ಚೀನೀ ಉತ್ಪನ್ನ ನಿಷೇಧಿಸಿ: ಕೇಂದ್ರ ಸರಕಾರಕ್ಕೆ ವ್ಯಾಪಾರಿಗಳ ಒಕ್ಕೂಟ ಆಗ್ರಹ
ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರಿಗೆ ಸಿಟಿಐ ವತಿಯಿಂದ ಪತ್ರ
Team Udayavani, Dec 19, 2022, 7:40 AM IST
ಹೊಸದಿಲ್ಲಿ: ಅರುಣಾಚಲ ಪ್ರದೇಶದ ತವಾಂಗ್ನಲ್ಲಿ ಭಾರತ ಮತ್ತು ಚೀನ ಸೇನೆಯ ನಡುವೆ ಘರ್ಷಣೆ ನಡೆದ ಬೆನ್ನಲ್ಲೇ ಮತ್ತೆ ಚೀನೀ ಸರಕುಗಳ ಬಹಿ ಷ್ಕಾರದ ಕೂಗು ಕೇಳಿಬಂದಿದೆ.
ಚೀನದ ಎಲ್ಲ ಉತ್ಪನ್ನಗಳನ್ನೂ ಬಹಿ ಷ್ಕರಿಸಬೇಕು. ಆಮದು ಮಾಡಲಾದ ಎಲ್ಲ ಸರಕುಗಳು ಮತ್ತು ಇ- ಕಾಮರ್ಸ್ ಉತ್ಪನ್ನಗಳ ಮೇಲೆ “ಅದನ್ನು ಉತ್ಪಾದಿಸಲಾದ ಮೂಲ ದೇಶದ ಹೆಸರುಳ್ಳ ಲೇಬಲ್’ ಅಂಟಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರಿಗೆ ವ್ಯಾಪಾರಿಗಳ ಒಕ್ಕೂಟ ಆಗ್ರಹಿಸಿದೆ.
ಈ ಕುರಿತು ಗೋಯಲ್ಗೆ ಪತ್ರ ಬರೆದಿ ರುವ ದಿ ಛೇಂಬರ್ ಆಫ್ ಟ್ರೇಡ್ ಆ್ಯಂಡ್ ಇಂಡಸ್ಟ್ರಿ(ಸಿಟಿಐ), ಜನರಿಗೆ ಚೀನದ ಸರಕುಗಳನ್ನು ಖರೀದಿಸಲು ಇಷ್ಟವಿಲ್ಲ ದಿದ್ದರೂ, ಇ-ಕಾಮರ್ಸ್ ವೆಬ್ಸೈಟ್ಗಳಲ್ಲಿ ತಾವು ಖರೀದಿಸುವ ವಸ್ತುವಿನ ಮೂಲ ದೇಶ ಯಾವುದು ಎಂಬುದು ಗೊತ್ತಾಗುತ್ತಿಲ್ಲ.
ಹೀಗಾಗಿ ಸರಕಾರ ಇಂಥ ಲೇಬಲ್ ಅಂಟಿಸುವುದನ್ನು ಕಡ್ಡಾಯ ಗೊಳಿಸಬೇಕು ಎಂದು ಮನವಿ ಮಾಡಿದೆ. ಜತೆಗೆ, ಈ ವರ್ಷದ ಮೊದಲ 9 ತಿಂಗಳಲ್ಲಿ ಭಾರತವು ಚೀನದಿಂದ ಆಮದು ಮಾಡಿ ಕೊಂಡಿರುವ ಸರಕುಗಳ ಪ್ರಮಾಣ ಶೇ. 31ರಷ್ಟು ಹೆಚ್ಚಳವಾಗಿದೆ. ಆದರೆ ಭಾರತವು ಚೀನಗೆ ರಫ್ತು ಮಾಡುವ ಸರಕುಗಳ ಪ್ರಮಾಣ ಶೇ.36.4ರಷ್ಟು ಕುಸಿತವಾಗಿದೆ ಎಂದೂ ಒಕ್ಕೂಟ ಪತ್ರದಲ್ಲಿ ಉಲ್ಲೇಖಿಸಿದೆ.
ಚೀನಕ್ಕೆ “ಉಡುಗೊರೆ’!: ಇನ್ನೊಂದೆಡೆ, ಭಾರತ-ಚೀನ ವ್ಯಾಪಾರದ ಕುರಿತು ಕೇಂದ್ರ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿರುವ ದಿಲ್ಲಿ ಸಿಎಂ ಕೇಜ್ರಿವಾಲ್, “ಗಡಿಯಲ್ಲಿ ಕ್ಯಾತೆ ತೆಗೆಯುತ್ತಿ ರುವ ಚೀನಕ್ಕೆ ಶಿಕ್ಷೆ ನೀಡುವ ಬದಲು ಕೇಂದ್ರ ಸರಕಾರವು, ಆ ದೇಶಕ್ಕೆ ಉಡುಗೊರೆಯನ್ನು ನೀಡುತ್ತಿದೆ. ಭಾರೀ ಪ್ರಮಾಣದಲ್ಲಿ ಚೀನದ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಮೂಲಕ ಆ ದೇಶಕ್ಕೆ ನೆರವಾಗುತ್ತಿದೆ. ದೇಶದ ಯೋಧರ ಮೇಲೆ ಗೌರವವಿದ್ದರೆ, ಸ್ವಲ್ಪ ಧೈರ್ಯ ತೋರಿಸಿ ಚೀನ ಉತ್ಪನ್ನಗಳನ್ನು ಬಹಿಷ್ಕರಿಸಿ’ ಎಂದು ಸವಾಲು ಹಾಕಿªದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MUST WATCH
ಹೊಸ ಸೇರ್ಪಡೆ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ