ವಿಪಕ್ಷ ಅವಿಶ್ವಾಸಕ್ಕೆ ಸೋಲಿನ ಅಪ್ಪುಗೆ


Team Udayavani, Jul 21, 2018, 6:00 AM IST

26.jpg

ಹೊಸದಿಲ್ಲಿ: ಟಿಡಿಪಿ, ಕಾಂಗ್ರೆಸ್‌, ಎನ್‌ಸಿಪಿ ನೇತೃತ್ವ ದಲ್ಲಿ ಮಂಡಿಸಲಾಗಿದ್ದ ಅವಿಶ್ವಾಸ ಗೊತ್ತುವಳಿಗೆ ಲೋಕಸಭೆಯಲ್ಲಿ ಸೋಲಾಗಿದೆ. ಅವಿಶ್ವಾಸದ ವಿರುದ್ಧ 325 ಮತ ಬಿದ್ದ ಹಿನ್ನೆಲೆಯಲ್ಲಿ ಗೊತ್ತುವಳಿ ತಿರಸ್ಕೃತವಾಗಿದೆ. ಅವಿಶ್ವಾಸ ಗೊತ್ತುವಳಿ ಪರ 126 ಮತ ಬಿದ್ದಿವೆ. ಸದನದಲ್ಲಿ ಒಟ್ಟು 451 ಸದಸ್ಯರಿದ್ದರು. ಶಿವಸೇನೆ ಇಡೀ ಅವಿಶ್ವಾಸ ನಿರ್ಣಯ ಪ್ರಕ್ರಿಯೆಯಿಂದ ದೂರ ಸರಿದರೆ, ಬಿಜೆಡಿ ಸದನ ಆರಂಭ ವಾಗುತ್ತಲೇ ಸಭಾತ್ಯಾಗ ನಡೆಸಿತು. ಎಐಎಡಿಎಂಕೆ ಸರಕಾರದ ಪರ ಮತ ಹಾಕಿತು. 12 ತಾಸು ಚರ್ಚೆಗೆ  ಉತ್ತರಿಸಿದ ಪ್ರಧಾನಿ ಮೋದಿ ತಮ್ಮ ವ್ಯಂಗ್ಯ- ಆಕ್ರೋಶಭರಿತ ಮಾತುಗಳಿಂದ ವಿಪಕ್ಷಗಳನ್ನು ಚುಚ್ಚಿದರು.

ವಿಪಕ್ಷಕ್ಕೆ ಅವಿಶ್ವಾಸದ ಇತಿಹಾಸವೇ ಇದೆ. ಸ್ವತ್ಛ ಭಾರತ, ಸುಪ್ರೀಂ ಕೋರ್ಟ್‌, ವಿಶ್ವಬ್ಯಾಂಕ್‌, ಚುನಾವಣಾ ಆಯೋಗ, ಇವಿಎಂ… ಯಾವುದರ ಮೇಲೂ ಅವರಿಗೆ ವಿಶ್ವಾಸವಿಲ್ಲ. ತಮ್ಮ ಮೇಲೆಯೇ ವಿಶ್ವಾಸ ಇಲ್ಲದವರು ನಮ್ಮ ಮೇಲೆ ಹೇಗೆ ವಿಶ್ವಾಸ ಇರಿಸಬಲ್ಲರು ಎಂದು ಪ್ರಶ್ನಿಸಿದ ಅವರು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಕಾಲೆಳೆದದ್ದು ವಿಶೇಷವಾಗಿತ್ತು. ಅವಿಶ್ವಾಸ ಗೊತ್ತುವಳಿಯ ಫ‌ಲಿತಾಂಶ ನಿರ್ಧಾರವಾಗುವ ಮೊದಲೇ, ಪ್ರಧಾನಿ ಕುರ್ಚಿಯಲ್ಲಿ ಕೂರುವ ಆಸಕ್ತಿ ಇರುವ ವ್ಯಕ್ತಿ ನನ್ನ ಬಳಿ ಬಂದು ಏಳು ಎಂದರು. ನನ್ನನ್ನು ಕುರ್ಚಿಯಿಂದ ಕೆಳಗಿಳಿಸಲು ಅವರಿಗೆ ಭಾರೀ ಆಸಕ್ತಿ. ಅಷ್ಟೊಂದು ತರಾತುರಿ ಏಕೆ ರಾಹುಲ್‌ಜೀ ಎಂದು ಪ್ರಶ್ನಿಸಿದಾಗ ಸದನ ನಗೆಗಡಲಲ್ಲಿ ಮುಳುಗಿತು. ನಮಗೆ ನೂರು ಕೋಟಿ ಜನರ ಮೇಲೆ ವಿಶ್ವಾಸವಿದೆ. ಯಾರನ್ನೂ ತುಷ್ಟೀಕರಿಸದೆ ಸಬ್‌ಕಾ ಸಾಥ್‌ ಸಬ್‌ ಕಾ ವಿಕಾಸ ಮಂತ್ರ ಪಠಿಸಿದ್ದೇವೆ. 

ನಾನು ಚೌಕೀದಾರನೂ ಹೌದು, ಭಾಗೀದಾರನೂ ಹೌದು. ಜನರ ದುಃಖವನ್ನು ಹಂಚಿಕೊಳ್ಳುವುದರಲ್ಲಿ ಭಾಗೀದಾರ, ಬಡವರ ದುಃಖದಲ್ಲಿ ಭಾಗೀದಾರ. ಆದರೆ ವ್ಯಾಪಾರಿಯಲ್ಲ. ನಿಮ್ಮಂತೆ ಅರಮನೆಯಲ್ಲಿ ಕುಳಿತಿಲ್ಲ ಎಂದೂ ಮೋದಿ ಹೇಳಿದರು. ತನ್ನನ್ನು ನೇರವಾಗಿ ನೋಡುತ್ತಿಲ್ಲ ಎಂಬ ರಾಹುಲ್‌ ಆರೋಪಕ್ಕೂ ಉತ್ತರಿಸಿದ ಮೋದಿ, ನಾನು ಬಡ ಕುಟುಂಬ ದಲ್ಲಿ ಹುಟ್ಟಿದವನು. ನಾನು ಕಾಮ್‌ಧಾರಿ, ಆದರೆ, ನೀವು ನಾಮ್‌ಧಾರಿ. ನಿಮ್ಮ ಕಣ್ಣುಗಳನ್ನು ಹೇಗೆ ನೋಡಲಿ ಎಂದು ಪ್ರಶ್ನಿಸಿದರು. ಅವಿಶ್ವಾಸ ನಿರ್ಣಯ ಎಂಬುದು ಕಾಂಗ್ರೆಸ್‌ ಸಂಸ್ಕೃತಿ. ಈ ಹಿಂದೆ ದೇವೇಗೌಡ, ಐ.ಕೆ. ಗುಜ್ರಾಲ್‌ ಸರಕಾರ ಬೀಳಿಸಿದ್ದೀರಿ. ಚಂದ್ರಶೇಖರ್‌ ಮತ್ತು ಚೌಧರಿ ಸಿಂಗ್‌ ಅವರಿಗೂ ನೀವು ಮಾಡಿದ್ದು ಇದೇ. ದೇಶದಲ್ಲಿ ರಾಜಕೀಯ ಅಸ್ಥಿರತೆ ಸೃಷ್ಟಿಸಲು ಇಂಥದ್ದನ್ನೆಲ್ಲ ಮಾಡುತ್ತೀರಿ ಎಂದು ತಿವಿದರು.

ಜುಮ್ಲಾ ಸ್ಟ್ರೈಕ್‌ಗೆ ಆಕ್ಷೇಪ: ಸೇನೆ ನಡೆಸಿದ ಸರ್ಜಿಕಲ್‌ ಸ್ಟ್ರೈಕ್‌ ಅನ್ನು ಜುಮ್ಲಾ ಸ್ಟ್ರೈಕ್‌ ಎಂದು ಅವಮಾನಿಸಿದ್ದೀರಿ. ನನ್ನನ್ನು ತೆಗಳಿ, ಆದರೆ ಸೇನೆಯನ್ನು ಅವಮಾನಿಸಬೇಡಿ ಎಂದು ರಾಹುಲ್‌ ವಿರುದ್ಧ ನೇರ ವಾಗ್ಧಾಳಿ ನಡೆಸಿದರು. ತಮ್ಮ ಭಾಷಣದಲ್ಲಿ ಚಂದ್ರಬಾಬು ನಾಯ್ಡು ವಿರುದ್ಧವೂ ಮೋದಿ ಮಾತಿನ ಚಾಟಿ ಬೀಸಿದರು. 

ಮುಖ್ಯಾಂಶಗಳು
ಚಾತಕ ಪಕ್ಷಿಯ ಬಾಯಲ್ಲಿ ಮಳೆ ನೀರು ನೇರವಾಗಿ ಬೀಳದಿದ್ದರೆ, ಮೋಡವನ್ನು ದೂಷಿಸಿ ಏನು ಪ್ರಯೋಜನ?

ಶಿವ ಭಕ್ತಿಯ ಪಠಣ ನಡೆಯುತ್ತಿದೆ. ನಾನೂ ಶಿವಭಕ್ತ. ನಿಮಗೆ ಶಿವ 2024ರಲ್ಲಿ ವಿಶ್ವಾಸ ಮತಕ್ಕೆ ಇನ್ನಷ್ಟು ಶಕ್ತಿ ನೀಡಲಿ.

ಚೀನ ರಾಯಭಾರಿಯನ್ನು ಭೇಟಿ ಮಾಡಿದ್ದನ್ನು ಮೊದಲು ನಿರಾಕರಿಸಿದ್ದ ಕಾಂಗ್ರೆಸ್‌ ಉಪಾಧ್ಯಕ್ಷ. ಬಳಿಕ ಒಪ್ಪಿಕೊಂಡರು.

ರಫೇಲ್‌ ವಿಷಯದಲ್ಲಿ ಸತ್ಯವನ್ನು ಯಾಕೆ ಮರೆಮಾಚಲಾಗುತ್ತಿದೆ? ದೇಶ ಸಂಬಂಧಿ ವಿಷಯದಲ್ಲಿ ಈ ರೀತಿ ಮಾತನಾಡುವುದು ಎಷ್ಟು ಸರಿ? ಎರಡೂ ದೇಶಗಳು ಇದನ್ನು ಖಂಡಿಸ ಬೇಕಾಯಿತು. ಯಾಕೆ ಇಂಥ ಕೆಲಸ ಮಾಡುತ್ತೀರಿ? ವಾಸ್ತವಾಂಶವಿಲ್ಲದೆ ಕೂಗಾಡುತ್ತೀರಿ. ನಿಮಗೆ ದೇವರು ಒಳ್ಳೆಯ ಬುದ್ಧಿ ನೀಡಲಿ. ಈ ಒಪ್ಪಂದ ಎರಡು ದೇಶಗಳ ಮಧ್ಯೆ ನಡೆದಿದೆ.

ದೇಶದ ಸೇನಾಧ್ಯಕ್ಷರ ಬಗ್ಗೆ ಹೀಗೆ ಮಾತನಾಡಬಹುದೇ? ನಿವೃತ್ತನಾಗುವ ಯೋಧನಿಗೆ ದೇಶಕ್ಕಾಗಿ ದುಡಿದ ಹೆಮ್ಮೆಯಿರುತ್ತದೆ. ಅದನ್ನು ನಾವು ಇಲ್ಲಿ ಕುಳಿತು ಊಹಿಸಲು ಅಸಾಧ್ಯ. ನಿಮ್ಮ ಎಲ್ಲ  ಬೈಗುಳ ತಿನ್ನಲಿಕ್ಕೆ ನಾನು ಸಿದ್ಧ. ಆದರೆ ಸೈನಿಕರನ್ನು ನಿಂದಿಸಬೇಡಿ. ಸರ್ಜಿಕಲ್‌ ಸ್ಟ್ರೈಕ್‌ ಅನ್ನು ಅನುಮಾನಿಸಬೇಡಿ.

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.