ಬಿಜೆಪಿಯಿಂದ ಹೊಸ ತಂತ್ರ; ಸಂಸದರ ಹಾಜರಾತಿ ಹಠಾತ್ ಪರಿಶೀಲನೆ
Team Udayavani, Oct 28, 2022, 10:15 PM IST
ನವದೆಹಲಿ: ಸಂಸದೀಯ ಸಮಿತಿ ಸಭೆಗಳಲ್ಲಿ ಸಂಸದರೆಲ್ಲರೂ ಭಾಗಿಯಾಗುವಂತೆ ನೋಡಿಕೊಳ್ಳಲು ಬಿಜೆಪಿ ಹೊಸ ತಂತ್ರವನ್ನು ಅನುಸರಿಸಿದೆ.
ಸಂಸದೀಯ ವ್ಯವಹಾರಗಳ ಸಚಿವರ ಕಾರ್ಯಾಲಯ ಮತ್ತು ಬಿಜೆಪಿ ಸಂಸದೀಯ ಪಕ್ಷದ ಕಚೇರಿಯ ಅಧಿಕಾರಿಗಳು ಸಂಸದೀಯ ಸಭೆ ನಡೆಯುತ್ತಿರುವಾಗ ದಿಢೀರ್ ಪ್ರವೇಶ ಮಾಡಿ, ಯಾವ ಸಂಸದರೆಲ್ಲ ಭಾಗಿಯಾಗಿದ್ದಾರೆ, ಯಾರು ಗೈರಾಗಿದ್ದಾರೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಿದೆ.
ಈ ಹಿಂದೆ ಪ್ರಧಾನಿ ಮೋದಿ ಅವರು ಸಭೆಯಲ್ಲಿ ಸಂಸದರೆಲ್ಲರೂ ಭಾಗಿಯಾಗುವಂತೆ ಖಡಕ್ ಸೂಚನೆ ನೀಡಿದ್ದರು.