ಕ್ರೈಸ್ತ ಸನ್ಯಾಸಿನಿ ಶಂಕಾಸ್ಪದ ಸಾವು
Team Udayavani, Sep 10, 2018, 2:45 AM IST
ಹೊಸದಿಲ್ಲಿ/ಕೊಲ್ಲಂ: ಕೇರಳದ ಕೊಲ್ಲಂ ಜಿಲ್ಲೆಯ ಪಟ್ಟಣಪುರಂನಲ್ಲಿ ಭಾನುವಾರ ಕ್ರೈಸ್ತ ಸನ್ಯಾಸಿನಿ ಸಂಶಯಾಸ್ಪದವಾಗಿ ಅಸುನೀಗಿದ್ದಾರೆ. ಸಾವಿಗೀಡಾದ ಕ್ರೈಸ್ತ ಸನ್ಯಾಸಿನಿಯನ್ನು ಸೂಸನ್ (55) ಎಂದು ಗುರುತಿಸಲಾಗಿದೆ. ಅವರು ಮಲಂಕರ ಸಿರಿಯನ್ ಆರ್ಥಡಾಕ್ಸ್ ಚರ್ಚ್ನ ಆಡಳಿತಕ್ಕೊಳಪಟ್ಟ ಮೌಂಟ್ ತಾಬೊರ್ ದಯಾರಾ ಕಾನ್ವೆಂಟ್ಗೆ ಸೇರಿದ ಸನ್ಯಾಸಿನಿಯಾಗಿದ್ದರು. ಸಾವಿಗೀಡಾಗಿರುವ ಸನ್ಯಾಸಿನಿ ಕಾನ್ವೆಂಟ್ಗೆ ಸೇರಿದ ಶಾಲೆಯಲ್ಲಿ ಅಧ್ಯಾಪಕಿಯಾಗಿದ್ದರು. ಶಾಲೆ ಆವರಣದಲ್ಲಿರುವ ಬಾವಿಯಲ್ಲಿ ಭಾನುವಾರ ಬೆಳಗ್ಗೆ ಸೂಸನ್ರ ಮೃತದೇಹ ಪತ್ತೆಯಾಗಿದೆ.
ಸೂಸನ್ರ 2 ಮುಂಗೈಗಳಲ್ಲಿ ಗಾಯಗಳಿದ್ದವು. ಈ ಪೈಕಿ ಎಡ ಮುಂಗೈನಲ್ಲಿದ್ದ ಗಾಯ ಆಳವಾಗಿತ್ತು. ಅಸುನೀಗಲು ನಿಖರ ಕಾರಣ ಮರಣೋತ್ತರ ಪರೀಕ್ಷೆ ನಂತರವೇ ತಿಳಿಯಲು ಸಾಧ್ಯ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ. 22 ವರ್ಷಗಳ ಹಿಂದೆ ಕೊಟ್ಟಾಯಂ ಜಿಲ್ಲೆಯ ಸೈಂಟ್ ಪಿಯಸ್ ಕಾನ್ವೆಂಟ್ನಲ್ಲಿ ಕ್ರೈಸ್ತ ಸನ್ಯಾಸಿನಿ ಅಭಯಾ ಕೂಡ ಇದೇ ಮಾದರಿಯಲ್ಲಿ ಸಂಶಯಾಸ್ಪದವಾಗಿ ಅಸುನೀಗಿದ್ದರು. ಈ ಬಗ್ಗೆ ಸಿಬಿಐ ತನಿಖೆ ಕೂಡ ನಡೆದಿತ್ತು.
ಕೇರಳ ಶಾಸಕ ಜಾರ್ಜ್ ಹೇಳಿಕೆಗೆ ಖಂಡನೆ
ಅತ್ಯಾಚಾರಕ್ಕೆ ಒಳಗಾದ ಕ್ರೈಸ್ತ ಸನ್ಯಾಸಿನಿಯನ್ನು ಅವಮಾನಕರವಾಗಿ ನಿಂದಿಸಿದ ಶಾಸಕರ ಬಗ್ಗೆ ರಾಷ್ಟ್ರವ್ಯಾಪಿ ಆಕ್ರೋಶ ವ್ಯಕ್ತವಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಶಾಸಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇರಳ ಪೊಲೀಸ್ ಮಹಾನಿರ್ದೇಶಕರಿಗೆ ಮತ್ತೂಮ್ಮೆ ಪತ್ರ ಬರೆದಿರುವುದಾಗಿ ಹೇಳಿದ್ದಾರೆ. ಸಿಪಿಐ ಕಾರ್ಯದರ್ಶಿ ಡಿ.ರಾಜಾ ಮಾತನಾಡಿ., ಶಾಸಕ ಜಾರ್ಜ್ ಹೇಳಿಕೆ ಖಂಡನಾರ್ಹ. ಅವರ ವಿರುದ್ಧ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್