ಕಪ್ಪು ಹಣ ಸುಲಭದಲ್ಲಿ ಬಿಳಿ ಮಾಡಲು ನೋಟು ಅಮಾನ್ಯ: ಲಾಲು
Team Udayavani, Nov 8, 2017, 3:30 PM IST
ಪಟ್ನಾ : ಕಪ್ಪು ಹಣವನ್ನು ಅತ್ಯಂತ ಸುಲಭದಲ್ಲಿ ಬಿಳಿ ಮಾಡುವ ಉದ್ದೇಶಕ್ಕಾಗಿ ನೋಟು ಅಮಾನ್ಯ ಕ್ರಮವನ್ನು ಮೋದಿ ಸರಕಾರ ಜಾರಿಗೆ ತಂದಿತು ಎಂದು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.
ನೋಟು ಅಮಾನ್ಯಕ್ಕೆ ವರ್ಷ ತುಂಬಿದ ದಿನವಾದ ಇಂದು ಲಾಲು ಅವರ ಆರ್ಜೆಡಿ ಪಕ್ಷ ಬಿಹಾರ ರಾಜ್ಯಾದ್ಯಂತ ಪ್ರತಿಭಟನಾ ಪ್ರದರ್ಶನಗಳನ್ನು ನಡೆಸಿತು.
“ಕಪ್ಪು ಹಣವನ್ನು ಅತ್ಯಂತ ಸುಲಭದಲ್ಲಿ ಬಿಳಿ ಮಾಡಲು ನೋಟು ಅಮಾನ್ಯವನ್ನು ಜಾರಿಗೆ ತರಲಾಯಿತು. ಇದನ್ನು ಜನಸಾಮಾನ್ಯರ ಹಿತದೃಷ್ಟಿಯಿಂದ ಜಾರಿಗೆ ತರಲಾಗಿದೆ ಎಂದು ಹೇಳುವ ಮೂಲಕ ಸರಕಾರ ಅವರನ್ನು ಮೂರ್ಖರನ್ನಾಗಿ ಮಾಡಿತು’ ಎಂದು ಲಾಲು ಹೇಳಿದರು.
ನೋಟು ಅಮಾನ್ಯಕ್ಕೆ ವರ್ಷ ತುಂಬಿದ ಇಂದಿನ ದಿನವನ್ನು ಕಾಲಾ ಧನ್ ವಿರೋಧಿ ದಿವಸ್ ಎಂದು ಆಚರಿಸುತ್ತಿರುವ ಬಿಜೆಪಿಯನ್ನು ಲಾಲು ಲೇವಡಿ ಮಾಡಿದರು.
ವರ್ಷದ ಹಿಂದೆ ಈ ದಿನ ಪ್ರಧಾನಿ ಮೋದಿ ಅವರು 500 ಮತ್ತು 1,000 ರೂ. ನೋಟುಗಳನ್ನು ಅಮಾನ್ಯ ಮಾಡುವ ನಿರ್ಧಾರ ಪ್ರಕಟಿಸಿದಾಗ ಇದು ಕಾಳದನವನ್ನು ಹೊರಹಾಕುವ ಅತ್ಯಂತ ಮಹತ್ವದ ಕ್ರಮವೆಂದು ವರ್ಣಿಸಿದ್ದರು. ಆದರೆ ಮೋದಿ ಸರಕಾರ ಈ ದಿನದ ವರೆಗೂ ಎಷ್ಟು ಕಾಳಧನವನ್ನು ಅರ್ಥ ವ್ಯವಸ್ಥೆಯಿಂದ ಹೊರಹಾಕಲಾಯಿತು ಎಂಬ ಲೆಕ್ಕವನ್ನು ಜನಸಾಮಾನ್ಯರಿಗೆ ನೀಡಿಲ್ಲ ಎಂದು ಲಾಲು ಟೀಕಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು