ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವುದಾದರೆ ಚಿನ್ನದ ಇಟ್ಟಿಗೆ ಕೊಡುವೆ: ಮೊಘಲ್ ವಂಶಸ್ಥ
Team Udayavani, Aug 19, 2019, 10:55 AM IST
ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವ ನಡುವೆಯೇ ಅಯೋಧ್ಯೆಯಲ್ಲಿ ಒಂದು ವೇಳೆ ರಾಮ ಮಂದಿರ ನಿರ್ಮಾಣ ಮಾಡುವುದಾದರೆ ಚಿನ್ನದ ಇಟ್ಟಿಗೆಯನ್ನು ದಾನವಾಗಿ ಕೊಡುವುದಾಗಿ ಮೊಘಲ್ ವಂಶಸ್ಥ ಪ್ರಿನ್ಸ್ ಹಬೀಬುದ್ದೀನ್ ಭರವಸೆ ನೀಡಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿರುವ, ಹೈದರಾಬಾದ್ ನಲ್ಲಿ ವಾಸಿವಾಗಿರುವ ಹಬೀಬುದ್ದೀನ್ ಟ್ಯೂಸಿ ಮೊಘಲ್ ವಂಶದ ಆರನೇಯ ತಲೆಮಾರಿನವರಾಗಿದ್ದಾರೆ. 1529ರಲ್ಲಿ ಮೊಘಲ್ ವಂಶದ ಮೊದಲ ದೊರೆ ಬಾಬರ್ ಬಾಬ್ರಿ ಮಸೀದಿಯನ್ನು ನಿರ್ಮಿಸಿದ್ದರು. ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಸ್ಥಳ ಸುಪ್ರೀಂಕೋರ್ಟ್ ತನಗೆ ಹಸ್ತಾಂತರಿಸಬೇಕು, ಯಾಕೆಂದರೆ ನಾನು ಆ ಜಾಗದ ನಿಜವಾದ ಹಕ್ಕುದಾರನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಒಂದು ಸುಪ್ರೀಂಕೋರ್ಟ್ ನನಗೆ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಸ್ಥಳವನ್ನು ನನಗೆ ಹಸ್ತಾಂತರಿಸಿದರೆ. ರಾಮಮಂದಿರ ನಿರ್ಮಿಸಲು ನಾನು ಇಡೀ ಜಾಗವನ್ನು ದಾನವಾಗಿ ನೀಡುವುದಾಗಿ ಘೋಷಿಸಿದ್ದಾರೆ. ಬಾಬ್ರಿ ಮಸೀದಿ ನಿರ್ಮಿಸಿದ ಜಾಗ ರಾಮನ ಜನ್ಮಭೂಮಿಯಾಗಿದೆ ಎಂಬುದು ಹಿಂದೂಗಳ ನಂಬಿಕೆಯಾಗಿದೆ.
1992ರ ಡಿಸೆಂಬರ್ 6ರಂದು ಸಾವಿರಾರು ಕರಸೇವಕರು ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ್ದರು. 50ರ ಹರೆಯದ ಹಬೀಬುದ್ಧೀನ್, ಆ ಜಾಗದ ನಿಜವಾದ ವಾರಿಸುದಾರ ತಾನು ಎಂಬುದಾಗಿ ಸುಪ್ರೀಂಕೋರ್ಟ್ ನಲ್ಲಿ ದಾವೆ ಹೂಡಿದ್ದಾರೆ. ಏತನ್ಮಧ್ಯೆ ಹಬೀಬುದ್ದೀನ್ ಸಲ್ಲಿಸಿದ್ದ ಅರ್ಜಿ ಇನ್ನಷ್ಟೇ ಅಂಗೀಕರಿಸಿದ ವಿಚಾರಣೆ ನಡೆಯಬೇಕಾಗಿದೆ.
ಬಾಬ್ರಿ ಮಸೀದಿ ಜಾಗಕ್ಕ ಸಂಬಂಧಿಸಿದ ದಾಖಲೆ, ಮಾಲೀಕತ್ವದ ಬಗ್ಗೆ ಮೂರನೇಯವರು ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಆದರೆ ಮೊಘಲ ವಂಶಸ್ಥನಾದ ನನಗೆ ನನ್ನ ಅಭಿಪ್ರಾಯವನ್ನು ಹೇಳಲು ಹಕ್ಕುದಾರನಾಗಿದ್ದೇನೆ ಎಂದು ಹಬೀಬುದ್ದೀನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ