ಇದು ಮೇಘಾಲಯ ಕಾಲ!
Team Udayavani, Jul 20, 2018, 6:00 AM IST
ನವದೆಹಲಿ: ನಾವೀಗ ಮೇಘಾಲಯ ಕಾಲದಲ್ಲಿ ವಾಸಿಸುತ್ತಿದ್ದೇವೆ. ನಿಜ. ಭೂಗರ್ಭಶಾಸ್ತ್ರಜ್ಞರು ಇದೀಗ ಭೂಮಿಯ ಭೌಗೋಳಿಕ ಇತಿಹಾಸದಲ್ಲಿ ಹೊಸ ಹಂತವನ್ನು ಗುರುತಿಸಿದ್ದು, ಇದನ್ನು ಮೇಘಾಲಯನ್ ಏಜ್ ಎಂದು ಕರೆದಿದ್ದಾರೆ. 4200 ವರ್ಷಗಳ ಹಿಂದೆ ಭೂಮಿಯ ವಾತಾವರಣ ಬದಲಾಗಿದ್ದನ್ನು ಗುರುತಿಸಲು ಮೇಘಾ ಲಯವೇ ನೆರವಾಗಿತ್ತು. ಹೀಗಾಗಿ ಈ ಕಾಲವನ್ನು ಮೇಘಾಲಯ ಕಾಲ ಎಂದೇ ಕರೆಯಲಾಗಿದೆ. 4200 ವರ್ಷಗಳ ಹಿಂದೆ ಶುರುವಾದ ಈ ಕಾಲ ಇಂದಿಗೂ ಮುಂದುವರಿದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಈಜಿಪ್ಟ್ನಿಂದ ಚೀನಾವರೆಗೂ ನಾಗರಿಕತೆ ಯನ್ನೇ ಅಳಿಸಿಹಾಕಿದ ಭಾರೀ ಬರದಿಂದಾಗಿ ಮೇಘಾಲಯ ಕಾಲ ಆರಂಭ ವಾಯಿತು. ಈ ಹಿಂದೆ ಹಾಲೋಸೀನ್ ಎಪೋಚ್ ಎಂಬ ಕಾಲವಿತ್ತು. ಇದು 11,700 ವರ್ಷಗಳ ಅವಧಿಯದ್ದಾಗಿತ್ತು. ಮೇಘಾಲಯ ಕಾಲವು ಅತ್ಯಂತ ಮಹತ್ವದ್ದಾಗಿದ್ದು, ವಿಶಿಷ್ಟವೂ ಆಗಿದೆ. ಇಡೀ ಭೂಪ್ರದೇಶದಲ್ಲಿ ಕೃಷಿ ಆಧರಿತ ಸಮಾಜ ಬರದಿಂದಾಗಿ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡಿದವು. ಮೇಘಾಲಯವೂ ಸೇರಿದಂತೆ ವಿಶ್ವದ ಏಳೂ ಖಂಡಗಳಲ್ಲಿ ಇದಕ್ಕೆ ಪೂರಕವಾದ ಸಾಕ್ಷಿ ಮಣ್ಣಿನಲ್ಲಿ ದೊರೆತಿದೆ. ಈ ಬರ ಸುಮಾರು 200 ವರ್ಷಗಳವರೆಗೆ ಇತ್ತು. ಈಜಿಪ್ಟ್, ಗ್ರೀಸ್, ಸಿರಿಯಾ, ಪ್ಯಾಲೆಸ್ತೀನ್, ಮೆಸಪೊಟೇಮಿಯಾದಿಂದ ಜನರು ವಲಸೆ ಹೋದರು ಎಂದು ಅಂತಾರಾಷ್ಟ್ರೀಯ ಭೂಗರ್ಭಶಾಸ್ತ್ರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸ್ಟಾನ್ಲ ಫಿನ್ನೆ ಹೇಳಿದ್ದಾರೆ.
ಈಗಿನ ಕಾಲವನ್ನು ಮೇಘಾಲಯನ್ ಏಜ್ ಎಂದು ಕರೆದ ಭೂಗರ್ಭಶಾಸ್ತ್ರಜ್ಞರು
ಬರಗಾಲದಿಂದ ಭೂ ಹವಾಮಾನ ಬದಲಾಗಿದ್ದೇ ಕಾರಣ
ಅದಕ್ಕೂ ಮೊದಲು ಇದ್ದಿದ್ದು ಹಾಲೋಸೀನ್ ಎಪೋಚ್ ಎಂಬ ಕಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್