ಮುಂಬಯಿಯ ಕೊಲ್ಲಿಗಳನ್ನು ಜೋಡಿಸಲಿವೆ 3 ಕೇಬಲ್‌ ಆಧಾರಿತ ಸೇತುವೆಗಳು


Team Udayavani, Jul 30, 2019, 11:13 PM IST

14

ಮುಂಬಯಿ: ಎಲ್ಲವೂ ಯೋಜನೆಯ ಪ್ರಕಾರ ನಡೆದರೆ, ಮುಂಬಯಿ ತನ್ನ ಪಶ್ಚಿಮ ಉಪನಗರಗಳಲ್ಲಿ ಮೂರು ಕೇಬಲ್‌ ಆಧಾರಿತ ಸೇತುವೆಗಳನ್ನು ಹೊಂದಲಿದೆ. ಮಢ್‌ನಿಂದ ವರ್ಸೋವಾ, ಮಾರ್ವೆಯಿಂದ ಮನೋರಿ ಮತ್ತು ಲೋಖಂಡ್‌ವಾಲಾದಿಂದ ಮಲಾಡ್‌ಗೆ ಸಂಪರ್ಕಿಸುವ ಆರು ಪಥಗಳ ಮೂರು ಸೇತುವೆಗಳನ್ನು ನಿರ್ಮಿಸಲು ಬೃಹನ್ಮುಂಬಯಿ ಮಹಾನಗರ ಪಾಲಿಕೆಯು ಉತ್ಸುಕ ಕಂಪೆನಿಗಳಿಂದ ಬಿಡ್‌ಗಳನ್ನು ಆಹ್ವಾನಿಸಿದೆ. ಮುಂಬಯಿಯ ಕೊಲ್ಲಿಗಳನ್ನು ಜೋಡಿಸಲಿರುವ ಈ ಸೇತುವೆಗಳ ನಿರ್ಮಾಣಕ್ಕೆ 1,145 ಕೋಟಿ ರೂ.ಗಳ ಖರ್ಚು ಅಂದಾಜಿಸಲಾಗಿದೆ.

ನಗರವು ಈಗಾಗಲೇ ಎರಡು ಕೇಬಲ್‌ ಆಧಾರಿತ ಸೇತುವೆಗಳನ್ನು ಹೊಂದಿದೆ. ಈ ಪೈಕಿ ಮೊದಲನೆಯದಾಗಿರುವ ಬಾಂದ್ರಾ-ವರ್ಲಿ ಸೀ ಲಿಂಕ್‌ ಕಳೆದ ಜುಲೈ 23 ರಂದು ತನ್ನ 10 ನೇ ವಾರ್ಷಿಕೋತ್ಸವವನ್ನು ಆಚರಿಸಿದೆ. ವರ್ಸೋವಾ-ಅಂಧೇರಿ-ಘಾಟ್ಕೊಪರ್‌ ಕಾರಿಡಾರ್‌ನಲ್ಲಿರುವ ಮೆಟ್ರೋ ರೈಲು ವಯಾಡಕ್ಟ್ ಎರಡನೇ ಕೇಬಲ್‌ ಆಧಾರಿತ ಸೇತುವೆ ಆಗಿದೆ. ನಗರದ ಕೊಲ್ಲಿಗಳಲ್ಲಿ ನಿರ್ಮಾಣವಾಗಲಿರುವ ಹೊಸ ಸೇತುವೆಗಳಿಂದ ಮುಂಬಯಿಗರ ಸಂಚಾರ ಸುಗಮವಾಗಲಿದೆ. ಪ್ರಸ್ತುತ ನಗರ ನಿವಾಸಿಗರು ಈ ಕೊಲ್ಲಿಗಳಿಗೆ ತಲುಪಲು ಬೋಟ್‌ಗಳನ್ನು ಬಳಸುತ್ತಿದ್ದಾರೆ. ಒಂದೊಮ್ಮೆ ಈ ಸ್ಥಳಗಳಲ್ಲಿ ಸೇತುವೆಗಳು ತಲೆ ಎತ್ತಿದರೆ ಮನೋರಿಯಿಂದ ಮಾರ್ವೆ, ವರ್ಸೋವಾದಿಂದ ಮಢ್‌ ದ್ವೀಪದ ಪ್ರವಾಸಕ್ಕೆ ಪ್ರವಾಸಿಗರಿಗೆ ವಾಹನಗಳ ಮೂಲಕ ತಲುಪಲು ಸಾಧ್ಯವಾಗಲಿದೆ. ಮಹಾನಗರ ಪಾಲಿಕೆಯು ನಗರದ ಈ ಸ್ಥಳಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲು ಬಯಸಿದೆ.

ಯೋಜನೆಯ ಪ್ರಕಾರ, ಮಢ್‌ನಿಂದ ವರ್ಸೋವಾ ಕೊಲ್ಲಿ ನಡುವೆ 1.5 ಕಿ.ಮೀ. ಉದ್ದದ ಸೇತುವೆ ನಿರ್ಮಾಣವಾಗಲಿದೆ. 1.5 ಕಿ.ಮೀ. ಉದ್ದದ ಎರಡನೇ ಸೇತುವೆ ಮಲಾಡ್‌ನ‌ ಮನೋರಿ ಕೊಲ್ಲಿಯಿಂದ ಮಾರ್ವೆ-ಮನೋರಿ ರಸ್ತೆಯನ್ನು ಸಂಪರ್ಕಿಸಲಿದೆ. ಅದೇ, 1.8 ಕಿ.ಮೀ. ಉದ್ದದ ಮೂರನೇ ಸೇತುವೆ ಲೋಖಂಡ್‌ವಾಲಾದಲ್ಲಿರುವ ಓಶಿವಾರಾ ನದಿಯ ಮೂಲಕವಾಗಿ ಮಲಾಡ್‌ ಪಶ್ಚಿಮದ ಲಗೂನ್‌ ರಸ್ತೆಗೆ ಸಂಪರ್ಕಿಸಲಿದೆ. ಈ ಯೋಜನೆಯು ಆರಂಭಿಕ ಹಂತದಲ್ಲಿದ್ದು ಯೋಜನೆಗೆ ಸಂಬಂಧಿಸಿದ ಇನ್ನೂ ಹಲವು ಅನುಮತಿಗಳು ಬಾಕಿ ಉಳಿದಿವೆ. ಈ ಯೋಜನೆ ಅಭಿವೃದ್ಧಿ ಯೋಜನೆ 2034ರ ಭಾಗವಾಗಿದೆ.

ಮೊದಲ ಕೇಬಲ್‌ ಆಧಾರಿತ ಸೇತುವೆ
ಬಾಂದ್ರಾ-ವರ್ಲಿ ಸೀ ಲಿಂಕ್‌ ಮುಂಬಯಿಯ ಮೊದಲ ಕೇಬಲ್‌ ಆಧಾರಿತ ಸೇತುವೆಯಾಗಿದೆ. ಈ ಸೇತುವೆಯ ಉದ್ದ 6 ಕಿ.ಮೀ. ಆಗಿದ್ದು, 4 ಕಿ.ಮೀ. ಉದ್ದದ ಸೇತುವೆಯ ಭಾಗವು ಸಮುದ್ರದ ಮೇಲೆ ನಿಂತಿದೆ. ಇದರ ಒಟ್ಟು ನಿರ್ಮಾಣ ವೆಚ್ಚ 2,000 ಕೋಟಿ ರೂ. ಆಗಿದೆ. ಈ ಸೇತುವೆಯಲ್ಲಿ ಒಟ್ಟು 4 ಪಥಗಳಿವೆ.

ಮಳೆಗಾಲದಲ್ಲಿ ನೆಮ್ಮದಿ ಸಿಗಲಿದೆ
ಮಲಾಡ್‌-ವರ್ಸೋವಾ ಮತ್ತು ಮಾರ್ವೆ-ಮನೋರಿ ಈ ಎರಡು ಸೇತುವೆಗಳು ಅಸ್ತಿತ್ವದಲ್ಲಿರುವ ರಸ್ತೆಗೆಗೆ ಸಂಪರ್ಕ ಕಲ್ಪಿಸಲಿವೆ. ಇದರಿಂದ ಮಳೆಗಾಲದಲ್ಲಿ ದೋಣಿ ಸೇವೆಯನ್ನು ಮುಚ್ಚಿದಾಗ, ಜನರು ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ಹೋಗಲು ಅನುಕೂಲವಾಗಲಿದೆ.

ಏನಿದು ಕೇಬಲ್‌ ಆಧಾರಿತ ಸೇತುವೆ ?
ಕೇಬಲ್‌ ಆಧಾರಿತ ಸೇತುವೆ ಒಂದು ರೀತಿಯ ರಚನೆಯಾಗಿದ್ದು, ನದಿ, ಪರ್ವತ, ಕಣಿವೆ ಅಥವಾ ಮಾನವ ನಿರ್ಮಿತ ತಡೆಗೋಡೆಗಳನ್ನು ವಾಹನ ಅಥವಾ ಕಾಲ್ನಡಿಗೆಯ ಮೂಲಕ ದಾಟಲು ಇದನ್ನು ನಿರ್ಮಿಸಲಾಗುತ್ತದೆ.

ಟಾಪ್ ನ್ಯೂಸ್

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.