ಪೆಟ್ರೋಲ್ ದರ ಇಳಿಕೆಗೆ ಶಾಶ್ವತ ಪರಿಹಾರಕ್ಕೆ ಕೇಂದ್ರ ಚಿಂತನೆ: ಪ್ರಧಾನ
Team Udayavani, May 29, 2018, 3:49 PM IST
ಹೊಸದಿಲ್ಲಿ : ದೇಶದಲ್ಲಿ ನಿರಂತರ 16ನೇ ದಿನವಾಗಿ ಇಂದು ಕೂಡ ಪೆಟ್ರೋಲ್ ಮತ್ತು ಡೀಸಿಲ್ ದರಗಳು ಏರಿವೆ. ದಿಲ್ಲಿಯಲ್ಲಿ ಪೆಟ್ರೋಲ್ ಲೀಟರ್ ದರ 78.43 ರೂ. ಇದೆಯಾದರೆ ಮುಂಬಯಿಯಲ್ಲಿ ಅದು 86.24 ರೂ. ಇದೆ.
ಈ ನಡುವೆ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಏರುತ್ತಿರುವ ಇಂಧನ ದರಗಳನ್ನು ನಿಭಾಯಿಸಲು ಶಾಶ್ವತ ವ್ಯವಸ್ಥೆಯೊಂದನ್ನು ರೂಪಿಸುವ ಕುರಿತ ಸರಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಿದ್ದಾರೆ.
“ಮೇಲ್ನೋಟದ ಪರಿಹಾರವನ್ನು ನಾವು ಬಯಸುವುದಿಲ್ಲ; ದೀರ್ಘಾವಧಿಯ ಪರಿಹಾರದ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ’ ಎಂದು ಸಚಿವ ಪ್ರಧಾನ್ ಮಾಧ್ಯಮಕ್ಕೆ ಹೇಳಿದ್ದಾರೆ.
ನಿರಂತರವಾಗಿ ಏರುತ್ತಿರುವ ಇಂಧನೆ ಬೆಲೆಯನ್ನು ನಿಯಂತ್ರಿಸುವ ತುರ್ತು ಕ್ರಮವನ್ನು ಸರಕಾರ ಕೈಗೊಳ್ಳಬೇಕೆಂದು ವಿರೋಧ ಪಕ್ಷಗಳು ಮಾತ್ರವಲ್ಲದೆ ಸರಕಾರದ ಒಳಗಿನವರೂ ತೀವ್ರವಾದ ಒತ್ತಡ ಹೇರುವಂತೆ ಆಗ್ರಹಿಸುತ್ತಿದ್ದಾರೆ.
ಇಂಧನ ಬೆಲೆಯ ನಿರಂತರ ಏರಿಕೆಯನ್ನು ಖಂಡಿಸಿ ತುರ್ತು ನಿಯಂತ್ರಣ ಕ್ರಮ ಆಗ್ರಹಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರಿಗೆ ಉತ್ತರವಾಗಿ ಪ್ರಧಾನ್ ಅವರು, ಇಂಧನ ಬೆಲೆ ನಿಯಂತ್ರಣಕ್ಕೆ ರಾತ್ರಿ ಬೆಳಗಾಗುವುದರೊಳಗೆ ಪರಿಹಾರ ಕಾಣಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
“ಚಿದಂಬರಂ ಅವರು ಇನ್ನೂ ನಾಲ್ಕು ಮಂದಿ ಅರ್ಥಶಾಸ್ತ್ರಜ್ಞರೊಡಗೂಡಿ ನನ್ನೊಂದಿಗೆ ವಾದಿಸಬಹುದು; ನಾವು ನಮ್ಮ ಹೊಣೆಗಾರಿಕೆಯಿಂದ ಓಡಿ ಹೋಗುವುದಿಲ್ಲ; ಮುಂದಿನ ನಾಲ್ಕು – ಐದು ದಿನಗಳ ಮಟ್ಟಿಗಂತೂ ಇಂಧನ ಬೆಲೆಗಳು ಇಳಿಯುವುದಿಲ್ಲ’ ಎಂದು ಪ್ರಧಾನ ಹೇಳಿದರು.
ವಾರಗಳ ಹಿಂದಷ್ಟೇ ಚಿದಂಬರಂ ಅವರು “ದೇಶದಲ್ಲಿನ ಪೆಟ್ರೋಲ್ ಬೆಲೆಯನ್ನು 25 ರೂ.ಗೆ ಇಳಿಸಲು ಸಾಧ್ಯವಿದೆ; ಆದರೆ ಸರಕಾರ ಅದನ್ನು ಮಾಡುವುದಿಲ್ಲ’ ಎಂದು ಟೀಕಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!