಕೇರ್ಕರ್ ಅವರು ಮಾರ್ಶೆಲ್ನಲ್ಲಿ ಆಯೋಜಿಸಿದ್ದ “ಆಮಚಾ ಮಾದಾಯ್ ಆಮಕಾ ಜಾಯ್” ಸಾರ್ವಜನಿಕ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮಹದಾಯಿ ಜೊತೆಗೆ ರಾಜ್ಯದಲ್ಲಿನ ನದಿಗಳ ಬಗ್ಗೆ ಅಧ್ಯಯನ ಮಾಡಬೇಕಾಗಿದೆ, ಎಷ್ಟು ನದಿಗಳಿವೆ ಎಂಬುದರ ಬಗ್ಗೆಯೂ ನಮಗೆ ನಿರ್ಲಕ್ಷ್ಯವಿದೆ. ಒಂದು ವರದಿಯು ಒಂಬತ್ತು ನದಿಗಳನ್ನು ಪಟ್ಟಿ ಮಾಡಿದೆ. ಪರಿಸರವಾದಿಗಳು ಮಾಹಿತಿ ನೀಡಿದ ನಂತರ 11 ನದಿಗಳನ್ನು ನೋಂದಾಯಿಸಲಾಗಿದೆ. ಕೇವಲ ತಾಯಿ ಎಂದು ಹೇಳಿದರಾಗಿಲ್ಲ ಅವಳನ್ನು ನೋಡಿಕೊಳ್ಳಬೇಕು. ನಮ್ಮ ಸಂಸ್ಕøತಿಯನ್ನು ನದಿಗಳ ದಡದಲ್ಲಿ ರಚಿಸಲಾಗಿದೆ. ನದಿಯ ದಡದಲ್ಲಿ ಹಲವು ತಲೆಮಾರುಗಳು ವಾಸಿಸುತ್ತಿವೆ. ನೀರೇ ಜೀವನವಾಗಿದೆ ಆದರೆ ರಾಜ್ಯದ ಮಹದಾಯಿ ಮತ್ತು ಎಲ್ಲಾ ನದಿಗಳ ಅಸ್ತಿತ್ವಕ್ಕೆ ಅಪಾಯವಿದೆ ಎಂದು ಪರಿಸರ ಹೋರಾಟಗಾರ ರಾಜೇಂದ್ರ ಕೇರಕರ್ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪತ್ರಿಕೆಯೊಂದರ ಸಂಪಾದಕರಾಗಿರುವ ರಾಜು ನಾಯ್ಕ ಮಾತನಾಡಿ- ‘ಮಹದಾಯಿ’ ಹೋರಾಟಕ್ಕೆ ಸಮರ್ಥ ರಾಜಕೀಯ ನಾಯಕನ ಅಗತ್ಯವಿದೆ. ಅದಕ್ಕೆ ವಿಧಾನ ಸಭೆ, ಲೋಕಸಭೆಯಲ್ಲಿ ಪರಿಸರ ಅಧ್ಯಯನ ಇರುವ ನಾಯಕ ಬೇಕು. ಪರಿಸರವಾದಿ ರಾಜೇಂದ್ರ ಕೇರ್ಕರ್ ಅವರಂತಹ ಹೋರಾಟಗಾರರು ರಾಜಕೀಯಕ್ಕೆ ಬರಬೇಕು. ಅವರು ಖಂಡಿತವಾಗಿಯೂ ಗೋವಾದ ಪರಿಸರೀಯ ಭಾಗವನ್ನು ಪ್ರದರ್ಶಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಯೂರಿ ಅಲೆಮಾಂವ, ಶಾಸಕ ಕಾರ್ಲೋಸ್ ಫೆರೇರಾ, ಆಪ್ ನಾಯಕರಾದ ಪ್ರತಿಮಾ ಕುಟಿನ್ಹೋ, ದತ್ತಾರಾಮ್ ದೇಸಾಯಿ, ತೃಣಮೂಲದ ಸಾಮಿಲ್ ವಲ್ವೈಕರ್, ದಿಲೀಪ್ ಬೋರ್ಕರ್, ರಮೇಶ್ ಗವಾಸ್, ಫಾ. ಎರಿಕ್ ಪೆರೇರಾ, ಮಧು ಗಾಂವ್ಕರ್ ಸೇರಿದಂತೆ ಅನೇಕ ಪರಿಸರವಾದಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ವಕ್ತಾರರು ಹಾಗೂ ಪರಿಸರ ಪ್ರೇಮಿಗಳಿಂದ ಮಹದಾಯಿಗಾಗಿ ಸಾರ್ವಜನಿಕ ಹೋರಾಟ ನಡೆಸಲು ತೀರ್ಮಾನಿಸಲಾಯಿತು.
ಇದನ್ನೂ ಓದಿ: ನಾಡದೋಣಿ ಮೀನುಗಾರರಿಗೆ ಕೇಂದ್ರದಿಂದ 25 ಲಕ್ಷ ಲೀಟರ್ ಹೆಚ್ಚುವರಿ ಸೀಮೆ ಎಣ್ಣೆ ಬಿಡುಗಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು