ಬಿಜೆಪಿ ನಾಯಕ ಕೈಲಾಶ್ ಪುತ್ರನ ಬ್ಯಾಟಾಟೋಪ!
Team Udayavani, Jun 27, 2019, 5:00 AM IST
ಇಂದೋರ್: ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಪುತ್ರ ಹಾಗೂ ಇಂದೋರ್ನ ಶಾಸಕ ಆಕಾಶ್ ವಿಜಯವರ್ಗೀಯ ಇಂದೋರ್ ನಗರ ಸಭೆ ಅಧಿಕಾರಿಗಳಿಗೆ ಬ್ಯಾಟ್ನಲ್ಲಿ ಹೊಡೆದಿದ್ದು, ಭಾರೀ ವಿವಾದಕ್ಕೀಡಾಗಿದೆ. ತನ್ನ ಬೆಂಬಲಿಗನ ಕಟ್ಟಡವೊಂದನ್ನು ಕೆಡವಲು ಹೊರಟಿದ್ದಕ್ಕಾಗಿ ಅಧಿಕಾರಿಗೆ ಆಕಾಶ್ ಹೊಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಆಕಾಶ್ನನ್ನು ಇಂದೋರ್ನ ಎಂಜಿ ರೋಡ್ ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆಕಾಶ್ ಜಾಮೀನು ನಿರಾಕರಿಸಲಾಗಿದೆ.
ಆಕಾಶ್ ಥಳಿಸಿದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ನಗರಸಭೆ ಸಿಬಂದಿ ಪ್ರತಿಭಟನೆ ನಡೆಸಿದ್ದಾರೆ. ವೀಡಿಯೋದಲ್ಲಿ ವಲಯ ಅಧಿಕಾರಿ ಧೀರಜ್ ಬೈಸ್ರನ್ನು ಕ್ರಿಕೆಟ್ ಬ್ಯಾಟ್ನಿಂದ ಹೊಡೆಯುತ್ತಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಅಷ್ಟೇ ಅಲ್ಲ, ಆಕಾಶ್ ಬೆಂಬಲಿಗರು ನಗರಸಭೆಗೆ ಸಂಬಂಧಿಸಿದ ವಾಹನಗಳ ಗಾಜುಗಳನ್ನೂ ಒಡೆದುಹಾಕಿದ್ದಾರೆ. ಕಟ್ಟಡವನ್ನು ಧ್ವಂಸಗೊಳಿಸುವುದಕ್ಕೆಂದು ಅಧಿಕಾರಿಗಳು ಆಗಮಿಸಿದಾಗ ಈ ಘಟನೆ ನಡೆದಿದೆ.