ಎಸ್‌ಎಸ್‌ಬಿ ಸಂದರ್ಶನ; ಬೆಂಕಿ ಪೊಟ್ಟಣ ಉತ್ತರದಿಂದ ರಾವತ್‌ ಜೀವನ ಬದಲು

ರಾವತ್‌ ನ್ಯಾಶನಲ್‌ ಡಿಫೆನ್ಸ್‌ ಅಕಾಡೆಮಿಗೆ ಆಯ್ಕೆಯಾಗಿದ್ದ ಸಿಹಿ ಸುದ್ದಿ ತಲುಪಿತ್ತು.

Team Udayavani, Dec 10, 2021, 11:25 AM IST

ಬೆಂಕಿ ಪೊಟ್ಟಣ ಉತ್ತರದಿಂದ ಜೀವನ ಬದಲು

“ಐದು ದಿನಗಳ ಚಾರಣಕ್ಕೆ ತೆರಳುವಾಗ ಪ್ರಮುಖವಾಗಿ ಏನನ್ನು ತೆಗೆದುಕೊಂಡು ಹೋಗಬೇಕು?’  - ಹೀಗೆಂದು ಜ| ಬಿಪಿನ್‌ ರಾವತ್‌ ಅವರಿಗೆ ಸರ್ವಿಸಸ್‌ ಸೆಲೆಕ್ಷನ್‌ ಬೋರ್ಡ್‌ (ಎಸ್‌ಎಸ್‌ಬಿ) ಸಂದರ್ಶನಕ್ಕೆ ಹಿರಿಯ ಸೇನಾಧಿಕಾರಿ ಪ್ರಶ್ನೆ ಕೇಳಿದ್ದರಂತೆ. ಅದಕ್ಕೆ ಬಿಪಿನ್‌ ರಾವತ್‌ ಅವರು “ಬೆಂಕಿಪೆಟ್ಟಿಗೆ’ ಎಂದು ಉತ್ತರಿಸಿದ್ದರು. ಜತೆಗೆ ಆ ಉತ್ತರಕ್ಕೆ ಸಮರ್ಥನೆಗಳನ್ನೂ ನೀಡಿದ್ದರಂತೆ. ಕೆಲವು ದಿನಗಳು ಕಳೆದ ಮೇಲೆ, ರಾವತ್‌ ನ್ಯಾಶನಲ್‌ ಡಿಫೆನ್ಸ್‌ ಅಕಾಡೆಮಿಗೆ ಆಯ್ಕೆಯಾಗಿದ್ದ ಸಿಹಿ ಸುದ್ದಿ ತಲುಪಿತ್ತು.

ಸೇನೆಗೆ ಸೇರಲು ಬಯಸುವ ಯುವಕರಿಗೆ ಪ್ರೋತ್ಸಾಹ ತುಂಬುವ ಕಾರ್ಯಕ್ರಮವೊಂದಲ್ಲಿ ವಿದ್ಯಾರ್ಥಿಗಳಿಗೆ ರಕ್ಷಣ ಪಡೆಗಳ ಮುಖ್ಯಸ್ಥರಾಗಿದ್ದ  ಜ| ಬಿಪಿನ್‌ ರಾವತ್‌ ಈ ಕುತೂಹಲಕಾರಿ ಅಂಶವನ್ನು ವಿವರಿಸಿದ್ದರು. ಸೇನಾಧಿಕಾರಿಗಳ ಕುಟುಂಬಕ್ಕೇ ಸೇರಿದ್ದ ಜ| ರಾವತ್‌ ಅವರು ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ಪರೀಕ್ಷೆ ಬರೆದು ಉತ್ತೀರ್ಣರಾಗಿ, ಪುಣೆ ಸಮೀಪದ ಖಡಕ್‌ವಾಸ್ಲಾದಲ್ಲಿರುವ ನ್ಯಾಶನಲ್‌ ಡಿಫೆನ್ಸ್‌ ಅಕಾಡೆಮಿಗೆ ಸೇರ್ಪಡೆಯಾಗಿದ್ದರು.

ಅಲಹಾಬಾದ್‌ನ ಸರ್ವಿಸಸ್‌ ಸೆಲೆಕ್ಷನ್‌ ಬೋರ್ಡ್‌ (ಎಸ್‌ಎಸ್‌ಬಿ)ನ ಪರೀಕ್ಷೆಯಲ್ಲಿಯೂ ಉತ್ತೀರ್ಣ­ರಾಗಿದ್ದರು. ಅದಕ್ಕೆ ಸಂಬಂಧಿಸಿದ ಐದು ದಿನಗಳ ಕಠಿನ ಅರ್ಹತಾ ಪರೀಕ್ಷೆಗಳು ಮುಕ್ತಾಯವಾದ ಬಳಿಕ, ಪ್ರಧಾನ ಅಂಶವಾಗಿರುವ ಮೌಖೀಕ ಸಂದರ್ಶನದಲ್ಲಿದ್ದ ಹಿರಿಯ ಸೇನಾಧಿಕಾರಿ, ರಾವತ್‌ಗೆ ಹವ್ಯಾಸಗಳ ಬಗ್ಗೆ ಪ್ರಶ್ನಿಸಿದ್ದರು. ಅದಕ್ಕೆ ಚಾರಣ ಎಂದು ಉತ್ತರಿಸಿದ್ದರು ರಾವತ್‌. “ಒಂದು ವೇಳೆ ಐದು ದಿನಗಳ ಚಾರಣಕ್ಕೆ ತೆರಳಬೇಕು ಎಂದಾದರೆ, ಪ್ರಧಾನವಾಗಿ ಯಾವ ವಸ್ತುವನ್ನು ತೆಗೆದುಕೊಳ್ಳಬೇಕು’ ಎಂದು ಸೇನಾಧಿಕಾರಿ ಪ್ರಶ್ನೆ ಕೇಳಿದ್ದರು. ಅದಕ್ಕೆ ಬೆಂಕಿಪೊಟ್ಟಣ ಎಂದು ಥಟ್ಟನೆ ಉತ್ತರಿಸಿದ್ದರು. ಅದಕ್ಕೆ ಸಮರ್ಥನೆ ನೀಡಿದ್ದ ರಾವತ್‌ “ಬೆಂಕಿ ಪೊಟ್ಟಣ ಇದ್ದರೆ ನನಗೆ ಹಲವು ರೀತಿಯಲ್ಲಿ ಉಪಯೋಗ­ವಾಗುತ್ತದೆ. ಮಾನವ ಜೀವನದ ಆರಂಭದ ದಿನಗಳಲ್ಲಿ ಬೆಂಕಿಯ ಉಪಯೋಗ ಅರಿತು ಕೊಂಡದ್ದೇ ಪ್ರಧಾನ ಸಾಧನೆ ಮತ್ತು ಯಶಸ್ಸು. ಹೀಗಾಗಿ, ಚಾರಣಕ್ಕೆ ತೆರಳುವಾಗ  ಬೆಂಕಿ ಪೊಟ್ಟಣ ಪ್ರಧಾನವಾಗಿ ತೆಗೆದುಕೊಳ್ಳಬೇಕು’ ಎಂದಿದ್ದರು.

ಒತ್ತಡ ಹೇರಿದ್ದರು: ರಾವತ್‌ ನೀಡಿದ್ದ ಸುದೀರ್ಘ‌ ವಿವರಣೆ ಸರಿಯಲ್ಲವೆಂದು ಸಂದರ್ಶನ ಸಮಿತಿ ಯಲ್ಲಿದ್ದ ಸೇನಾಧಿಕಾರಿ ವಾದಿಸಿದ್ದರು. ಆದರೆ, ರಾವತ್‌ ಬೆಂಕಿ ಪೊಟ್ಟಣವೇ ಸರಿಯಾದ ಉತ್ತರ ಎಂದು ವಿನಯ ಪೂರ್ವಕವಾಗಿ ಉತ್ತರಿಸಿದ್ದರು. ಕರ್ತವ್ಯದಲ್ಲಿ ಇರುವ ವೇಳೆ ಎಂಥಾ ಒತ್ತಡ ಬಂದರೂ ನಿಲುವು ಸಡಿಲಿಕೆ ಮಾಡಬಾರದು ಎಂಬುದನ್ನು ಸೇನೆಗೆ ಸೇರುವ ಆಕಾಂಕ್ಷಿಗಳಿಗೆ ತಿಳಿಸಿ ಹೇಳುವ ನಿಟ್ಟಿನಲ್ಲಿ ಜ| ರಾವತ್‌ ಈ ಅಂಶ ಪ್ರಸ್ತಾವಿಸಿದ್ದರು. ಇದಾದ ಕೆಲವು ದಿನಗಳ ಬಳಿಕ ನ್ಯಾಶನಲ್‌ ಡಿಫೆನ್ಸ್‌ ಅಕಾಡೆಮಿಗೆ ಆಯ್ಕೆಯಾದ ಸಿಹಿ ಸುದ್ದಿ ಅವರಿಗೆ ತಲುಪಿತ್ತು.

ಟಾಪ್ ನ್ಯೂಸ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.