ಟಿಕೆಟ್ರಹಿತ ರೈಲು ಪ್ರಯಾಣ:ದಂಡ ಪಾವತಿಗೆ ದುಡ್ಡಿಲ್ಲದೆ ಹರಾಜಾದ ಬಸಂತಿ
Team Udayavani, Aug 3, 2018, 12:02 PM IST
ಮುಂಬಯಿ : ಟಿಕೆಟ್ ರಹಿತ ಪ್ರಯಾಣಕ್ಕಾಗಿ ಸಿಕ್ಕಿಬಿದ್ದ “ಬಸಂತಿ’ ಬಳಿ ದಂಡ ಪಾವತಿಸಲು ದುಡ್ಡಿಲ್ಲದ ಕಾರಣಕ್ಕೆ ಆಕೆಯನ್ನು ರೈಲ್ವೆ ಅಧಿಕಾರಿಗಳು ಹರಾಜು ಹಾಕಿ ದಂಡ ವಸೂಲಿ ಮಾಡಿದ ಘಟನೆ ವರದಿಯಾಗಿದೆ.
ಅಂದ ಹಾಗೆ ಬಸಂತಿ ಒಬ್ಬಳೇ, ಟಿಕೆಟ್ ಇಲ್ಲದೆ, ಪ್ರಯಾಣಿಸುತ್ತಿರಲಿಲ್ಲ; ಆಕೆಯ ಜತೆಗೆ ಒಬ್ಬ ಪುರುಷನೂ ಇದ್ದ. ರೈಲ್ವೆ ನಿಯಮಗಳ ಪ್ರಕಾರ ಬಸಂತಿಯನ್ನು ರೈಲಿನಲ್ಲಿ ಒಯ್ಯುವಂತಿಲ್ಲ. ಟಿಕೆಟ್ ಕಲೆಕ್ಟರ್ ಬಂದಾಗ “ಬಸಂತಿ’ಯ ಜತೆಗಿದ್ದ ವ್ಯಕ್ತಿ ತನ್ನಲ್ಲಿ ಟಿಕೆಟ್ ಇಲ್ಲದ ಕಾರಣಕ್ಕೆ ದಂಡ ಪಾವತಿಸಲಾಗದೇ ಅಲ್ಲಿಂದ ಪರಾರಿಯಾದ. ಹಾಗಾಗಿ ಟಿಕೆಟ್ ಕಲೆಕ್ಟರ್ ವಶದಲ್ಲಿ ಬಸಂತಿ ಒಂಟಿಯಾಗಿ ಉಳಿದಳು.
ಟಿಕೆಟ್ ರಹಿತ ಪ್ರಯಾಣಕ್ಕಾಗಿ ವಿಧಿಸುವ ದಂಡದ ಹಣವನ್ನು ವಸೂಲಿ ಮಾಡಲೇಬೇಕಾದ ಪ್ರಮೇಯ ಈಗ ರೈಲ್ವೇ ಅಧಿಕಾರಿಗಳಿಗೆ ಸಂಕಷ್ಟವನ್ನು ತಂದೊಡ್ಡಿತ್ತು. ಕೊನೆಗೆ ಅವರು “ಬಸಂತಿ’ಯನ್ನು 2,500 ರೂ.ಗಳಿಗೆ ಹರಾಜು ಹಾಕಿ ದಂಡದ ಹಣವನ್ನು ವಸೂಲಿ ಮಾಡಿದರು. ಮುಂಬಯಿಯ ಲೋಕಲ್ ರೈಲ್ವೆಯ ಮಸ್ಜಿದ್ ಸ್ಟೇಶನ್ನಲ್ಲಿ “ಬಸಂತಿ ಹರಾಜು ಪ್ರಸಂಗ’ ನಡೆಯಿತು.
ಮುಂಬಯಿ ಲೋಕಲ್ ಟ್ರೈನಿನಲ್ಲಿ ಟಿಕೆಟ್ ರಹಿತ ಪ್ರಯಾಣಕ್ಕೆ 256 ರೂ. ದಂಡ ಇದೆ. ಆದರೆ ಬಸಂತಿ ಮಾರಾಟದಿಂದ ರೈಲ್ವೆ ಇಲಾಖೆಗೆ ಇದರ ಹತ್ತು ಪಟ್ಟು ಲಾಭವಾಯಿತು !
ಇಷ್ಟಕ್ಕೂ ಟಿಕೆಟ್ ರಹಿತ ಪ್ರಯಾಣಕ್ಕಾಗಿ ಸಿಕ್ಕಿ ಬಿದ್ದು ದಂಡ ಪಾವತಿಸಲು ಹಣ ಇಲ್ಲದ ಕಾರಣಕ್ಕೆ ರೈಲ್ವೇ ಅಧಿಕಾರಿಗಳಿಂದ ಹರಾಜು ಹಾಕಲ್ಪಟ್ಟು ದಂಡ ವಸೂಲಿ ನಡೆದ ಪ್ರಕರಣದ “ಬಸಂತಿ’ ಯಾರೆಂದು ತಿಳಿದಿದ್ದೀರಿ ? ಆಕೆ ಒಂದು ಆಡು !
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ