ಮೂಸಾ ಹತ್ಯೆ : ಕಾಶ್ಮೀರದಲ್ಲಿ ಎರಡನೇ ದಿನವೂ ಮುಂದುವರಿದ ಕರ್ಫ್ಯೂ, ಬಿಗಿ ಭದ್ರತೆ
Team Udayavani, May 25, 2019, 11:19 AM IST
ಶ್ರೀನಗರ : ಅಲ್ ಕಾಯಿದಾ ಉಗ್ರ ಸಂಘಟನೆಗೆ ಸಂಯೋಜಿತವಾಗಿರುವ ಸಮೂಹವೊಂದರ ತಥಾಕಥಿತ ಮುಖ್ಯಸ್ಥ ಝಕೀರ್ ಮೂಸಾ ನಿನ್ನೆ ಶುಕ್ರವಾರ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಹತನಾದುದನ್ನು ಅನುಸರಿಸಿ ವಿಧಿಸಲಾಗಿದ್ದ ಕರ್ಫ್ಯೂ ಇಂದು ಶನಿವಾರ ಕಾಶ್ಮೀರದ ವಿವಿಧ ಭಾಗಗಳಲ್ಲಿ ಮುಂದುವರಿದಿದೆ.
ಕರ್ಫ್ಯೂ ಮುಂದುವರಿದಿರುವ ಕಾರಣ ಶ್ರೀನಗರ, ಕುಲಗಾಂವ್ ಮತ್ತು ಪುಲ್ವಾಮಾ ಪಟ್ಟಣಗಳಲ್ಲಿ ಜನರ ಚಲನ ವಲನಗಳನ್ನು ನಿರ್ಬಂಧಿಸಲಾಗಿದೆ.
ಇಂದು ಕೂಡ ಶಾಲೆ ಕಾಲೇಜುಗಳು ಮುಚ್ಚಿವೆ. ಅಂತೆಯೇ ಕಣಿವೆ ಪ್ರದೇಶದಲ್ಲಿ ಮೊಬೈಲ್ ಇಂಟರ್ನೆಟ್ ಅಮಾನತಾಗಿರುವುದು ಕೂಡ ಮುಂದುವರಿದಿದೆ.
ಉದ್ರಿಕ್ತ ಪರಿಸ್ಥಿತಿಯ ಕಾರಣ ಬಾರಾಮುಲ್ಲಾ ಮತ್ತು ಬನಿಹಾಲ್ ನಡುವಿನ ರೈಲು ಸಂಚಾರ ಸ್ಥಗಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಿಡುವ ಸಲುವಾಗಿ ಕಾಶ್ಮೀರ ಕಣಿವೆಯಲ್ಲಿ ಇಂದು ಶನಿವಾರ ಕೂಡ ಕರ್ಫ್ಯೂ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೌಹಟ್ಟಾ, ರೈನಾವಾರಿ, ಖನ್ಯಾರ್, ಸಫಾಕದಾಲ್ ಮತ್ತು ಎಂ ಆರ್ ಗುಂಗ್ ಪೊಲೀಸ್ ಠಾಣೆ ವ್ಯಾಪ್ತಿ ಪ್ರದೇಶದಲ್ಲಿ ಬಿಗಿ ನಿರ್ಬಂಧಗಳು ಮುಂದುವರಿದಿವೆಯಾದರೆ ಮೈಸುಮಾ ಮತ್ತು ಕ್ರಾಲ್ಖುಡ್ ಪ್ರದೇಶಗಳಲ್ಲಿ ಆಂಶಿಕ ನಿರ್ಬಂಧಗಳಿವೆ.
ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಎಚ್ಚರ ವಹಿಸಲು ಕಣಿವೆಯಲ್ಲಿ ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಂದ್ರಾ- ವರ್ಲಿ ಸೀ ಲಿಂಕ್ಗೆ 25,000 ಟನ್ ಗರ್ಡರ್ ಅಳವಡಿಕೆ
Telangana: ಪಿಯು ಫಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ