ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಹೊಸ ನಿಬಂಧನೆ

2020-21ರ ತೆರಿಗೆ ರಿಟರ್ನ್ಸ್ ನಿಯಮಾವಳಿಗಳಲ್ಲಿ ತಿದ್ದುಪಡಿ ತಂದಿರುವ ಐಟಿ ಇಲಾಖೆ

Team Udayavani, Jan 6, 2020, 6:45 AM IST

34

ಹೊಸದಿಲ್ಲಿ: ವೈಯಕ್ತಿಕವಾಗಿ ಆದಾಯ ತೆರಿಗೆ ರಿಟರ್ನ್ಸ್ ನಿಯಮಗಳಲ್ಲಿ ಕೆಲವು ಬದ ಲಾವಣೆಗಳನ್ನು ಮಾಡಿರುವ ಕೇಂದ್ರ ಆದಾಯ ತೆರಿಗೆ ಇಲಾಖೆ, ವಾರ್ಷಿಕವಾಗಿ 1 ಲಕ್ಷ ರೂ. ವಿದ್ಯುತ್‌ ಶುಲ್ಕ ಪಾವತಿಸುವವರಿಗೆ, ಜಂಟಿ ಮಾಲಕತ್ವದಲ್ಲಿ ಮನೆಯನ್ನು ಹೊಂದಿರುವವರಿಗೆ ಹಾಗೂ ವಿದೇಶ ಪ್ರವಾಸಕ್ಕಾಗಿ 2 ಲಕ್ಷ ರೂ. ಗಳಿಗಿಂತಲೂ ಅಧಿಕವಾಗಿ ಖರ್ಚು ಮಾಡಿದ ವರಿಗೆ “ಐಟಿಆರ್‌-1′, “ಐಟಿಆರ್‌-4′ ಅರ್ಜಿ ನಮೂನೆಗಳು ಅನ್ವಯಿಸುವುದಿಲ್ಲ ಎಂದಿದೆ.

ಇದಕ್ಕಾಗಿ, 2020-21ರ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ನಿಯಮಗಳಲ್ಲಿ ತಿದ್ದುಪಡಿ ತಂದು ಜ. 3ರಂದು ಆದೇಶ ಹೊರಡಿಸಲಾಗಿದೆ. ಹೊಸ ನಿಯಮಗಳು ಜ. 1ರಿಂದ ಜಾರಿಗೆ ಬಂದಿವೆ.

ಯಾವ ಫಾರ್ಮ್ ಯಾರಿಗೆ?
ವಾರ್ಷಿಕವಾಗಿ 50 ಲಕ್ಷ ರೂ.ಗಳೊಳಗೆ ಆದಾಯ ಹೊಂದಿರುವವರು ಹಾಗೂ ಸಾಮಾನ್ಯ ನಿವಾಸಿಗಳು “ಐಟಿಆರ್‌-1 ಸಹಜ್‌’ ಮೂಲಕ ತೆರಿಗೆ ರಿಟರ್ನ್ಸ್ ಸಲ್ಲಿಸಬಹುದು. ಇನ್ನು, “ಐಟಿಆರ್‌-1 ಸುಗಮ್‌’ ಮೂಲಕ ಹಿಂದೂ ಅವಿಭಕ್ತ ಕುಟುಂಬದ ಸದಸ್ಯರು ಹಾಗೂ 50 ಲಕ್ಷ ರೂ. ಮೀರದ ಆದಾಯ ಹೊಂದಿರುವ ವಾಣಿಜ್ಯ ಸಂಸ್ಥೆಗಳ ಪಾಲುದಾರರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬಹುದು. ಇದಲ್ಲದೆ, ವೃತ್ತಿಪರ ಉದ್ಯೋಗ ಅಥವಾ ವಾಣಿಜ್ಯ ಸಂಸ್ಥೆಯ ಮೂಲಕ ನಿಶ್ಚಿತ ಆದಾಯ ಹೊಂದಿರುವ ವ್ಯಕ್ತಿಗಳೂ “ಐಟಿಆರ್‌-1 ಸುಗಮ್‌’ ಮೂಲಕ ರಿಟರ್ನ್ಸ್ ಸಲ್ಲಿಸಬಹುದಾಗಿದೆ.

ಐಟಿಆರ್‌-1, ಐಟಿಆರ್‌-4 ಯಾರಿಗೆ ಅನ್ವಯವಾಗಲ್ಲ?
– ಮನೆ ಅಥವಾ ಮನೆ ಸಂಬಂಧಿತ ಸ್ಥಿರಾಸ್ತಿಗೆ ಜಂಟಿ ಮಾಲಕತ್ವ ಹೊಂದಿರುವ ವ್ಯಕ್ತಿಗಳಿಗೆ
– ತಮ್ಮ ಬ್ಯಾಂಕ್‌ ಖಾತೆಯಲ್ಲಿ 1 ಕೋಟಿ ರೂ.ಗಳಿಗಿಂತ ಹೆಚ್ಚಿನ ಠೇವಣಿ ಇಟ್ಟಿರುವವರು.
– ವಿದೇಶ ಪ್ರವಾಸಕ್ಕಾಗಿ 2 ಲಕ್ಷ ರೂ.ಗಳನ್ನು ಖರ್ಚು ಮಾಡಿರುವವರು.
– ವಾರ್ಷಿಕವಾಗಿ 1 ಲಕ್ಷ ರೂ.ಗಳಷ್ಟು ವಿದ್ಯುತ್‌ ಬಿಲ್‌ ಕಟ್ಟಿರುವವರು.

ಸದ್ಯದಲ್ಲೇ ಪ್ರಕಟನೆ
ಈವರೆಗೆ ಐಟಿಆರ್‌-1, ಐಟಿಆರ್‌-4 ಮೂಲಕ ತೆರಿಗೆ ರಿಟರ್ನ್ಸ್ ಸಲ್ಲಿಸುತ್ತಿದ್ದವರಿಗೆ ಪರಿಷ್ಕೃತ ನಿಯಮಗಳು ಅಡ್ಡಿಯಾದಲ್ಲಿ ಅಂಥವರಿ ಗಾಗಿಯೇ ಬೇರೊಂದು ಮಾದರಿಯ ಅರ್ಜಿ ಬಿಡುಗಡೆ ಮಾಡಲಾಗುತ್ತದೆ. ಆ ಕುರಿತಾಗಿ ಶೀಘ್ರ ದಲ್ಲಿಯೇ ಪ್ರಕಟನೆ ನೀಡಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಸಲ್ಲಿಸಲೇಬೇಕಾದ ದಾಖಲೆಗಳು
– ಆದಾಯ, ನಿಶ್ಚಿತ ಹೂಡಿಕೆಗಳು ಇನ್ನಿತರ ವ್ಯವಹಾರಗಳ ದಾಖಲೆಗಳು
– ಪಾಸ್‌ಪೋರ್ಟ್‌ ಇದ್ದಲ್ಲಿ ಅದರ ದಾಖಲೆಗಳು.
– 2 ಲಕ್ಷ ರೂ. ಮೀರಿದ ವಿದೇಶಿ ಪ್ರವಾಸ ಕೈಗೊಂಡಿದ್ದಲ್ಲಿ ಅದರ ವಿವರ
– 1 ಲಕ್ಷ ರೂ.ಗಿಂತ ಹೆಚ್ಚಿನ ವಿದ್ಯುತ್‌ ಶುಲ್ಕ ಪಾವತಿಸಿದ್ದಲ್ಲಿ ಅದರ ರಸೀದಿಗಳು
– ಬ್ಯಾಂಕ್‌ ಖಾತೆಗಳಲ್ಲಿ 1 ಕೋಟಿ ರೂ. ಠೇವಣಿ ಇಟ್ಟಿದ್ದರೆ ಅದಕ್ಕೆ ಪೂರಕವಾದ ದಾಖಲೆಗಳು

– ದುಬಾರಿ ವಿದ್ಯುತ್‌ ಶುಲ್ಕ, ಮನೆ ಜಂಟಿ ಮಾಲಕತ್ವ , ದುಬಾರಿ ವಿದೇಶ ಪ್ರವಾಸ ಮಾಡಿದವರಿಗೆ ಐಟಿಆರ್‌-1, ಐಟಿಆರ್‌ 4 ಅರ್ಜಿ ಅನ್ವಯವಾಗದು
– ಐಟಿಆರ್‌-1, ಐಟಿಆರ್‌-4 ಅನ್ವಯಿಸದವರಿಗೆ ಬೇರೊಂದು ಅರ್ಜಿ ನಮೂನೆ ಸದ್ಯದಲ್ಲೇ ಪ್ರಕಟ

ಟಾಪ್ ನ್ಯೂಸ್

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-NG

JEE; ಮಹಾರಾಷ್ಟ್ರ ರೈತನ ಮಗ ಮೇನ್‌ ಟಾಪರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-NG

JEE; ಮಹಾರಾಷ್ಟ್ರ ರೈತನ ಮಗ ಮೇನ್‌ ಟಾಪರ್‌

Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!

Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.