ಒಡಿಶಾ : ಸೇತುವೆಯಿಂದ ಉರುಳಿ ನದಿಗೆ ಬಿದ್ದ ಬಸ್ಸು; 12 ಸಾವು
Team Udayavani, Nov 21, 2018, 10:40 AM IST
ಕಟಕ್ : ಒಡಿಶಾದ ಕಟಕ್ ನ ಜಗತ್ಪುರ ಸಮೀಪದ ಮಹಾನದಿ ಸೇತುವೆಯಿಂದ ಬಸ್ಸು ಕೆಳಗೆ ಬಿದ್ದ ದುರಂತದಲ್ಲಿ 12 ಮಂದಿ ಮೃತಪಟ್ಟಿದ್ದಾರೆ. ನಿನ್ನೆ ಮಂಗಳವಾರ ಸಂಜೆ ಈ ದುರ್ಘಟನೆ ನಡೆದಿದ್ದಾಗ ಬಸ್ಸಿನಲ್ಲಿ 30 ಪ್ರಯಾಣಿಕರು ಇದ್ದರು.
ಅಪಘಾತ ಸಂಭವಿಸಿದೊಡನೆಯೇ ರಕ್ಷಣಾ ಕಾರ್ಯ ಭರದಿಂದ ಸಾಗಿತು.ಸ್ಥಳೀಯ ಪೊಲೀಸರು ಕೂಡ ಸ್ಥಳಕ್ಕೆ ಧಾವಿಸಿ ಬಂದು ರಕ್ಷಣಾ ಕಾರ್ಯಕ್ಕೆ ನೆರವಾದರು.
ಸೇತುವೆಯ ಮೇಲೆ ಎದುರುಗಡೆಯಿಂದ ಬರುತ್ತಿದ್ದ ಕೋಣವೊಂದಕ್ಕೆ ಬಸ್ಸು ಢಿಕ್ಕಿ ಹೊಡೆದಾಗ ಚಾಲಕನಿಗೆ ನಿಯಂತ್ರಣ ತಪ್ಪಿತು. ಪರಿಣಾಮವಾಗಿ ಬಸ್ಸು ಸೇತುವೆಯಿಂದ ಕೆಳಗೆ ಉರುಳಿ ನದಿಗೆ ಬಿತ್ತು ಎಂದು ವರದಿ ತಿಳಿಸಿದೆ.
CM ನವೀನ್ಪಟ್ನಾಯಕ್ ಅವರು ಈ ದುರ್ಘಟನೆಗೆ ಶೋಕ, ಆಘಾತ ವ್ಯಕ್ತಪಡಿಸಿದ್ದಾರೆ.