ಮುಸ್ಲಿಂ ಎಂಬ ಏಕೈಕ ಕಾರಣಕ್ಕಾಗಿ ನನ್ನನ್ನು  ಗುರಿಯಾಗಿಸಲಾಗಿದೆ


Team Udayavani, Aug 19, 2017, 12:14 PM IST

zakirnaik.jpg

ಹೊಸದಿಲ್ಲಿ: ತಾನೆಂದೂ ಜಿಹಾದ್‌ಗೆ  ಬೆಂಬಲ ನೀಡಿಲ್ಲ ಎಂದು ಸ್ಪಷ್ಟಪಡಿಸಿರುವ ವಿವಾದಿತ ಇಸ್ಲಾಂ ಪ್ರಚಾರಕ  ಝಾಕೀರ್‌ ನಾಯ್ಕ್‌ ನಾನು ಮುಸ್ಲಿಂ ಎಂಬ ಏಕೈಕಕಾರಣಕ್ಕಾಗಿ ನನ್ನನ್ನು  ಗುರಿಯಾಗಿಸಲಾಗಿದೆ ಎಂದು ಆರೋಪಿಸಿದ್ದಾನೆ. 

ಉಪನ್ಯಾಸಗಳ ಮೂಲಕ ಭಯೋತ್ಪಾ ದನೆಗೆ  ದುಷ್ಪ್ರೇರಣೆ  ನೀಡಿದ  ಆರೋಪಕ್ಕೊಳಗಾಗಿರುವ  ವಿವಾದಿತ ಇಸ್ಲಾಂ  ಪ್ರಚಾರಕ ಝಾಕೀರ್‌ ವಿರುದ್ಧ  ರೆಡ್‌ ಕಾರ್ನರ್‌ ನೋಟಿಸ್‌  ಜಾರಿಗೊಳಿಸುವಂತೆ  ಎನ್‌ಐಎ  ಇಂಟರ್‌ಪೋಲ್‌ಗೆ  ಮನವಿ ಮಾಡಿಕೊಂಡಿರುವ  ಹಿನ್ನೆಲೆಯಲ್ಲಿ  ಝಾಕೀರ್‌  ತನ್ನ  ವಿರುದ್ಧದ  ಆರೋಪಗಳೆಲ್ಲವನ್ನೂ  ನಿರಾಕರಿಸಿ  ಇಂಟರ್‌ಪೋಲ್‌ಗೆ  ಪತ್ರವೊಂದನ್ನು  ಬರೆದಿದ್ದಾನೆ.

2016ರ ಜುಲೈನಲ್ಲಿ  ಢಾಕಾದಲ್ಲಿ ನಡೆದ ಭಯೋತ್ಪಾದಕ ದಾಳಿಯ  ಬಳಿಕ  ಝಾಕೀರ್‌ನ ಕಾರ್ಯಚಟು ವಟಿಕೆಗಳ  ಮೇಲೆ ತನಿಖಾ ಸಂಸ್ಥೆಗಳು ನಿಗಾ ಇರಿಸಿದ್ದವು. ಝಾಕೀರ್‌   ಧರ್ಮ ಪ್ರಚಾರಾರ್ಥವಾಗಿ  ನಡೆಸುತ್ತಿರುವ  ಉಪನ್ಯಾಸಗಳು ಭಯೋತ್ಪಾದನೆಯತ್ತ  ಯುವ ಕರು  ಆಕರ್ಷಿತರಾಗಲು  ಪ್ರೇರಣೆ ನೀಡುತ್ತಿವೆ ಎಂಬ ಆರೋಪ ಕೇಳಿ ಬಂದಿದ್ದವು.  ಢಾಕಾ ದಾಳಿಯ ಸಂಬಂಧ  ಬಂಧಿತ ನಾಗಿದ್ದ  ಆರೋಪಿಯೋರ್ವ  ಝಾಕೀರ್‌ ನ ಉಪ ನ್ಯಾಸಗಳಿಂದ  ಪ್ರೇರಿತನಾಗಿ ತಾನು ಈ ಕೃತ್ಯ ಎಸಗಿರುವುದಾಗಿ ಹೇಳಿಕೆ ನೀಡಿದ ಬಳಿಕ ಎನ್‌ಐಎ ಸಹಿತ ವಿವಿಧ  ತನಿಖಾ ಸಂಸ್ಥೆಗಳು ಝಾಕೀರ್‌  ವಿರುದ್ಧ  ತನಿಖೆಯನ್ನು  ಕೈಗೆತ್ತಿಕೊಂಡಿದ್ದವು. 

ಅಲ್ಲದೆ  ಝಾಕೀರ್‌ ವಿರುದ್ಧ  ಅಕ್ರಮ ಹಣ ವರ್ಗಾವಣೆಗೆ  ಸಂಬಂಧಿಸಿದಂತೆ  ಜಾರಿ ನಿರ್ದೇಶನಾಲ ಯವೂ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿ ಕೊಂಡಿತ್ತು.  ಅದರಂತೆ  ಎನ್‌ಐಎ  ಈ  ವರ್ಷದ  ಮೇನಲ್ಲಿ  ಈತನ  ವಿರುದ್ಧ  ರೆಡ್‌ ಕಾರ್ನರ್‌ ನೋಟಿಸ್‌  ಜಾರಿಗೊಳಿಸುವಂತೆ  ಇಂಟರ್‌ಪೋಲ್‌ಗೆ  ಮನವಿ ಮಾಡಿಕೊಂಡಿತ್ತು. 

 ಕಳೆದ  25 ವರ್ಷಗಳಿಂದ ವಿಶ್ವದ  ಹಲವಾರು ದೇಶಗಳಲ್ಲಿ  ಇಸ್ಲಾಂ ಪ್ರಚಾರದಲ್ಲಿ  ತನ್ನನ್ನು  ತಾನು ತೊಡಗಿಸಿ ಕೊಂಡಿದ್ದು ಈ ಎಲ್ಲ ದೇಶಗಳೂ ನನ್ನನ್ನು  ಸ್ವಾಗತಿಸಿ ವೆಯಲ್ಲದೆ ಗೌರವಿಸುತ್ತಾ ಬಂದಿವೆ. ಆದರೆ  ಭಾರತದಲ್ಲಿ  ತನಿಖಾ ಸಂಸ್ಥೆಗಳು ತನ್ನ ನೇತೃತ್ವದ ಎನ್‌ಜಿಒ ಆಗಿರುವ ಇಸ್ಲಾಮಿಕ್‌ ರಿಸರ್ಚ್‌  ಫೌಂಡೇಶನ್‌ನ್ನು  ನಿಷೇಧಿಸುವ ಮೂಲಕ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದೆ ಎಂದು  ಝಾಕೀರ್‌ ತನ್ನ  ಪತ್ರದಲ್ಲಿ  ಆರೋಪಿಸಿದ್ದಾನೆ.

ನನ್ನ  ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌  ಜಾರಿಗೊಳಿಸಿ ದಲ್ಲಿ  ಯಾವುದೇ ದೇಶದ  ಕಾನೂನು ಜಾರಿ ಸಂಸ್ಥೆಗಳು  ನನ್ನನ್ನು  ಬಂಧಿಸಿ ಭಾರತಕ್ಕೆ  ಗಡೀಪಾರು ಮಾಡುವ ಸಾಧ್ಯತೆ ಇದೆ ಎಂದೂ   ತನ್ನ  ಪತ್ರದಲ್ಲಿ  ಆತಂಕ ವ್ಯಕ್ತಪಡಿಸಿದ್ದಾನೆ.  ಸದ್ಯ  ಈತ ಮಲೇಶ್ಯಾದಲ್ಲಿದ್ದಾನೆ ಎನ್ನಲಾಗಿದೆ.  

ಟಾಪ್ ನ್ಯೂಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-uv-fusion

Devotion: ಭಕ್ತಿಯ ಅರ್ಥವಾದರೂ ಏನು?

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.