ನೀರವ್ ಮೋದಿಯ ಆಲಿಬಾಗ್ ಬೀಚ್ ಬಂಗಲೆ ಕೆಡಹಲು ಮಹಾ ಸರಕಾರ ಆದೇಶ
Team Udayavani, Dec 7, 2018, 11:41 AM IST
ಮುಂಬಯಿ : 23,000 ಕೋಟಿ ರೂ. ಬ್ಯಾಂಕ್ ವಂಚನೆಗೈದು ವಿದೇಶಕ್ಕೆ ಪರಾರಿಯಾಗಿರುವ ಬಿಲಿಯಾಧಿಪತಿ ವಜ್ರಾಭರಣ ಉದ್ಯಮಿ ನೀರವ್ ಮೋದಿಯ ರಾಯಗಢ ಜಿಲ್ಲೆಯ ಆಲಿಬಾಗ್ನಲ್ಲಿ ಸಮುದ್ರಕ್ಕೆ ಮುಖ ಮಾಡಿಕೊಂಡಿರುವ ಐಷಾರಾಮಿ ಬೀಚ್ ಬಂಗಲೆಯನ್ನು ಕೆಡಹಲು ಮಹಾರಾಷ್ಟ್ರ ಸರಕಾರ ಆದೇಶ ಹೊರಡಿಸಿದೆ.
ನೀರವ್ ಮೋದಿ ಮಾತ್ರವಲ್ಲದೆ ರಾಜ್ಯದ ಕಟ್ಟಡ ನಿರ್ಮಾಣ ನಿಯಮಗಳನ್ನು ಕರಾವಳಿ ವಲಯ ನಿಯಮಗಳ ಉಲ್ಲಂಘನೆಗೈದು ಬಂಗಲೆಗಳನ್ನು ನಿರ್ಮಿಸಿಕೊಂಡಿರುವ ಇನ್ನೂ 58 ಮಂದಿ ಖಾಸಗಿ ಆಸ್ತಿಪಾಸ್ತಿ ಮಾಲಕರಿಗೆ ಕೂಡ ಅವರ ಅಕ್ರಮ ಕಟ್ಟಡಗಳನ್ನು ಕೆಡಹುವುದಕ್ಕೆ ನೊಟೀಸ್ ಜಾರಿ ಮಾಡಲಾಗಿದೆ ಎಂದು ಸರಕಾರಿ ವಕೀಲ ಪಿ ಬಿ ಕಾಕಡೆ ಅವರು ಚೀಫ್ ಜಸ್ಟಿಸ್ ನರೇಶ್ ಪಾಟೀಲ್ ಮತ್ತು ಜಸ್ಟಿಸ್ ಎಂ ಎಸ್ ಕಾರ್ಣಿಕ್ ಅವರನ್ನು ಒಳಗೊಂಡ ಬಾಂಬೆ ಹೈಕೋರ್ಟ್ ಪೀಠಕ್ಕೆ ತಿಳಿಸಿದರು.
ಪೀಠವು ಈ ಹಿಂದೆ ಈ ಸಂಬಂಧ ‘ಕ್ರಮ ತೆಗೆದುಕೊಂಡ ವರದಿ’ಯನ್ನು ಸಲ್ಲಿಸುವಂತೆ ಸರಕಾರಕ್ಕೆ ಹೊರಡಿಸಿದ್ದ ಆದೇಶಕ್ಕೆ ಅನುಗುಣವಾಗಿ ಅಕ್ರಮ ಕಟ್ಟಡ ಕೆಡಹುವ ನೊಟೀಸನ್ನು ಆಯಾ ಆಸ್ತಿಪಾಸ್ತಿಗಳ ಮಾಲಕರಿಗೆ ಜಾರಿ ಮಾಡಲಾಗಿದೆ ಎಂದು ಸರಕಾರಿ ವಕೀಲರು ಹೇಳಿದರು.
ರಾಯಗಢ ಜಿಲ್ಲೆಯ ಆಲಿಬಾಗ್ ಬೀಚ್ ಪಟ್ಟಣವು ದೇಶ-ವಿದೇಶಗಳ ಪ್ರವಾಸಿಗರ ಪ್ರಮುಖ ಆಕರ್ಷಣೆಯ ತಾಣವಾಗಿರುವುದರಿಂದಲೇ ಇಲ್ಲಿ ಸಮುದ್ರಕ್ಕೆ ಮುಖಮಾಡಿಕೊಂಡಿರುವ ಭಾರೀ ದೊಡ್ಡ ಕುಳಗಳ ಬಂಗಲೆಗಳು ಸಾಕಷ್ಟು ಸಂಖ್ಯೆಯಲ್ಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ