ಜಮ್ಮು ಕಾಶ್ಮೀರ ಅಸೆಂಬ್ಲಿ ಚುನಾವಣೆ: ಉಮರ್ ಅಬ್ದುಲ್ಲ ಸ್ವಾಗತ
Team Udayavani, Dec 28, 2018, 12:22 PM IST
ಶ್ರೀನಗರ : ಜಮ್ಮು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಗಳನ್ನು ನಡೆಸಲು ಕೇಂದ್ರ ಸಿದ್ಧವಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಲೋಕಸಭೆಯಲ್ಲಿ ಹೇಳಿಕೆ ನೀಡಿರುವುದನ್ನು ನ್ಯಾಶನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಉಮರ್ ಅಬ್ದುಲ್ಲ ಸ್ವಾಗತಿಸಿದ್ದಾರೆ.
ಕೇಂದ್ರ ಗೃಹ ಸಚಿವರು ಲೋಕಸಭೆಯಲ್ಲಿ ಮಾಡಿರುವ ಅತೀ ಮುಖ್ಯ ಮತ್ತು ಮಹತ್ವದ ಹೇಳಿಕೆ ಇದಾಗಿದೆ. ಲೋಕಸಭಾ ಚುನಾವಣೆಗಳ ಬಳಿಕವೇ ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಗಳನ್ನು ನಡೆಸಲಾಗುವುದೆಂಬ ಊಹಾಪೋಹಕ್ಕೆ ಈಗ ತೆರೆಬಿದ್ದಂತಾಗಿದೆ ಎಂದು ಉಮರ್ ಅಬ್ದುಲ್ಲ ಟ್ವಿಟರ್ನಲ್ಲಿ ಬರೆದಿದ್ದಾರೆ.