ಹರಕೆ ತೀರಿಸಲು ಪಶುಪತಿನಾಥನ ದರ್ಶನಕ್ಕೆಂದು ಹೊರಟಿದ್ದಾತ ವಿಮಾನ ಪತನದಲ್ಲಿ ಕೊನೆಯುಸಿರು
Team Udayavani, Jan 16, 2023, 11:24 AM IST
ಹೊಸದಿಲ್ಲಿ: ನೇಪಾಳದಲ್ಲಿ ಭಾನುವಾರ ವಿಮಾನ ಪತನದಲ್ಲಿ ಸಾವನ್ನಪ್ಪಿದ ಐವರು ಭಾರತೀಯರಲ್ಲಿ ಒಬ್ಬರಾದ ಉತ್ತರ ಪ್ರದೇಶದ ಸೋನಯ ಜೈಸ್ವಾಲ್ ಅವರು ಪ್ರಸಿದ್ಧ ಪಶುಪತಿನಾಥ ದೇವಸ್ಥಾನಕ್ಕೆಂದು ಹೊರಟಿದ್ದರು ಎಂದು ವರದಿಯಾಗಿದೆ.
ಮದ್ಯದಂಗಡಿ ಮಾಲೀಕರಾದ ಮೂವತ್ತೈದು ವರ್ಷದ ಸೋನು ಜೈಸ್ವಾಲ್ ಅವರು ಮಗನ ಹರಕೆ ತೀರಿಸಲು ಕಠ್ಮಂಡುವಿನ ಪ್ರಸಿದ್ಧ ಪಶುಪತಿನಾಥ ದೇವಾಲಯಕ್ಕೆ ಪೂಜೆ ಸಲ್ಲಿಸಲು ತೆರಳಿದ್ದರು. ಸುಮಾರು ಆರು ತಿಂಗಳ ಹಿಂದೆ ಮಗನ ಕುರಿತಾದ ಬಯಕೆಯೊಂದು ನೆರವೇರಿತ್ತು. ಹೀಗಾಗಿ ಪಶುಪತಿನಾಥನ ದರ್ಶನಕ್ಕೆ ಹೊರಟಿದ್ದರು ಎಂದು ಅವರ ಸಂಬಂಧಿ ಹೇಳಿದರು.
ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯ ಚಕ್ ಜೈನಬ್ ಗ್ರಾಮಕ್ಕೆ ಜೈಸ್ವಾಲ್ ಮತ್ತು ಆತನ ಜೊತೆಗಿದ್ದ ಮೂವರು ಗೆಳೆಯರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಆಘಾತಕ್ಕೊಳಗಾದ ಗ್ರಾಮಸ್ಥರು ಅವರ ಮನೆಯಲ್ಲಿ ಜಮಾಯಿಸಿದ್ದಾರೆ.
ಇದನ್ನೂ ಓದಿ:ಚಿಕ್ಕಮಗಳೂರು: ಕೆಪಿಸಿಸಿ ಕಿಸಾನ್ ಸೆಲ್ ರಾಜ್ಯ ಸಂಚಾಲಕನ ಮನೆಗೆ ಐ.ಟಿ. ದಾಳಿ
ಜೈಸ್ವಾಲ್ ಗೆ ಇಬ್ಬರು ಪುತ್ರಿಯರಿದ್ದು, ಪುತ್ರನಿದ್ದಲ್ಲಿ ಪಶುಪತಿನಾಥ ದೇವಾಲಯಕ್ಕೆ ಭೇಟಿ ನೀಡುವುದಾಗಿ ಹರಕೆ ಹೊತ್ತಿದ್ದರು ಎಂದು ಅವರ ಸಂಬಂಧಿ ಮತ್ತು ಚಕ್ ಜೈನಬ್ ಗ್ರಾಮದ ಮುಖ್ಯಸ್ಥ ವಿಜಯ್ ಜೈಸ್ವಾಲ್ ಪಿಟಿಐಗೆ ತಿಳಿಸಿದ್ದಾರೆ.
“ಸೋನು, ತನ್ನ ಮೂವರು ಸ್ನೇಹಿತರೊಂದಿಗೆ ಜನವರಿ 10 ರಂದು ನೇಪಾಳಕ್ಕೆ ಹೋಗಿದ್ದರು. ಈಗ ಮಗನನ್ನು ಹೊಂದುವ ಅವರ ಆಸೆ ಈಡೇರಿದ ಕಾರಣ ಭಗವಾನ್ ಪಶುಪತಿನಾಥನಿಗೆ ಪೂಜೆ ಸಲ್ಲಿಸುವುದು ಅವರ ಮುಖ್ಯ ಉದ್ದೇಶವಾಗಿತ್ತು. ಆದರೆ ವಿಧಿಯು ಬೇರೆಯದಾಗಿತ್ತು” ಎಂದು ಭಾವುಕರಾಗಿ ವಿಜಯ್ ಜೈಸ್ವಾಲ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್